ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೬-೨೭ ನೇ ಸಾಲಿನ ತೋಟಗಾರಿಕೆ ಇಲಾಖೆಯ ಅಧೀನದಲ್ಲಿರುವ ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ, ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ಅರ್ಜಿ ಆಹ್ವಾನಿಸಲಾಗಿದೆ.
ವಿಜಯಪುರ ಜಿಲ್ಲೆಗೆ ೧೭ ಅಭ್ಯರ್ಥಿಗಳನ್ನು ಅದರಲ್ಲಿ ೦೬ ಮಹಿಳಾ ಹಾಗೂ ೦೩ ಪರಿಶಿಷ್ಟ ಜಾತಿ ಅಭ್ಯರ್ಥಿಗಳನ್ನು ಒಳಗೊಂಡAತೆ ರೈತರ ಮಕ್ಕಳಿಗೆ ೧೦ ತಿಂಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ತರಬೇತಿಗೆ ಜಿಲ್ಲೆಯಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇವಲ ರೈತ ಮಕ್ಕಳಿಗೆ ಮಾತ್ರ ಬೆಳಗಾವಿ ಜಿಲ್ಲೆಯ ಹಿಡಕಲ್ ಡ್ಯಾಂ, ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು.
ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ಅಭ್ಯರ್ಥಿಯ ತಂದೆ, ತಾಯಿ, ಪೋಷಕರು ಅಥವಾ ಅಭ್ಯರ್ಥಿಯ ಸ್ವತಃ ಹೆಸರಿನಲ್ಲಿ ಜಮೀನು ಇರುವ ಬಗ್ಗೆ, ದಾಖಲೆ ಪಹಣಿಯಲ್ಲಿ ನೋಂದಣಿ ಇರಬೇಕು ಮತ್ತು ಅಭ್ಯರ್ಥಿ ಸ್ವತಃ ಕೃಷಿ-ತೋಟಗಾರಿಕೆ ಭೂಮಿಯಲಿ ಸಾಗುವಳಿ ಮಾಡುತ್ತಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಕನಿಷ್ಠ ೧೮ ಗರಿಷ್ಠ ೩೩ ವರ್ಷ, ಮಾಜಿ ಸೈನಿಕರಿಗೆ ಕನಿಷ್ಠ ೩೩ ಗರಿಷ್ಠ ೬೫ ವರ್ಷ ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ ೧೮ ಗರಿಷ್ಠ ೩೦ ವರ್ಷದೊಳಗಿರಬೇಕು.
ತೋಟಗಾರಿಕೆ ತರಬೇತಿ ಪಡೆಯಲು ಬಯಸುವ ವಿಜಯಪುರ ಜಿಲ್ಲೆಯ ರೈತರ ಮಕ್ಕಳು ಅರ್ಜಿಗಳನ್ನು ಜಿಲ್ಲೆಯ ತೋಟಗಾರಿಕೆ ಜಂಟಿ ನಿರ್ದೇಶಕರು ಜಿಲಾ,ಪಂಚಾಯತ್ ವಿಜಯಪುರ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರಾಜ್ಯ ವಲಯ ವಿಜಯಪುರ ಅವರ ಕಚೇರಿಗಳಿಂದ ಅಥವಾ ವೆಬ್-ಸೈಟ್ hಣಣಠಿs:// hoಡಿಣiಛಿuಟಣuಡಿeಜiಡಿ.ಞಚಿಡಿ.gov.iಟಿ ನಲ್ಲಿ, ದಿನಾಂಕ: ೧೨-೦೩-೨೦೨೬ ರಿಂದ ೧೩-೦೪-೨೦೨೬ ರ ಒಳಗೆ ಡೌನ್ಲೌಡ್ ಮಾಡಿಕೊಳ್ಳಬಹುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ೧೫ ರೂ. ಸಾಮಾನ್ಯ ಅಭ್ಯರ್ಥಿಗಳಿಗೆ ೩೦ ರೂ. ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ (IPಔ)- ಡಿಮ್ಯಾಂಡ್ ಡ್ರಾಫ್ಟ್ (ಆಆ) ಅನ್ನು ತೋಟಗಾರಿಕೆ ಉಪನಿರ್ದೇಶಕರು ಜಿಲ್ಲಾ, ಪಂಚಾಯತ್,ವಿಜಯಪುರ ಅವರ ಹೆಸರಿನಲ್ಲಿ ಪಡೆದು ಅರ್ಜಿಗೆ ಲಗತ್ತಿಸಬೇಕು.
ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ: ೧೨-೦೩-೨೦೨೬ ರಿಂದ ೧೫-೦೪-೨೦೨೬ ರ ಸಂಜೆ ೫.೩೦ ಗಂಟೆಯೊಳಗಾಗಿ ಸಲ್ಲಿಸುವುದು.ಅರ್ಜಿ ಸಲ್ಲಿಕೆಗೆ ಏ.೧೫ ಕೊನೆ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಸಹಾಯಕ ತೋಟಗಾರಿಕೆ ನಿರ್ದೇಶಕರ ಮೊ:೮೩೧೦೭೦೩೫೧೧ ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿಗಳ ಮೊ:೯೫೩೫೬೦೨೯೧೮ ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
