ವಿಜಯಪುರ: ಭಾರತೀಯ ಪುರಾತನ ವೈದ್ಯ ಪದ್ಧತಿ ಆಯುರ್ವೇದ ಈಗ ವಿಶ್ವದೆಲ್ಲೆಡೆ ಜನಪ್ರೀಯವಾಗಿದೆ ಎಂದು ಯರನಾಳ ಮತ್ತು ಉಕ್ಕಲಿ ವಿರಕ್ತಮಠದ ಶ್ರೀ ಗುರು ಸಂಗನಬಸವ ಮಹಾಸ್ವಾಮೀಜಿ ಹೇಳಿದ್ದಾರೆ.
ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ ಅಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ರವಿವಾರ ನಡೆದ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ ಸ್ನೇಹ ಮಾಗಮ- 2023 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವೈದ್ಯರು ನಮ್ಮ ಭಾರತೀಯ ಪುರಾತನ ವೈದ್ಯಪದ್ಧತಿಯಾಗಿರುವ ಆಯುರ್ವೇದವನ್ನು ಜನಸಾಮಾನ್ಯರಿಗೆ ತಲುಪಿಸಬೇಕು. ಈ ಕ್ಷೇತ್ರದಲ್ಲಿರುವ ಚಿಕಿತ್ಸಾ ವಿಧಾನಗಳನ್ನು ಹೆಚ್ಚೆಚ್ಚು ಪ್ರಚಾರ ಮಾಡುವ ಮೂಲಕ ತಾವೂ ಕೂಡ ಹೆಸರು ಬೆಳೆಯಬೇಕು. ಬಿ.ಎಲ್.ಡಿ.ಇ ಸಂಸ್ಥೆಯ ಸಂಸ್ಥಾಪಕರಾದ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ, ಪೂಜ್ಯ ಬಂಥನಾಳ ಸ್ವಾಮೀಜಿ, ದಿ. ಬಿ. ಎಂ. ಪಾಟೀಲ ಅವರ ಆಶೀರ್ವಾದದಿಂದ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಆಯುರ್ವೇದ ಮಹಾವಿದ್ಯಾಲಯ ಇನ್ನೂ ಉನ್ನತ ಸ್ಥಾನಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಮೈಸೂರಿನ ಸರಕಾರಿ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಕೆ. ಎಸ್. ರಾಧಾಕೃಷ್ಣ ರಾಮರಾವ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದವತಿಯಿಂದ ಬಿ. ಎ. ಎಂ. ಎಸ್ ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಡಾ. ವೈಷ್ಣವಿ ಗಣೇಶಕರ ಅವರನ್ನು ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿ. ಎಲ್. ಡಿ. ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಸಂಘಧ ಉಪಾದ್ಯಕ್ಷ ಡಾ. ಬಿ. ಬಿ. ಪಾಟೀಲ ಮತ್ತು 250ಕ್ಕೂ ಹೆಚ್ಚು ವೈದ್ಯರು ಉಪಸ್ತಿತರಿದ್ದರು.
ಕಲರ್ಸ ಕನ್ನಡ ವಾಹಿನಿಯ ಬಾಲ ಗಾಯಕಿಯಾದ ಮಹನ್ಯಾ ಪಾಟೀಲ, ವಿಜಯಪುರದ ಖ್ಯಾತ ಗಾಯಕ ವೀರೇಶ ವಾಲಿ ಅದ್ಬುತ ಗಾಯನಗಳ ಮೂಲಕ ಪ್ರೇಕ್ಷರನ್ನು ರಂಜಿಸಿದರು. ರತ್ನಮಾಲಾ ಅಕಾಡೆಮಿಯಿಂದ ಭರತ ನೃತ್ಯ ಪ್ರದರ್ಶನ ನಿಡಲಾಯಿತು. ಖ್ಯಾತ ಹಾಸ್ಯ ಕಲಾವಿದ ಪ್ರಶಾಂತ ಚೌಧರಿ ಎಲ್ಲರನ್ನು ತಮ್ಮ ಹಾಸ್ಯಚಟಾಕಿಯಿಂದ ನಗೆಗೆಡಲಲ್ಲಿ ತೆಲಿಸಿದರು.
ಸಂಘಧ ಸದಸ್ಯ ಕಾರ್ಯದರ್ಶಿ ಡಾ. ಶ್ರೀಶೈಲ ಪಾಟೀಲ ಸ್ವಾಗತಿಸಿದರು. ಡಾ. ಎಂ. ಎ. ಹೀರೇಮಠ ವಂದಿಸಿದರು. ಡಾ. ರೇಣುಕಾ ತೆನಹಳ್ಳಿ ಮತ್ತು ಡಾ. ಡಿ. ಎನ್. ಧರಿ ನಿರೂಪಿಸಿದರು.

