Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕನ್ನಡ ಕಸ್ತೂರಿ
ವಿಶೇಷ ಲೇಖನ

ಕನ್ನಡ ಕಸ್ತೂರಿ

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನವೆಂಬರ್ ಒಂದರಂದು ಕರ್ನಾಟಕದ, ಕನ್ನಡ ಜನರ ಪಾಲಿಗೆ ಒಂದು ವಿಶೇಷವಾದ ದಿನ. ಅಂದು ರಾಜ್ಯದ ಎಲ್ಲೆಡೆ ತುಂಬಾ ವಿಜೃಂಭಣೆಯಿಂದ , ಸಡಗರದಿಂದ ನಾಡ ಹಬ್ಬವನ್ನು ಆಚರಿಸಲಾಗುತ್ತದೆ. ಕನ್ನಡ
ನಾಡಹಬ್ಬ , ಕನ್ನಡಮ್ಮನ ಆಚರಣೆ ಎಂಬುದಾಗಿ ಸಹಾ ಆಚರಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಈ ಹಬ್ಬವನ್ನು ನವಂಬರ್ ಮಾಸ ಪೂರ್ತಿ ಆಚರಣೆ ಮಾಡುವ ಸಂಪ್ರದಾಯ ಬೆಳೆದು ಬಂದಿದೆ. ಕವಿ ನಿಸ್ಸಾರ್ ಅಹಮದ್ ರವರು ಹೇಳಿರುವ ಹಾಗೆ, ಕನ್ನಡ ತಾಯಿಯ ಉತ್ಸವ ನಿತ್ಯವೂ ನಡೆಯಬೇಕು.” ನಿತ್ಯೋತ್ಸವ ತಾಯಿ ನಿತ್ಯೋತ್ಸವ” ಎಂಬ ಪ್ರತಿಧ್ವನಿ ಎಲ್ಲಾ ಕಡೆ ಮೊಳಗ ಬೇಕು.

ನಮ್ಮ ನೆಚ್ಚಿನ ವಿಶ್ವಕವಿ ಕುವೆಂಪುರವರು ಹೇಳಿರುವ ಹಾಗೆ “ಕನ್ನಡವೆ ಸತ್ಯ ಕನ್ನಡವೇ ನಿತ್ಯ”. ನಿತ್ಯವೂ ಆಕೆಯ ಉಪಾಸನೆ, ಅರ್ಚನೆ ನಡೆಯಲೇ ಬೇಕು. ಆಕೆ ನಿತ್ಯ ಸುಮಂಗಲಿ. ಅದಕ್ಕಾಗಿಯೇ ಎಂಬಂತೆ ನಮ್ಮ ಕನ್ನಡ ಧ್ವಜವನ್ನು ಕೆಂಪು ಹಳದಿ ಬಣ್ಣದಿಂದ ಮಾಡಲಾಗಿದೆ. ಅದು ಅರಿಶಿನ ಕುಂಕುಮದ ಸಂಕೇತವಾಗಿದೆ. ಅಷ್ಟೆ ಅಲ್ಲ ಕೆಂಪು ನಮ್ಮ ಪರಾಕ್ರಮವನ್ನು ಮತ್ತು ಹಳದಿ ನಮ್ಮ ಶಾಂತಿ ಮತ್ತು ಸ್ನೇಹ ಸಂಕೇತವನ್ನು ತಿಳಿಸುತ್ತೆ. ಇಂತಹ ಅರ್ಥಗರ್ಭಿತ ಭಾವುಟವನ್ನು ನಮಗೆ ಕೊಟ್ಟ ಮ.ರಾಮಮೂರ್ತಿಯವರನ್ನು ನಾವು ಸದಾ ನೆನೆಯ ಬೇಕು.

