Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಯತ್ನಾಳರು ಆಧಾರ ರಹಿತ ಟೀಕೆ ಮಾಡುವುದನ್ನು ನಿಲ್ಲಿಸಲಿ

79 ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ

ಗಣೇಶ ವಿಸರ್ಜನೆ ವೇಳೆ ಶಾಂತಿ ಕಾಪಾಡಿ: ಪೊಲೀಸರ ಎಚ್ಚರಿಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅನಾವೃಷ್ಟಿ ನಿವಾರಣೆಗೆ ಫ್ರಿಜ್‌ನಲ್ಲೇ ಗಣೇಶ ಪ್ರತಿಷ್ಠಾಪನೆ
(ರಾಜ್ಯ ) ಜಿಲ್ಲೆ

ಅನಾವೃಷ್ಟಿ ನಿವಾರಣೆಗೆ ಫ್ರಿಜ್‌ನಲ್ಲೇ ಗಣೇಶ ಪ್ರತಿಷ್ಠಾಪನೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನಾಡಿಗೆ ಒಳಿತಾಗಲಿ, ಮಳೆ ಸುರಿಯಲಿ ಎಂಬ ಭಕ್ತನ ವಿಶಿಷ್ಟ ಧಾರ್ಮಿಕ ನಂಬಿಕೆ

ಉದಯರಶ್ಮಿ ದಿನಪತ್ರಿಕೆ

ಅಫಜಲಪುರ: ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರ ಬದುಕು ಹಸನಾಗಲಿ, ಜನ-ಜಾನುವಾರುಗಳಿಗೆ ನೀರಿನ ಕೊರತೆ ನೀಗಲಿ ಎಂಬ ಧಾರ್ಮಿಕ ನಂಬಿಕೆಯಿಂದ ತಂಪು ಪಾನೀಯ ಮಾರಾಟ ಮಾಡುವ ಗೂಡಂಗಡಿ ಮಾಲೀಕರೊಬ್ಬರು ತಮ್ಮ ಅಂಗಡಿಯ ಫ್ರಿಜ್‌ನಲ್ಲೇ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿರುವ ಘಟನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಗಮನ ಸೆಳೆಯುತ್ತಿದೆ.
ಅನಾವೃಷ್ಟಿಯಿಂದ ಮಳೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ವಿಘ್ನವಿನಾಯಕ ಗಣೇಶನ ಆರಾಧನೆಯ ಮೂಲಕ ನಾಡಿನಲ್ಲಿ ಮಳೆ ಸಮೃದ್ಧಿಯಾಗಲಿ ಹಾಗೂ ಎಲ್ಲರಿಗೂ ಒಳಿತಾಗಲಿ ಎಂಬ ಆಶಯದಿಂದ ಈ ವಿಶಿಷ್ಟ ರೀತಿಯ ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಗೂಡಂಗಡಿ ಮಾಲೀಕ ಮಲ್ಲಿನಾಥ ಕಳಸಿ ತಿಳಿಸಿದ್ದಾರೆ.
ಮುಖಂಡ ಸಿದ್ದು ಮ್ಯಾಕೇರಿ ಮಾತನಾಡಿ, ಮಳೆ ಕೊರತೆಯಿಂದ ರೈತರು ಹಾಗೂ ಗ್ರಾಮೀಣ ಭಾಗದ ಜನರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ, ವರುಣನ ಆಗಮನದಿಂದ ಉತ್ತಮ ಮಳೆಯಾಗಲಿ, ನಾಡು ಸುಭಿಕ್ಷವಾಗಲಿ ಎಂಬ ಪ್ರಾರ್ಥನೆಯೊಂದಿಗೆ ಈ ವಿಶಿಷ್ಟ ಧಾರ್ಮಿಕ ಆಚರಣೆ ನಡೆಸಲಾಗಿದೆ. ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ ಗಣೇಶನನ್ನು ಶುಕ್ರವಾರ ಸಂಜೆ ಸಂಭ್ರಮ ಸಡಗರದಿಂದ ವಿಸರ್ಜಿಸುವುದಾಗಿ ತಿಳಿಸಿದ ಅವರು, ಸರ್ಕಾರ ಈ ಕೂಡಲೇ ಅನಾವೃಷ್ಟಿಯಿಂದ ಹಾನಿಯಾದ ಈ ಭಾಗದ ರೈತರಿಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಫ್ರಿಜ್‌ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಕುತೂಹಲದಿಂದ ಆಗಮಿಸಿ ವಿಶೇಷ ಪೂಜೆ ಹಾಗೂ ಪ್ರತಿಷ್ಠಾಪನೆಯನ್ನು ವೀಕ್ಷಿಸುತ್ತಿದ್ದಾರೆ. ಸಾಮಾನ್ಯವಾಗಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಬಳಸುವ ಫ್ರಿಜ್ ಭಕ್ತಿಯ ಪ್ರತೀಕವಾಗಿ ಮಾರ್ಪಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಈ ವೇಳೆ ಹಿರಿಯ ಸಾಹಿತಿ ಬಿ. ಎಂ. ರಾವ್, ಬಸವರಾಜ ನೀಲಗಾರ, ಪುಂಡಲೀಕ ಯಳಮೇಲಿ, ಪ್ರಕಾಶ ಮಂಗಳೂರು ಹಾಗೂ ಇತರರಿದ್ದರು.

