ಇಂಡಿ: ರಾತ್ರಿ ಸಮಯದಲ್ಲಿ ವಿದ್ಯುತ್ ಕಂಬಗಳ ಮೂಲಕ ನೇರವಾಗಿ ಕದ್ದು ವಾಯರ ಹುಕ್ಕು ಹಾಕಿ ವಿದ್ಯುತ್ ಕಳ್ಳತನ ಮಾಡುತ್ತಿರುವುದು ಮಹಾಪರಾಧವಾಗಿದೆ ಎಂದು ಹೆಸ್ಕಾಂ ಇಂಡಿ ಗ್ರಾಮಿಣ ಶಾಖೆಯ ಶಾಖಾಧಿಕಾರಿ ಆರ್.ವ್ಹಿ ಕುಂಬಾರ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಅವರು ತಾಲೂಕಿನ ಭುಯ್ಯಾರ ಹಾಗು ಹಿರೇಬೆವನೂರ, ನೆಹರು ನಗರದಲ್ಲಿ ವಿದ್ಯುತ್ ಬಾಕಿ ವಸೂಲಿ ಹಾಗೂ ಅನಧಿಕೃತ ವಿದ್ಯುತ್ ಕಾರ್ಯಚರಣೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳ್ಳತನದಿಂದಾಗಿ ವಿದ್ಯುತ್ ಪೊಲಾಗಿ ನಮ್ಮ ಇಲಾಖೆಗೆ ಹೆಚ್ಚಿನ ಹೊರೆ ಬೀಳುತ್ತಿರುವುದರಿಂದ ವಿದ್ಯುತ್ ಕಳ್ಳತನ ಮಾಡಬಾರದು. ಒಂದು ವೇಳೆ ವಾಮ ಮಾರ್ಗದಿಂದ ವಿದ್ಯುತ್ ಬಳಕೆ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಂಡು ಭಾರಿ ದಂಡ ವಿಧಿಸಲಾಗುವುದು. ಆದ್ದರಿಂದ ದಯವಿಟ್ಟು ಯಾರು ಕಳ್ಳತನ ಮಾಡಲು ಮುಂದಾಗಬಾರದು ಎಂದರು.
ಈ ವೇಳೆ ಅನಧಿಕೃತವಾಗಿ ಬಳಕೆ ಮಾಡುತ್ತಿದ್ದ ವಾಟರ್ ಹೀಟರ್ ಹಾಗೂ ವಾಯರ್ ವಶಪಡಿಕೊಂಡರು. ಇದರ ಜೊತೆಯಲ್ಲಿ ಗ್ರಾಮಿಣ ಭಾಗದ ಜನರಿಗೆ ವಿದ್ಯುತ ಬಳಕೆ ಕುರಿತು ಅರಿವು ಮೂಡಿಸಿದರು.
ಕಾರ್ಯಚರಣೆಯಲ್ಲಿ ಮಲ್ಲಿಕಾರ್ಜುನ ಮಾಶಾಳ, ಕಲ್ಲಪ್ಪ ಬಜಂತ್ರಿ, ಮಲ್ಲು ಬೆಳ್ಳಿಹಾಳ, ವಿಜಯ ಧನಗೊಂಡ, ವಿವೇಕ ಖೇಡಗಿ, ಸಲೀಂ ಕೊರಬು, ರಾಜಕುಮಾರ ವಾಲಿಕಾರ ಸೇರಿದಂತೆ ಅನೇಕ ಸಿಬ್ಬಂದಿ ವರ್ಗದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

