ಮಾ.7 ರಿಂದ ಮಾ.11 ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗುವವು.
ಉದಯರಶ್ಮಿ ದಿನಪತ್ರಿಕೆ
ಚಡಚಣ : ಸುಕ್ಷೇತ್ರ ಜೇವೂರ ಗ್ರಾಮದ ಶ್ರೀ ಹಠಯೋಗಿ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ 40ನೇ ಪುಣ್ಯಾರಾಧನೆ ಮಾ. 7 ರಿಂದ ಮಾ. 11 ರವರೆಗೆ 5 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಮಾ. 7 ಶನಿವಾರದಂದು ಬೆ.4 ಗಂಟೆಗೆ ಬರಡೋಲದ ವಿಶ್ವನಾಥ ಹಿರೇಮಠ ಇವರಿಂದ ಹೋಮ, ಕೋಟಿ ಜಪಯಜ್ಞ ಕಾರ್ಯಕ್ರಮ. ಸಾ.4 ಗಂಟೆಗೆ ಭಜನಾ ಮಂಡಳಿ ಹಾಗೂ ಕಾಶಿವೇಶಧಾರಿ ಪುರವಂತರ ಭವ್ಯ ಮೆರವಣಿಗೆಯೊಂದಿಗೆ ಅಂಬಲಿ ಬಿಂದಿಗೆ ಹಾಗೂ ಗ್ರಾಮ ದೇವತೆ ಲಕ್ಷ್ಮೀ ದೇವಿಯ ಪಲ್ಲಕ್ಕಿ ಮೆರವಣಿಗೆ ಪುಷ್ಪಮಾಲೆಯೊಂದಿಗೆ ಮಠಕ್ಕೆ ತಲುಪುವದು. ಮಹಾರಾಷ್ಟ್ರದ ಜತ್ತ ತಾಲೂಕಿನ ಆವಾಸಂಖ ಗ್ರಾಮದ ವಿಠ್ಠಲ ಬಿರಾದಾರ ಇವರ ಹಸ್ತದಿಂದ ವೀಣಾ ನಿಲ್ಲಿಸುವ ಕಾರ್ಯಕ್ರಮ. ಸಂಜೆ 6 ಗಂಟೆಗೆ ಗುರುಪಾದೇಶ್ವರ ಶ್ರೀಗಳಿಂದ ಧರ್ಮಸಭೆ. ರಾತ್ರಿ 10 ಗಂಟೆಗೆ ಕುರುಕ್ಷೇತ್ರ ನಾಟಕ.
ಮಾ.8 ರವಿವಾರದಂದು ಬೆ.11 ಗಂಟೆಗೆ ಕೇದಾರ ಪೀಠದ 1008 ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯರ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹ. ಮಧ್ಯಾಹ್ನ 2 ಗಂಟೆಗೆ ಕನಕ ಮೆಲೋಡಿಸ್ ಲಕ್ಷ್ಮಣ ಬೀಳಗಿ ಇವರಿಂದ ರಸಮಂಜರಿ. ಸಂಜೆ 6 ಗಂಟೆಗೆ ಧರ್ಮಸಭೆ, ರಾತ್ರಿ 11 ಗಂಟೆಗೆ ಡೊಳ್ಳಿನ ಪದಗಳು.
ಮಾ.9 ಸೋಮವಾರದಂದು ಮುಗಳಖೋಡದ ಡಾ| ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಮಾಯಮ್ಮನ ಹಬ್ಬ ಕಾರ್ಯಕ್ರಮ, ಸಂಜೆ 6 ಗಂಟೆಗೆ ಧರ್ಮಸಭೆ. ರಾತ್ರಿ 11 ಗಂಟೆಗೆ ಅಥಣಿ ತಾಲೂಕಿನ ಕಿರಣಗಿ ಗ್ರಾಮದ ಪ್ರಭಾವತಿ ಭಜನಾ ಮಂಡಳಿಯವರಿಂದ ಭಜನೆಗಳು.
