ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದೇಶದ ಭವಿಷ್ಯವು ವರ್ಗ ಕೋಣೆಯಲ್ಲಿ ಅಡಗಿದೆ. ಶಾಲಾ ಸಂಸತ್ತುಗಳ ರಚನೆಯಿಂದ ನಮ್ಮ ದೇಶದ ಮುಂದಿನ ಭವ್ಯ ನಾಯಕರು ಈ ವೇದಿಕೆಯ ಮುಖಾಂತರ ನಿರ್ಮಾಣವಾಗುತ್ತಾರೆ. ಮತ್ತು ಉತ್ತಮ ನಾಯಕತ್ವ ಗುಣ ಮಕ್ಕಳಲ್ಲಿ ಬರುತ್ತದೆ ಎಂದು ರೇಖಾ ಮೋಹರೆ ಹೇಳಿದರು.
ನಗರದ ನಾಗೂರ ಬಡಾವಣೆಯ ಪ್ರೇರಣಾ ಶಿಶುನಿಕೇತನ, ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಪಠ್ಯೇತರ ಮತ್ತು ಪಠ್ಯಪೂರಕ ಹಾಗೂ ಶಾಲಾ ಸಂಘಗಳ ಉದ್ಘಾಟನೆ ಶಾಲಾ ಸಂಸತ್ತಿನ ಪ್ರತಿನಿಧಿಗಳ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಜ್ಞಾನ ಸಂಪಾದನೆಯೊಂದಿಗೆ ಗುರುವಿನ ಮಹತ್ವವನ್ನು ತಿಳಿದು, ಗುರುವಿನ ಕೃಪೆಯನ್ನು ಅನಂತವಾಗಿ ಪಡೆಯಬೇಕು. ಮತ್ತು ಪುಸ್ತಕ ಜ್ಞಾನದೊಂದಿಗೆ ಪರಂಪರೆ ಮತ್ತು ಸಂಸ್ಕೃತಿಯ ಜ್ಞಾನವನ್ನು ಗಳಿಸಿದಾಗ ಸರ್ವಾಂಗೀಣ ಪ್ರಗತಿ ಮಕ್ಕಳಲ್ಲಿ ಉಂಟಾಗುತ್ತದೆ ಎಂದರು.
ಈ ವೇಳೆ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು.
ಶಾಲಾ ಸಂಸತ್ತಿಗೆ ಆಯ್ಕೆಯಾದ ಮಕ್ಕಳಿಗೆ ಅಧಿಕಾರದ ಗೌಪ್ಯತೆ ಮತ್ತು ಪ್ರಮಾಣ ವಚನವನ್ನು ಮುಖ್ಯಗುರುಮಾತೆ ಎಮ್.ಪಿ.ಬುಕ್ಕಾ ಅವರು ಭೋದಿಸಿದರು. ವೈಭವ ಬಾಗಲಕೋಟ, ಶ್ರೀರಕ್ಷಾ ಬಿರಾದಾರ, ಮಲ್ಲನಗೌಡ ಸೋಮಜಾಳ, ಕೃತಿ ದೇಶಮುಖ ವಿದ್ಯಾನಿಕೇತನ ಮತ್ತು ಪ್ರೇರಣಾ ಪ್ರಾಥಮಿಕ ಶಾಲೆಗಳ ಪ್ರಧಾನ ಕಾರ್ಯದರ್ಶಿಗಳಾಗಿ ಅಧಿಕಾರ ಸ್ವೀಕರಿಸಿದರು. ವಿದ್ಯಾನಿಕೇತನ ಮತ್ತು ಪ್ರೇರಣಾ ಪ್ರಾಥಮಿಕ ಶಾಲೆಗಳ ಪಾಲಕ ಪ್ರತಿನಿಧಿಗಳಾಗಿ ಆಯ್ಕೆಯಾದ ಲಕ್ಷ್ಮಿ ಗುಗ್ಗರಿ ಮತ್ತು ರಾಘವೇಂದ್ರ ಹಾದಿಮನಿ ಸೇರಿದಂತೆ ಚಾಲಕರು ಮತ್ತು ಆಯಾಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ನ್ಯೂ ಎರಾ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಲೀಲಾ ನಾಯಕ, ಬೋಧಕ ಸಿಬ್ಬಂದಿಗಳಾದ ಸತೀಶ ಕುಲಕರ್ಣಿ, ಕಿರಣ ಕುಲಕರ್ಣಿ, ಸನತ ಕುಲಕರ್ಣಿ, ಅಲ್ತಾಪ ತಾಂಬೋಳಿ, ಅಕ್ಷಯ ಯಲಗಟ್ಟಿ, ಶ್ರೀಕಾಂತ ಹೂನಳ್ಳಿ, ಎಸ್.ಬಿ.ಕುಂಟೋಜಿ, ಸಂತೋಷ ನಾಯಕ, ಎಸ್.ಎಸ್.ಯಂಕಂಚಿ, ಎಮ್.ಎಮ್.ಜುಮನಾಳ, ಬಿ.ಎಸ್.ಪಾಟೀಲ, ಎಸ್ವ್ಹಿ.ಕಡಣಿ, ಎಮ್.ಜಿ.ದ್ಯಾಮಗೊಂಡ, ವಿ.ಎ.ನಾಯಕ, ಎಸ್.ಡಿ. ನಾಯಕ, ವಿಜಯಲಕ್ಷ್ಮಿ ಅಲಾಳಮಠ, ಸಾವಿತ್ರಿ ವೀರಾಪೂರ, ಕುಮಾರಿ ಎನ್.ಜಿ.ಬಳಗಾನೂರ, ಆರ್.ಎಮ್.ಫಕೀರಪುರ, ಆರ್.ಎಸ್.ಶಿವಸಿಂಪಿಗೇರ, ಎಸ್.ಎಸ್.ಪಾಟೀಲ, ಜಿ.ಎಸ್.ಯಂಕAಚಿ ಸೇರಿದಂತೆ ಬೋಧಕ-ಬೋಧಕೇತರ ಸಿಬ್ಬಂದಿಗಳು ಇದ್ದರು. ಅದಿತಿ ಪಾಟೀಲ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ, ಎಮ್.ಪಿ.ಬುಕ್ಕಾ ಸ್ವಾಗತಿಸಿದರು. ಎಮ್.ಜಿ.ದ್ಯಾಮಗೊಂಡ, ಎಸ್.ಡಿ.ನಾಯಕ ನಿರೂಪಿಸಿದರು. ಸಾವಿತ್ರಿ ವೀರಾಪುರ ವಂದಿಸಿದರು.

