ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಸಹಕಾರ ಯೂನಿಯನ್ನಿನ ೨೦೨೫-೨೬ನೇ ಸಾಲಿನ ೮೯ನೇ ವಾರ್ಷಿಕ ಮಹಾಸಭೆಯು ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷ ಎಂ.ಸಿ.ಮುಲ್ಲಾ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ವಾರ್ಷಿಕ ಮಹಾಸಭೆಗೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಸಹಕಾರ ಧ್ವಜಾರೋಹಣ ನೇರವರಿಸಿ ಮಾತನಾಡಿದ ಅವರು, ಜಿಲ್ಲಾ ಸಹಕಾರ ಯೂನಿಯನ್ನಿನಲ್ಲಿ ನಿರಂತರವಾಗಿ ತರಬೇತಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿರುವುದು ಪ್ರಗತಿಯ ಸಂಕೇತ ಎಂದರು.
ನಿರ್ದೆಶಕಿ ಸಂಯುಕ್ತಾ ಎಸ್ ಪಾಟೀಲ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ಹಿರಿಯ ಸಹಕಾರಿಗಳ ಒಂದು ಸಹಕಾರದಿಂದ ಜಿಲ್ಲೆಯಲ್ಲಿ ಸಹಕಾರ ರಂಗ ಅತ್ಯಂತ ಬೃಹದಾಕಾರವಾಗಿ ಬೆಳೆಯುತ್ತಿದ್ದು ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಗೂ ಸಹ ಸಹಕಾರ ಕ್ಷೇತ್ರ ಜಿಲ್ಲಾ ಸಹಕಾರ ಯೂನಿಯನ್ ಮುಖಾಂತರ ತಲುಪುತ್ತಿದ್ದು ತುಂಬಾ ಹರ್ಷವೆನಿಸುತ್ತದೆ. ಎಂದು ತಿಳಿಸಿದರು.
ಅಧ್ಯಕ್ಷ ಎಂ.ಸಿ.ಮುಲ್ಲಾ ರವರು ಮಾತನಾಡಿ, ಜಿಲ್ಲಾ ಸಹಕಾರ ಯೂನಿಯನ್ ವಿಜಯಪುರ ಲಾಭಗಳಿಸುವ ಸಂಸ್ಥೆಯಾಗಿರದೇ ನಮ್ಮಲ್ಲಿ ಎಲ್ಲ ರೀತಿಯ ಸಹಕಾರ ಸಂಘಗಳಿಗೆ ಮತ್ತು ಬ್ಯಾಂಕುಗಳಿಗೆ ನಿರಂತರವಾಗಿ ಜಿಲ್ಲಾಮಟ್ಟ, ರಾಜ್ಯಮಟ್ಟ, ವಿಶೇಷ ಕಾರ್ಯಕ್ರಮಗಳು, ಮಹಿಳಾ ತರಬೇತಿಗಳು, ಪ.ಜಾ/ಪ.ಪಂ ತರಬೇತಿಗಳು ಮತ್ತು ಯುವಜನ ತರಬೇತಿಗಳು, ಪ್ರಬಂಧ ಚರ್ಚಾ ಸ್ಫರ್ಧೆ ಹಾಗೂ ಸಹಕಾರ ಸಪ್ತಾಹದಂತಹ ಅನೇಕ ಕಾರ್ಯಕ್ರಮಗಳನ್ನು ನಿರಂತರವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಹಾಗೂ ಸಹಕಾರ ಇಲಾಖೆ ರವರ ಮಾರ್ಗದರ್ಶದಲ್ಲಿ ಸಾಗುತ್ತಾ ಬಂದಿದೆ ಎಂದು ತಿಳಿಸಿದರು.
ರಾಜ್ಯ ಸಹಕಾರ ಮಹಾಮಂಡಳದ ನಿರ್ದೆಶಕ ಕೆ.ಬಿ.ಪಾಟೀಲ, ಜಿಲ್ಲಾ ಸಹಕಾರ ಯೂನಿಯನ್ನಿನ ಉಪಾಧ್ಯಕ್ಷ ಎನ್.ಎಸ್.ಅಮರಗೊಂಡ, ನಿರ್ದೆಶಕರಾದ ಎಸ್.ಎಸ್.ತಳೇವಾಡ, ಶ್ರೀಹರ್ಷ ಪಾಟೀಲ, ಎಸ್.ಜೆ.ಇಂಡಿ, ವ್ಹಿ.ಬಿ.ಪಾಟೀಲ, ಸಿ.ಎಸ್.ಪಾಟೀಲ, ಬಿ.ಎಂ.ಕುಂಬಾರ ಬಿ.ಎಸ್.ಹುಡೇದ, ಸಿ.ಎಸ್.ಮಳ್ಳದ, ಸುರೇಶಗೌಡ ಬಿರಾದಾರ, ಎಸ್.ಎಸ್.ವಾರದ, ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ಪಾರಗೊಂಡ, ಜಿಲ್ಲಾ ಸಹಕಾರ ಶಿಕ್ಷಕರಾದ ಪೀರಪ್ಪ ಎಸ್ ಕಣಮೇಶ್ವರ ದ್ವಿ.ದ.ಸ ಎಸ್.ಎನ್.ಕುಲಕರ್ಣಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