ಸಾಂಪ್ರದಾಯಿಕ ದೃಷ್ಟಿಕೋನ

ಧಾರ್ಮಿಕ ಸಂಪ್ರದಾಯದ ಪ್ರಕಾರ, ಗಣೇಶನ ವಿಗ್ರಹವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಅಥವಾ ಪೂರ್ವ ದಿಕ್ಕಿನಲ್ಲಿ, ಶುದ್ಧವಾದ ಪೂಜಾ ಕೋಣೆಯಲ್ಲಿ ಅಥವಾ ಸ್ವಚ್ಛವಾದ ಕಪಾಟಿನಲ್ಲಿ ಇರಿಸುವುದು ಉತ್ತಮ. ಈ ಸ್ಥಳಗಳು ಸಕಾರಾತ್ಮಕ ಶಕ್ತಿಯ ಹರಿವಿಗೆ ಸಹಾಯಕ ಎಂದು ಪರಿಗಣಿಸಲಾಗುತ್ತದೆ.
ಆದರೆ, ಸಾಂಪ್ರದಾಯಿಕ ನಿಯಮಗಳಿಗಿಂತ ಭಕ್ತಿಯ ಉದ್ದೇಶವೇ ಹೆಚ್ಚು ಮುಖ್ಯ. ನಿಮ್ಮ ಪ್ರಾರ್ಥನೆಯು ಪ್ರಾಮಾಣಿಕವಾಗಿದ್ದರೆ ಮತ್ತು ವಿಗ್ರಹದ ಮೇಲೆ ಗೌರವವಿದ್ದರೆ, ಸ್ಥಳದ ಕುರಿತಾದ ಕಟ್ಟುನಿಟ್ಟಾದ ನಿಯಮಗಳು ನಿಮ್ಮ ಮನಸ್ಸನ್ನು ಕಟ್ಟಿಹಾಕಬಾರದು. ಈ ಘಟನೆಯಲ್ಲಿ ಮಲ್ಲಿನಾಥ ಕಳಸಿ ಅವರ ಪ್ರಾರ್ಥನೆಯು ಸಮಾಜದ ಒಳಿತಿಗಾಗಿ, ರೈತರ ಬದುಕಿಗಾಗಿ ಎಂಬುದು ಸ್ಪಷ್ಟವಾಗಿದೆ. ಭಕ್ತಿಯ ಭಾವನೆಯೇ ಇಲ್ಲಿ ಪ್ರಧಾನವಾಗಿದೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಯತ್ನಾಳರು ಆಧಾರ ರಹಿತ ಟೀಕೆ ಮಾಡುವುದನ್ನು ನಿಲ್ಲಿಸಲಿ

79 ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ

ಗಣೇಶ ವಿಸರ್ಜನೆ ವೇಳೆ ಶಾಂತಿ ಕಾಪಾಡಿ: ಪೊಲೀಸರ ಎಚ್ಚರಿಕೆ

ಶಿರಾಡೋಣ–ಹಾಲಹಳ್ಳಿ ರೈತರಿಗೆ ನೀರು ಒದಗಿಸಲು ಆಗ್ರಹ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಯತ್ನಾಳರು ಆಧಾರ ರಹಿತ ಟೀಕೆ ಮಾಡುವುದನ್ನು ನಿಲ್ಲಿಸಲಿ
    In (ರಾಜ್ಯ ) ಜಿಲ್ಲೆ
  • 79 ನೇ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಗಣೇಶ ವಿಸರ್ಜನೆ ವೇಳೆ ಶಾಂತಿ ಕಾಪಾಡಿ: ಪೊಲೀಸರ ಎಚ್ಚರಿಕೆ
    In (ರಾಜ್ಯ ) ಜಿಲ್ಲೆ
  • ಶಿರಾಡೋಣ–ಹಾಲಹಳ್ಳಿ ರೈತರಿಗೆ ನೀರು ಒದಗಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಕ್ರೀಡೆಗಳಿಂದ ಮಾನಸಿಕ ಒತ್ತಡ ನಿವಾರಣೆ :ಪ್ರೊ.ತೋಳನೂರ
    In (ರಾಜ್ಯ ) ಜಿಲ್ಲೆ
  • ಮನುಷ್ಯನನ್ನು ಮನುಷ್ಯನಾಗಿಸುವ ಸಂಸ್ಕಾರ
    In ವಿಶೇಷ ಲೇಖನ
  • ಮಗುವನ್ನು ಚಿವುಟಿ ತೊಟ್ಟಿಲನ್ನೂ ತೂಗಿ
    In ವಿಶೇಷ ಲೇಖನ
  • ಅನಾವೃಷ್ಟಿ ನಿವಾರಣೆಗೆ ಫ್ರಿಜ್‌ನಲ್ಲೇ ಗಣೇಶ ಪ್ರತಿಷ್ಠಾಪನೆ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 17,2026
    In ದಿನಪತ್ರಿಕೆ
  • ಆಂಗ್ಲರನ್ನು ಸೋಲಿಸಿದ ಮೊದಲ ರಾಣಿ ಕಿತ್ತೂರು ಚೆನ್ನಮ್ಮ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.