” ಕರ್ನಾಟಕ” ಎಂಬ ಹೆಸರೆ ಒಂದು ಧೀಮಂತ ಶಕ್ತಿ.
ಪ್ರಪ್ರಥಮವಾಗಿ 1956 ರ ನವೆಂಬರ್ ಒಂದರಂದು
ಈ ರಾಜ್ಯ ರಚನೆಯಾಯಿತು. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವನ್ನು ಸ್ಥಾಪನೆ ಮಾಡಿದ್ದು ಈಗ ಇತಿಹಾಸ. ಇದರಲ್ಲಿ ರಾಜ್ಯದ ಮೂರು ಮುಖ್ಯ ಪ್ರದೇಶಗಳಾದ ಮೈಸೂರು ಪ್ರದೇಶ, ಉತ್ತರ ಕರ್ನಾಟಕ ಹಾಗು ಮಲೆನಾಡಿನ ಪ್ರದೇಶಗಳು ಒಳಗೊಂಡಿದ್ದವು. ಈ ಕಾರ್ಯವನ್ನು ಸಾಕಾರಗೊಳಿಸಲು ಕರ್ನಾಟಕ ಏಕೀಕರಣ ಚಳುವಳಿ ಮಾಡಲು 1905 ರಲ್ಲೇ ಪ್ರಾರಂಭ ಮಾಡಿದವರು ಆಲೂರು ವೆಂಕಟರಾಯರು. ರಾಜ್ಯವನ್ನು ಏಕೀಕರಿಸುವ ಕನಸ್ಸನ್ನು ಪ್ರಥಮವಾಗಿ ಕಂಡ ಮಹಾನ್ ವ್ಯಕ್ತಿ ಅವರು.
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂಬ ಕಹಳೆಯನ್ನು ಹುಯಿಲ್ಗೋಳ್ ನಾರಾಯಣ ರಾವ್ ಕನ್ನಡದ ಕಿಚ್ಚನ್ನು ಹಚ್ಚಿದ ಮತ್ತೊಬ್ಬ ಮಹಾನ್ ವ್ಯಕ್ತಿ. ಇವರಿಬ್ಬರೂ ಪ್ರಾತಃಸ್ಮರಣೀಯರು. .
ಕನ್ನಡ ಭಾಷೆ ಮಾಡನಾಡುವ ಪ್ರದೇಶಗಳನ್ನು ಒಂದು ಮಾಡಿ 1956 ನವಂಬರ್ ನಲ್ಲಿ ಮೈಸೂರು ರಾಜ್ಯ ಸ್ಥಾಪನೆ ಆದಾಗ ಅದು ಕರ್ನಾಟಕದ ಸಮಗ್ರ
ಚಿತ್ರಣವನ್ನು ಒಳಗೊಂಡಿಲ್ಲವಾದ್ದರಿಂದ ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದವರು ಮೈಸೂರು ಎಂಬ ಹೆಸರಿಗೆ ಒಲವು ತೋರಲ್ಲಿಲ್ಲ. ಅವರ ತರ್ಕ್ಕಕ್ಕೆ ಅನುಗುಣವಾಗಿ ಕನ್ನಡ ಭಾಷೆ ಮಾತನಾಡುವ ಪ್ರದೇಶಕ್ಕೆ
” ಕರ್ನಾಟಕ” ಎಂಬ ಮರು ನಾಮಕರಣವನ್ನು ನವಂಬರ್ ೧, 1973 ರಲ್ಲಿ ಅಂದಿನ ಧೀಮಂತ ನಾಯಕ ಹಾಗೂ ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳಾಗಿದ್ದ ದಿವಂಗತ ದೇವರಾಜ ಅರಸು ಅವರು ಮಹತ್ವದ ನಿರ್ಧಾರ ಪ್ರಕಟಿಸಿ ಈ ರಾಜ್ಯದ ಹೆಸರನ್ನು ” ಕರ್ನಾಟಕ ” ಎಂದು ಬದಲಾಯಿಸಿದರು. ಅಂದಿನಿಂದ ಈ ರಾಜ್ಯ ಸಮಗ್ರ ಕರ್ನಾಟಕವಾಗಿ ಎಲ್ಲಾ ರೀತಿಯಲ್ಲೂ ಸಂಪತ್ ಭರಿತವಾಗಿ ಕಂಗೊಳಿಸುತ್ತಾ ಇದೆ.
ಹಾಗಾಗಿಯೇ ಕುವೆಂಪು ಅವರು ಹೇಳಿರುವ ರೀತಿ
ಭಾರತ ಜನನಿಯ ತನುಜಾತೆ
ಜಯಹೇ ಕರ್ನಾಟಕ ಮಾತೆ
ಎನ್ನುವುದು ನಿಜಕ್ಕೂ ಅನ್ವರ್ಥ ಆಗಿದೆ.

ಇಂದಿಗೆ ನಮ್ಮ ರಾಜ್ಯದ ಹೆಸರು “ಕರ್ನಾಟಕ ” ಎಂದು ಮರುನಾಮಕರಣ ಆಗಿ ಐವತ್ತು ವರ್ಷಗಳು ತುಂಬಿ ಸ್ವರ್ಣ ಮಹೋತ್ಸವದ ಸಂಬ್ರಮದಲ್ಲಿ ಇದ್ದೇವೆ. ನವೆಂಬರ್ ಒಂದರಿಂದ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಈ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಕರ್ನಾಟಕ ಸರಕಾರ , ಅನೇಕ ಸಂಘ ಸಂಸ್ಥೆಗಳು, ಕಚೇರಿಗಳಲ್ಲಿ ಅಷ್ಟೇ ಏಕೆ ನಮ್ಮ ಕಥಾ ಅರಮನೆಯಲ್ಲಿ ಸಹಾ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಕನ್ನಡ ಭಾಷೆಯ ಬೆಳಸುವ ಉಳಿಸುವ ಬಗ್ಗೆ ನನ್ನ ಅನಿಸಿಕೆಗಳು.

ನಮ್ಮ ಕನ್ನಡನಾಡು ಶ್ರೀ ಗಂಧದ ಬೀಡು. ಕರುನಾಡು.ಕನ್ನಡಾಂಬೆಯ ನಾಡು. ಹಚ್ಚ ಹಸಿರಿನ , ಸುಂದರ ಬೆಟ್ಟ ಗುಡ್ಡಗಳ, ನದಿಗಳು ಹರಿಯುವ, ಕಲೆ ಸಾಹಿತ್ಯ ಸಂಸ್ಕೃತಿ ಸಂಗೀತದ ತವರು ಮನೆ.
ಈ ನಾಡು ಅನೇಕ ಸಾಧು ಸಂತರು, ದಾಸ ವರೇಣ್ಯರು ,
ಶಿವಶರಣರು, ಕವಿಗಳು, ರಾಜಾಧಿ ರಾಜರಗಳು, ರಾಜಕೀಯ ಮುಸ್ತದ್ಧಿಗಳು, ಹೆಸರಾಂತ ಕಲಾವಿದರು, ಕ್ರೀಡಾಪಟುಗಳು, ಕೈಗಾರಿಕಾ ಉದ್ಯಮಿಗಳು, ಸಮಾಜ ಸೇವಾ ಧುರೀಣರು, ಮಠಾಧಿಪತಿಗಳು , ಸುಪ್ರಸಿದ್ಧ ವಿಶ್ವ ವಿದ್ಯಾನಿಲಯಗಳು, ಶಿಕ್ಷಣ ತಜ್ಞರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದವರು , ಹೆಸರಾಂತ ವೈದ್ಯಾಧಿಕಾರಿಗಳು ವಿಶ್ವ ಕಂಡ ಶ್ರೇಷ್ಠ ಇಂಜಿನಿಯರ್ ಗಳು ಎಲ್ಲಕ್ಕಿಂತ ಮಿಗಿಲಾಗಿ ” ಸಹೃದಯ ಕನ್ನಡಿಗರನ್ನು” ಕಂಡ ನಾಡು. ಕನ್ನಡಿಗರು ಸ್ನೇಹಪರರು , ಪ್ರೀತಿಯ ಜೀವಿಗಳು,ಉದಾರವಂತರು , ಎಲ್ಲಾ ಜನ ಸಾಮಾನ್ಯರ ಜೊತೆ ಜೊತೆಗೆ ಬೆರೆತು ಸುಖ ಸಂತೋಷದ ಬಾಳು ನಡೆಸುವವರು . ಹಾಗಾಗಿ ಕನ್ನಡ ನಾಡು ಶಾಂತಿಯ ತೋಟ ; ಹೃದಯ ರಸಿಕರ ಕಂಗಳ ಸೆಳೆಯುವ ನೋಟ ಇಲ್ಲಿದೆ ಎಂದರೆ ತಪ್ಪಾಗಲಾರದು.
ನಮ್ಮ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ. ಸಾವಿರಾರು ವರ್ಷಗಳ ಸಾಹಿತ್ಯ ಪರಂಪರೆ ಕನ್ನಡಕ್ಕಿದೆ. ಕನ್ನಡ ಭಾಷೆಯ ಸೌಂದರ್ಯಕ್ಕೆ ಮತ್ತು ಹಿರಿಮೆಗೆ ಹೆಗ್ಗಳಿಕೆ ಎಂದರೆ ಅತಿ ಹೆಚ್ಚು ಬಳಸುವ ಭಾಷೆ ಹಿಂದಿಯ ನಂತರ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿ ಕೊಂಡಿರುವುದು. ಇದುವರೆಗೆ 8 ಕನ್ನಡ ಸಾಹಿತಿಗಳು ಈ ಪ್ರಶಸ್ತಿಯನ್ನು ಪಡೆದು ಕನ್ನಡ ಭಾಷೆಯನ್ನು ಶ್ರೀಮಂತ ಗೊಳಿಸಿದ್ದಾರೆ.
ಎರಡನೆ ಅತ್ಯಂತ ಶ್ರೇಷ್ಠ ಭಾಷಾ ಸನ್ಮಾನವಾದ ಕೇಂದ್ರ ಸಾಹಿತ್ಯಅಕಾಡೆಮಿಯ ಪ್ರಶಸ್ತಿ ಕೂಡಾ ಸುಮಾರು 64 ಕನ್ನಡ ಸಾಹಿತಿಗಳಿಗೆ ಲಭಿಸಿದೆ. ಇದು ನಿಜಕ್ಕೂ ಗೌರವದ ಮತ್ತು ಕನ್ನಡಿಗರಿಗೆ ಗರ್ವದ ವಿಷಯ ಸಹಾ.

