ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವ ನಿಮಿತ್ಯ ಮಠಾಧೀಶರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ವೀರಭದ್ರೇಶ್ವರ ಜಯಂತಿ ಆಚರಿಸಲಾಯಿತು.
ಪಟ್ಟಣದ ವೀರಭದ್ರೆಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಸೇರಿದ ಭಕ್ತಮಂಡಳಿ ಹಿಂದೂ ಧರ್ಮ ಪರಂಪರೆಯ ಅದರಲ್ಲೂ ವೀರಶೈವ ಲಿಂಗಾಯತ ಸಮುದಾಯ ಪೂಜಿತ ವೀರಗೋತ್ರ ಪುರುಷ ಶ್ರೀವೀರಭದ್ರೇಶ್ವರ ದೇವರ ಪ್ರತಿಮೆಗೆ ಶಾಸ್ತ್ರೋಕ್ತವಾಗಿ ಅಭಿಷೇಕ, ಮಹಾಮಂಗಳಾರತಿ ನೆರವೇರಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪರದೇಶಿಮಠದಶ್ರೀ, ತಾಲ್ಲೂಕು ಘಟಕದ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ, ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ, ಸಿದ್ದು ಆನಂದಿ, ಪಿ.ಜಿ.ಹಿರೇಮಠ, ಮಾತನಾಡಿ, ಪುರಾಣಗಳ ಪ್ರಕಾರ ದಕ್ಷನ ಸಂಹಾರಕ್ಕಾಗಿ ಶಿವನ ಅಂಶದಿಂದ ಅವತರಿಸಿ ಶಿವಭಕ್ತರನ್ನು ಸಂರಕ್ಷಿಸುತ್ತಿರುವ ವೀರಭದ್ರೇಶ್ವರ ದೇವರು ವೀರಶೈವ ಲಿಂಗಾಯತ ಪರಂಪರೆಯಲ್ಲಿ ಪ್ರಮುಖನಾಗಿದ್ದಾನೆ. ವೀರ, ನಂದಿ, ಭೃಂಗಿ, ವೃಷಭ, ಸ್ಕಂದ ಎಂಬ ಪಂಚಗೋತ್ರ ಪುರುಷರು ಜನಜನಿತರಾಗಿದ್ದು, ಇವರಲ್ಲಿ ವೀರಭದ್ರೇಶ್ವರ ಪ್ರಥಮ ಪುರುಷನಾಗಿದ್ದಾನೆ. ಇಂದು ನಾವೆಲ್ಲ ಭಕ್ತರು ಧರ್ಮಮಾರ್ಗದಲ್ಲಿ ನಡೆದು ಅವನ ಕೃಪೆಗೆ ಪಾತ್ರರಾಗಬೇಕು ಎಂದರು.
ವಿಜಯಲಕ್ಷ್ಮಿ ಪಾಟೀಲ, ಇಂದ್ರಾಬಾಯಿ ಕುದರಿ, ಗಂಗಾಬಾಯಿ ಮಣೂರ, ಅಜ್ಜಯ್ಯ ಹಿರೇಮಠ, ಯಲಗೂರೇಶ ದೇವೂರ, ಕೆ.ಎಸ್.ಕೋರಿ, ಆನಂದ ಜಡಿಮಠ, ರಮೇಶ ಮಶಾನವರ, ರಾಮಯ್ಯ ನಾಶಿಮಠ, ರಮೇಶ ಮಾಳನೂರ, ವಿನೋದ ನಾಶಿಮಠ, ಶರಣಗೌಡ ಅಂಗಡಿ, ಭೀಮರಾಯ ತೆಗನೂರ, ಶಿವಪ್ಪ ವಸ್ತçದ, ಪ್ರಭು ಮಾಕಾ, ಭದ್ರಯ್ಯ ಮಲ್ಲಿಕಾರ್ಜುನಮಠ, ಮಲ್ಲಯ್ಯ ನಂದಿಕೋಲ, ದಾನು ಯರನಾಳ, ಶ್ರೀನಿವಾಸ ಮಣೂರ, ಬಸವರಾಜ ಬಾಗೇವಾಡಿ ಸೇರಿದಂತೆ ಇತರರು ಇದ್ದರು.