ಮಾ 10. ಮಂಗಳವಾರದಂದು ಬೆಳಗ್ಗೆ 9 ಗಂಟೆಗೆ ಪಾನ ಮಂಗಳೂರಿನ ಷ.ಬ್ರ. ಶಿವಯೋಗಿ ಶಿವಾಚಾರ್ಯರ ಸಾನಿಧ್ಯದಲ್ಲಿ ಗೀ ಗೀ ಪದಗಳು. ಮಧ್ಯಾಹ್ನ 4 ಗಂಟೆಗೆ ಜಂಗೀ ನಿಕಾಲಿ ಕುಸ್ತಿ ನಡೆಯಲಿವೆ. ಸಂಜೆ 6 ಗಂಟೆಗೆ ಧರ್ಮಸಭೆ.ನಂತರ ಶ್ರೀಪಾಂಡುರಂಗ ಮಹಾರಾಜರ ಅಧ್ಯಕ್ಷತೆಯಲ್ಲಿ ಕೀರ್ತನೆ.
ಮಾ. 11 ಬುಧವಾರದಂದು ಬೆಳಗ್ಗೆ 6 ಗಂಟೆಗೆ ತೋಟದ ಆಶ್ರಮದಿಂದ ಶ್ರೀ ಹಠಯೋಗಿ ರೇವಣಸಿದ್ಧೇಶ್ವರ ಮಹಾಸ್ವಾಮಿಗಳ ಆನೆಯ ಅಂಬಾರಿಯ ಮೇಲೆ ಬೆಳ್ಳಿ ಮೂರ್ತಿಯ ಭವ್ಯ ಮೆರವಣಿಗೆ,ಗೊಂಬೆ ಕುಣಿತ,ಮಹಿಳಾ ಡೊಳ್ಳುಕುಣಿತ,ವಿವಿಧವಾದ್ಯ ಮೇಳದೊಂದಿಗೆ ನಡೆಯಲಿದೆ. ಸಾನಿಧ್ಯವನ್ನು ಹಾಗೂ ಬೆ.11 ಗಂಟೆಗೆ ಶ್ರೀಗಳ ಗದ್ದುಗೆಗೆ ಪುಷ್ಪವೃಷಿ ಮುಗಳಖೋಡದ ಷಡಕ್ಷರಿ ಮುರುಘರಾಜೇಂದ್ರ ಮಹಾಸ್ವಾಮಿಗಳು,ಅಧ್ಯಕ್ಷತೆ ಡಾ||ಜಯಶಾಂತಲಿಂಗೇಶ್ವರ ಶಿವಾಚಾರ್ಯರು. ಸಾಯಂಕಾಲ 5 ಗಂಟೆಗೆ ಹಾವಿನಾಳ-ಹತ್ತಳ್ಳಿ ಶ್ರೀಗುರು ಗುರುಪಾದೇಶ್ವರ ಶಿವಾಚಾರ್ಯರಿಂದ ರಥೋತ್ಸವ ಕಾರ್ಯಕ್ರಮ. ರಾತ್ರಿ 8 ಗಂಟೆಗೆ ವರ್ಣರಂಜಿತ ಮದ್ದು ಸುಡುವ ಕಾರ್ಯಕ್ರಮ. ರಾತ್ರಿ 10 ಗಂಟೆಗೆ ಅಣ್ಣನ ಕಣ್ಣೀರು ಎಂಬ ನಾಟಕ ಪ್ರದರ್ಶನದೊಂದಿಗೆ 5 ದಿನಗಳ ಪುಣ್ಯಾರಾಧನೆ ಕಾರ್ಯಕ್ರಮಕ್ಕೆ ತೆರೆಬೀಳಲಿದೆ.
5 ದಿನಗಳ ಶ್ರೀಗಳ ಪುಣ್ಯಾರಾಧನೆಗೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.

