ದೇವರಹಿಪ್ಪರಗಿ: ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸರಬರಾಜು ಟ್ರಾನ್ಸ್ಫಾರ್ಮರ್ಗೆ ಪೂಜೆ ಸಲ್ಲಿಸುವುದರ ಮೂಲ ಆಯುಧ ಪೂಜೆಯನ್ನು ವಿಶೇಷವಾಗಿ ಆಚರಿಸಿದರು.
ಪಟ್ಟಣದ ಹೆಸ್ಕಾಂ ಸಿಬ್ಬಂದಿ ಮಹಾನವಮಿಯ ಆಯುಧಪೂಜೆ ಅಂಗವಾಗಿ ಸೋಮವಾರ ಇಂಡಿ ರಸ್ತೆಯಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ಗೆ ಕುಂಬಳಕಾಯಿ ಒಡೆದು, ಪೂಜೆ ಸಲ್ಲಿಸುವುದರ ಜೊತೆಗೆ ಪ್ರಸಾದ ವಿತರಿಸಿದರು.
ಶಾಖಾಧಿಕಾರಿ ಉಮೇಶ ಪಟ್ಟಣ, ಮೇಲ್ವಿಚಾರಕ ಶಿವಾನಂದ ಕೊಡಗೆ, ದೇವೇಂದ್ರ ಯಾಳಗಿ, ಪ್ರದೀಪ ಹಿರೇಮಠ, ಶ್ರೀಶೈಲ ನಾವಿ, ಈರಯ್ಯಾ ಹಿರೇಮಠ, ಹರೀಶ ಬಿರಾದಾರ, ಮೃತ್ಯುಂಜಯ ಕಲ್ಯಾಣಮಠ, ಸದಾಶಿವ ನಿಂಗಪ್ಪ, ಪ್ರಭುಗೌಡ ಬಗಲಿ, ಸುರೇಶ ನಡಗೇರಿ, ಮಹೇಶ ವಗ್ಗರ, ಸಲೀಂ ಪಟೇಲ ಉಣ್ಣಿಭಾವಿ, ಮಲ್ಲನಗೌಡ ಬಿರಾದಾರ, ಶಂಕರ ಅವುಟಿ. ಎಸ್.ಎಸ್.ಬಜಂತ್ರಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

