ಮುದ್ದೇಬಿಹಾಳ: ಬಸವನ ಬಾಗೇವಾಡಿ ಅಥವಾ ಮುದ್ದೇಬಿಹಾಳ ತಾಲೂಕುಗಳ ಪೈಕಿ ಯಾವುದಾದರೂ ಒಂದನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡೂ ತಾಲೂಕುಗಳು ಶೈಕ್ಷಣಿಕ ಮತ್ತು ಭೌಗೋಳಿಕ ವಾಗಿ ಸಾಕಷ್ಟು ವಿಶಾಲವಾಗಿವೆ. ಮುದ್ದೇಬಿಹಾಳ ತಾಲೂಕು ಐತಿಹಾಸಿಕ ಕುರುಹುಗಳನ್ನು ಹೊಂದಿದೆ. ಬಸವನ ಬಾಗೇವಾಡಿ ಕೂಡಾ ಯಾವುದರಲ್ಲಿಯೂ ಕಮ್ಮಿ ಇಲ್ಲ ಅನ್ನಿಸಿಕೊಂಡಿದೆ. ಈ ಎರಡೂ ತಾಲೂಕುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗುರ್ತಿಸಿಕೊಂಡಿವೆ. ಎರಡೂ ಕೇಂದ್ರಗಳಲ್ಲಿ ಜಿಲ್ಲೆಗೆ ಅಗತ್ಯವಿರುವ ಎಲ್ಲ ಮೂಲ ಸೌಲಭ್ಯಗಳಿವೆ.
ಮುಖ್ಯವಾಗಿ ಈ ಭಾಗದ ಜನ ವಿವಿಧ ಕಾರ್ಯಗಳಿಗೆ ಜಿಲ್ಲೆಗೆ ತೆರಳಬೇಕಾದರೆ ಸಧ್ಯ ೮೦ ಕಿ.ಮೀ ದೂರ ಕ್ರಮಿಸಬೇಕು. ದಿನಂಪ್ರತಿ ಈ ಭಾಗದ ಜನ ಜಿಲ್ಲಾ ಕೇಂದ್ರಕ್ಕೆ ಹೋಗಬೇಕೆಂದರೆ ಅಂದಾಜು ೩ ತಾಸು ಪ್ರಯಾಣ ಬೆಳೆಸಬೇಕು. ಹೋಗಲು ೩ ತಾಸು ಬರಲು ೩ ಹೀಗೆ ಇಡೀ ದಿನ ಬರೀ ಪ್ರಯಾಣಕ್ಕೆ ಕಾಲಹರಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸುತ್ತಮುತ್ತ ದೊಡ್ಡ ಪಟ್ಟಣಗಳನ್ನು, ಕೈಗಾರಿಕಾ ಪ್ರದೇಶಗಳನ್ನು ಸೇರಿದಂತೆ ಎಲ್ಲ ತರಹದ ಸೌಲಭ್ಯಗಳನ್ನು ಈ ಎರಡೂ ತಾಲೂಕುಗಳು ಒಳಗೊಂಡಿದ್ದು ಬಹುದಿನಗಳಿಂದಲೂ ಈ ಭಾಗದ ಜನರ ಬಹುಮುಖ್ಯ ಜಿಲ್ಲಾ ಬೇಡಿಕೆಯಾಗಿರುವ ಮುದ್ದೇಬಿಹಾಳ ಅಥವಾ ಹತ್ತಿರದ ೪೦ ಕಿ.ಮೀ ವ್ಯಾಪ್ತಿಯ ಬಸವನ ಬಾಗೇವಾಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿದಲ್ಲಿ ಸಾಕಷ್ಟು ಅನುಕೂಲಗಳಾಗಲಿವೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment
