ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ದಿಂದ ಆ.ರಂದು ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾದ “ವಿಶ್ವ ಛಾಯಾಗ್ರಹಣ ದಿನಾಚರಣೆ”ಯ ಅಂಗವಾಗಿ ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ, ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಛಾಯಾಚಿತ್ರಗಳ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಕಲಾವಿದ ವಿದ್ಯಾಧರ ಸಾಲಿ ಮಾತನಾಡಿ, ಒಂದು ಛಾಯಾಚಿತ್ರ ಜಗತ್ತಿನ ಇತಿಹಾಸ ನೆನಪಿಸುತ್ತದೆ ಅದರ ಜೊತೆಯಲ್ಲಿ ದಾಖಲಾತಿಕೂಡ ಆಗುತ್ತದೆ ಇವತ್ತಿನ ಆಧುನಿಕ ಜಗತ್ತಿನಲ್ಲಿ ಛಾಯಾಗ್ರಹಣ ಮಾಡಿ ಜೀವನ ನಡೆಸುವುದು ಕಷ್ಟದಾಯಕದ ಕೆಲಸ ಅದರಲ್ಲೂ ಕ್ಯಾಮರಾಗಳ ಬೆಲೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಒಬ್ಬರೊಂದಿಗೆ ಒಬ್ಬರು ಕಾಂಪಿಟೇಷನ್ ನಡೆಸುವ ಪರಿಸ್ಥಿತಿ ಇದೆ. ಆದರೆ ಹಿಂದಿನ ದಿನಗಳಲ್ಲಿ ಕಪ್ಪು ಬಿಳುಪು ಚಿತ್ರಗಳಿಗೆ ಇರುವ ಇತಿಹಾಸ ಇವತ್ತಿನ ಛಾಯಾಗ್ರಹಣಕ್ಕೆ ಇಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತವಡಿಸಿದರು.
ಇನ್ನೊಬ್ಬ ಮುಖ್ಯಅತಿಥಿ ಹಿರಿಯ ಛಾಯಾಗ್ರಾಹಕ ಮತ್ತು ಕಲಾವಿದ ಬಿ.ಎಸ್. ಪಾಟೀಲ ಅವರು ಮಾತನಾಡುತ್ತ, ಡಿಜಿಟಲ್ ಕಾಲ ಬರುವುದಕ್ಕೂ ಮೊದಲು ಛಾಯಾಗ್ರಹಣ ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ ಅದರಲ್ಲೂ ಕಲಾತ್ಮಕ ಹಾಗೂ ವನ್ಯಜಿವಿ ಛಾಯಾಗ್ರಹಣ ಮಾಡುವುದು ಅಷ್ಟು ಸುಲಭದ ಮಾತಾಗಿರಲಿಲ್ಲ . ಆದರೆ ಇಂದಿನ ಡಿಜಿಟಲ್ ಯುಗದಲ್ಲಿ ಕ್ಷಣಾರ್ಧದಲ್ಲೇ ನಮಗೆ ಉತ್ತಮ ಚಿತ್ರ ಬಂದು ಸಾಮಾಜಿಕ ಜಾಲತಾಣದಲ್ಲಿ ಮೂಡಿಬಂದು ಕೆಲವೇ ಕ್ಷಣದಲ್ಲಿ ಅದು ಜಗತ್ವಿಖ್ಯಾತಿ ಪಡೆಯುವಲ್ಲಿ ಯಶಸ್ವಿಯಾಗುತ್ತದೆ ಎಂದರು.
ಹಿರಿಯ ಕಲಾವಿದರಾದ ಎಂ.ಕೆ. ಪತ್ತಾರ. ಪ್ರವಾಸೋಧ್ಯಮ ಇಲಾಖೆಯ ಅನಿಲಕುಮಾರ ಬನಜಿಗೇರ ವೇದಿಕೆ ಮೇಲಿದ್ದರು.
ಜಿಲ್ಲಾ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಪ್ರಾಸ್ಥಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಛಾಯಾರತ್ನ ಪ್ರಶಸ್ತಿಗೆ ಭಾಜನರಾದ ವಿಜಯಪುರದ ಗುರುರಾಜ ಔರಸಂಗ, ಉದಯಕುಮಾರ ಕುಲಕರ್ಣಿ, ಮಾಣಿಕಪ್ರಭು ಶಟಗಾರ, ಮಲ್ಲಿಕಾರ್ಜುನ ಗುಲಗಂಜಿ, ನಿಂಬರಗಿಯ ದೇವಾನಂದ ಸಿಂಗೆ, ತಿಕೋಟಾದ ದಯಾನಂದ ಪರಮಾಜ, ನಿಡಗುಂದಿಯ ಮಾನಪ್ಪ ಬಡಿಗೇರ, ಉಕ್ಕಲಿಯ ಅನಿಲ ಕಲ್ಯಾಣಿ, ಮಸುತಿಯ ಲಕ್ಷ್ಮಣ ಹೊಸೂರ ಇವರಿಗೆ ಪ್ರಶಸ್ತಿನೀಡಿ ಗೌರವಿಸಲಾಯಿತು.
ಜಿಲ್ಲೆಯ ಛಾಯಾಗ್ರಾಹಕರ ಮಕ್ಕಳು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಉತ್ತಮ ಅಂಕಗಳೊದಿಗೆ ಉತ್ತೀರ್ಣರಾದ ಭವಾನಿ ನೇಜ, ವಿಜೇತಾ ಮಹಾಂತಮಠ, ಶಿವಾನಿ ನೇಜ, ಐಶ್ವರ್ಯ ಮಠಪತಿ ಕುಮಾರ ಅಭಿಲಾಷ ನಾವಿ, ಸಂಪತ್ತ ಬಡಿಗೇರ, ಸುದರ್ಶನ ಉಪಾಧ್ಯ, ಸಚೀನ ಬಡಿಗೇರ, ಅಭೀಷೇಕ ನಾವಿ ಇವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಛಾಯಾಗ್ರಾಹಕರಾದ ರಮೇಶ ಚವ್ಹಾಣ, ಸತೀಶ ಕಲಾಲ, ಶಶಿಕುಮಾರ ಕುಂಬಾರ, ಮಲ್ಲಿಕಾರ್ಜುನ ಪಾರ್ವತಿ, ಇವರ ಛಾಯಾಚಿತ್ರಗಳು ಕಲಾಸಕ್ತರ ಮನ ತಣಿಸಿದವು.
ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರಾದ ಸಂಜೀವ ಜಮಾದಾರ, ಜಗಮೋಹನ ಉಪಾಧ್ಯೆ, ಶಿವರಾಜ ಕುಂಟೋಜಿ, ಶಿವಾನಂದ ಜಿಗಜಿವಣಗಿ, ಸಂಜಯ ರೇವೆ, ಆನಂದ ಮಹಾಂತಮಠ, ಸಂಗಮೇಶ ಬದಾಮಿ, ಮಹೇಶ ಕುಂಬಾರ, ಮಹಾಂತೇಶ ಪಾಟೀಲ್ ಪಿ.ಎಸ್.ಕಡೇಮನಿ, ಮಹೇಶ ಪಾಟೀಲ, ಸಂಗಯ್ಯ ಮಠಪತಿ, ಪಿಂಟು ರಜಪೂತ, ಸುರೇಶ ಗಲ್ಪಿ, ಮುರಾರಿ ಕರ್ವಾ, ಆರ್ಯನ್ ಹಿರೇದಸಾಯಿಸಾಯಿ, ವೀರೇಶ ಅಡಕಿ, ಸುಭಾಸ ಪವಾರ, ಪ್ರಶಂತ ಪಟ್ಟಣಶೆಟ್ಟಿ, ಸುರೇಶ ರಾಠೋಡ, ಪವನ ಅಂಗಡಿ, ಸತೀಶ ಕಲಾಲ, ಶಶಿಕುಮಾರ ಕುಂಬಾರ, ಮಲ್ಲಿಕಾರ್ಜುನ ಪಾರ್ವತಿ, ಮೌನೇಶ ಬಡಿಗೇರ, ಗೌಡಪ್ಪಗೌಡ ಬಿರಾದಾರ, ಸಂತೋಷ ಹಂಜಗಿ, ಆಕಾಶ ಧೋರಕರ, ನಾಗಯ್ಯ ಗಣಾಚಾರಿ, ಶೇಖರ ಹರಕಂಗಿ, ಸುನೀಲ ಬಿರಾದಾರ, ಸಿದ್ದು ಹೊದ್ಲೂರ, ಶಕೀಲ, ಚಂದ್ರಕಾಂತ ವಡ್ಡರ, ಬಸವರಾಜ ವಾಲಿಕಾರ ಸಹಿತ 200ಕ್ಕೂ ಹೆಚ್ಚು ಛಾಯಾಗ್ರಾಹಕರು, ಜಿಲ್ಲೆಯ ವಿವಿಧ ತಾಲೂಕಿನ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