ಆದರೆ ಇಂದು ನಮ್ಮನ್ನೆಲ್ಲಾ ಕಾಡುತ್ತಿರುವ ಪ್ರಶ್ನೆ ಇಷ್ಟೆಲ್ಲಾ ಶ್ರೀಮಂತ ಭಾಷೆ , ನಾಡು ನುಡಿ ಕಲೆ ಸಾಹಿತ್ಯ ಸಂಸ್ಕೃತಿ ಪ್ರಸಿದ್ದವಾಗಿದ್ದರೂ ನಮ್ಮ ಭಾಷೆ ಯಾಕೆ “ನಲುಗಿದೆ” ಅಥವಾ ಬಸವಳಿಯುತ್ತಾ ಇದೆ. ಯಾಕೆ ಅಗ್ಗಾಗ ಕನ್ನ
” ಉಳಿಸಿ ಬೆಳಸಿ ” ಅನ್ನುವ ಕೂಗು ಕೇಳುತ್ತಾ ಇರುತ್ತೆ.
ವಿಚಾರ ಮಾಡುತ್ತ ನೋಡಿದರೆ ಅನಿಸುವುದು ಭಾಷೆ ಬಡವಾಗಿಲ್ಲ; ಆದರೆ ಅದನ್ನು ಬಳಸುವ ಜನರ ಇಚ್ಛಾಶಕ್ತಿ ಕಡಿಮೆ ಆಗುತ್ತಿದಿಯಾ??? ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ಇಂದಿನ ಯುವ ಪೀಳಿಗೆ ಭಾಷೆಯ ಬಗ್ಗೆ ಸಂಕೀರ್ಣತಗೆ ಒಳಗಾಗಿದ್ದಾರ ಎಂದು?? ನಾವು ಇಂಗ್ಲೀಷ್ ಕಲಿಯದಿದ್ದರೆ ನಮ್ಮ ಭವಿಷ್ಯ ಹೇಗೆ ಎಂಬ ಜಿಜ್ಞಾಸೆ ಇದೆಯಾ???
ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ , ದೇಶವು ಕಂಡಿರುವ ಮತ್ತು ಕಾಣುತ್ತಿರುವ ಆಧುನೀಕರಣ, ಜಾಗತೀಕರಣ ಗಣಕೀಕರಣ, ಧ್ರುವೀಕರಣ ಮುಂತಾದ ಮಾನದಂಡಗಳಲ್ಲಿ ಅನ್ಯ ಭಾಷೆಗಳ ಕಲಿಕೆ, ಪಾಂಡಿತ್ಯ ಜ್ಞಾನ ಖಂಡಿತಾ ಬೇಕು. ಅದು ನಮ್ಮ ಓದುವಿಕೆ, ಕಲಿಯುವಿಕೆಗೆ ಮತ್ತು
ಗಳಿಕೆಯ ಮಾರ್ಗಕ್ಕೆ ಉಪಯೋಗ ಮಾಡಿಕೊಳ್ಳೋಣ.
ಆದರೆ ನಮ್ಮ ಮನೆಯಲ್ಲಿ ನಮ್ಮ ಜನರ ಮಧ್ಯೆ ನಮ್ಮ ಮನದ ಮಾತು ಕನ್ನಡ ಆಗಿರಲಿ ಎನ್ನುವುದು ನನ್ನ ಮನದಾಳದ ಮಾತು.
ನಾವು ಯಾವುದೆ ಭಾಷೆಯ ದ್ವೇಷಿಗಳು ಆಗುವುದು ಬೇಡ. ಆದರೆ ಕನ್ನಡ ಭಾಷೆಯ ಪ್ರೇಮಿಗಳು ಆಗೋಣ. ಅನ್ಯ ಭಾಷೆಗಳು, ನಮ್ಮ ಮನೆಗೆ ಗಾಳಿ ಬೆಳಕು ಬರಲು ಇಟ್ಟಿರುವ ಕಿಟಕಿ ಬಾಗಿಲುಗಳು ಆಗಿರ ಬೇಕೆ ವಿನಃ ಮನೆಯ ಮುಖ್ಯದ್ವಾರ ಆಗಿರಬಾರದು. ನಮ್ಮ ಕುಟುಂಬದ ಸದಸ್ಯರ ಮಧ್ಯೆ, ಸ್ನೇಹಿತರ ಮಧ್ಯೆ ಕನ್ನಡ ಭಾಷೆಯ ಸಂಪರ್ಕ ಸೇತುವೆ ಇರಬೇಕು. ಕನ್ನಡಕ್ಕೆ ಹೋರಾಡು ಕನ್ನಡದ ಕಂದ, ಕನ್ನಡವ ಕಾಪಾಡು ನನ್ನ ಆನಂದ ಸ್ಥಿತಿ ಬರಬಾರದು.
ನಾವು ಕೇವಲ ನವೆಂಬರ್ ತಿಂಗಳ ಕನ್ನಡಿಗರು ಆಗದೆ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಆದಷ್ಟೂ ಮಾತನಾಡುತ್ತಾ, ಕನ್ನಡ ಪತ್ರಿಕೆ, ಪುಸ್ತಕ ಓದುತ್ತಾ ಕನ್ನಡದ ಭಾಷಾ ಪ್ರಯೋಗವನ್ನು ಮಾಡಬೇಕು. ಕನ್ನಡವನ್ನು ಬಳಸುತ್ತಾ ಕಲಿಸುತ್ತಾ ಕನ್ನಡ ನಾಡು ನುಡಿ ಸಂಸ್ಕೃತಿ ಪರಂಪರೆ ಉಳಿಸಲು ಪ್ರಾಮಾಣಿಕ ಪ್ರಯತ್ನ ಪ್ರತೀ ಕನ್ನಡಿಗರು ಮಾಡಬೇಕು.

ಎಲ್ಲಾದರೂ ಇರೋಣ ಎಂತಾದರೂ ಇರೋಣ
ಎಂದೆಂದಿಗೂ ನಾವು ಕನ್ನಡದವರಾಗಿ ಇರೋಣ .
ಕನ್ನಡವೇ ಸತ್ಯ ಕನ್ನಡವೇ ನಿತ್ಯ.

✍️ ಮಂಜುನಾಥ್ ಎಸ್ ಕೆ
ಬೆಂಗಳೂರು.
BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ :ಎಸಿ ಅನುರಾಧ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ
    In (ರಾಜ್ಯ ) ಜಿಲ್ಲೆ
  • ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮೌಢ್ಯಗಳ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಕೊಂಡಗೂಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ಸಚಿವರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಸವ ಚೇತನ ಪ್ರಶಸ್ತಿಗೆ ಕೆ.ಎಸ್.ಕೋರಿ ಆಯ್ಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.