ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪ್ರೀತಿಯ ಪದಕೋಶಕ್ಕೆ ಹೊಸ ಭಾಷ್ಯಯನ್ನು ಸೇರಿಸಿದ ನಲಮೆಯ ಕವಿ ಶಿವರುದ್ರಪ್ಪನವರು ರಾಷ್ಟ್ರಕವಿಯಾಗಿ ಕನ್ನಡದ ಅಸ್ಮಿತೆಯಾಗಿದ್ದರು ಎಂದು ಪ್ರೊ.ಮಲ್ಲಿಕಾರ್ಜುನ ಮೇತ್ರಿ ಹೇಳಿದರು.
ಅವರು ತಾಲ್ಲೂಕಿನ ರಾಂಪೂರ ಆರೂಢಮಠ
ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವೇದಿಕೆ ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿಂದಗಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸಮನ್ವಯ ಕವಿ ಡಾ.ಜಿ.ಎಸ್.ಶಿವರುದ್ರಪ್ಪ ವಿಶೇಷ ಉಪನ್ಯಾಸ ನೀಡಿದರು.
ದೇಸಿನೆಲೆಯಲ್ಲಿ ಕನ್ನಡವನ್ನು ಬೆಳೆಸಿದ ಕೀರ್ತಿ ಜಿಎಸ್.ಎಸ್ ಅವರಿಗೆ ಸಲ್ಲುತ್ತದೆ, ಜಾಗತಿಕ ಸಾಹಿತ್ಯಕ್ಕೆ ಕನ್ನಡವನ್ನು ಪ್ರತಿನಿಧಿಸುವ ಮೇರು ಅವರಾಗಿದ್ದರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆಯ ಸಂಚಾಲಕ ಶಂಕರ ಬೈಚಬಾಳ ಮಾತನಾಡಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಆರೂಢಮಠದ ನಿತ್ಯಾನಂದ ಮಹಾರಾಜರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಎಸ್ ಎಸ್. ಹಳಮನಿ ಮಾತನಾಡಿ ‘ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖ್ಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಪುಸ್ತಕಪ್ರೀತಿ ಮತ್ತು ಸಾಹಿತ್ಯದ ರುಚಿ ಬೆಳೆಸುವದಾಗಿದೆ, ಇಂತಹ ಕಾರ್ಯಕ್ರಮ ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದು ಅಭಿನಂದನಾರ್ಹವಾಗಿದೆ ಎಂದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕ ಡಾ.ರಾಜಶೇಖರ ಬೆನಕನಳ್ಳಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹಣಮಂತ ಹರವಾಳ , ಎನ್ ಎಸ್ಎಸ್ ಸಂಯೋಜನಾಧಿಕಾರಿ ಡಾ.ಯಮನಪ್ಪ ಕೆಳಗೇರಿ, ಪ್ರೊ.ರಾಜೇಸಾಬ ಮೊದಲಾದವರು ವೇದಿಕೆಯಲ್ಲಿದ್ದರು.
ಕು. ಶಶಿಕಲಾ ಪ್ರಾರ್ಥಿಸಿದರು. ಪ್ರೊ.ರಾಜೇಸಾಬ ಸ್ವಾಗತಿಸಿದರು. ಡಾ. ಕೆಳಗೇರಿ ವಂದಿಸಿದರು. ಡಾ. ರಮೇಶ ಕತ್ತಿ ನಿರೂಪಿಸಿದರು.

