Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»Uncategorized»ವಿಶ್ವಸಂಸ್ಥೆಯ ಮಾನವ ಹಕ್ಕುಗಳಲ್ಲಿ ಬಸವಣ್ಣನವರ ವಚನಗಳು
Uncategorized

ವಿಶ್ವಸಂಸ್ಥೆಯ ಮಾನವ ಹಕ್ಕುಗಳಲ್ಲಿ ಬಸವಣ್ಣನವರ ವಚನಗಳು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಿಂದಗಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ

ಸಿಂದಗಿ: ಸಕಲ ಜೀವಾತ್ಮಗಳಿಗೆ ಲೇಸನ್ನೇ ಬಯಸಿದ ಹನ್ನೆರಡನೆಯ ಶತಮಾನದ ಶರಣರ ವಚನಗಳ ಸಾರದಲ್ಲಿ ಕಾಯಕ ನಿಷ್ಠೆ, ಸ್ವಾವಲಂಬಿತನ, ಸ್ವಾತಂತ್ರ‍್ಯ ಮತ್ತು ಹಕ್ಕುಗಳ ಸಮ ಸಮಾಜದ ಆಶಯಗಳ ಮದ್ದು ಅಡಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಶರಣಪ್ಪ ಕಂಚ್ಯಾಣಿ ಹೇಳಿದರು.
ಸೋಮವಾರ ನಗರದಲ್ಲಿನ ಸಾರಂಗಮಠ-ಗಚ್ಚಿನಮಠದ ಆವರಣದಲ್ಲಿ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸಿಂದಗಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅವರು, ವಚನಗಳಲ್ಲಿನ ತತ್ವಾದರ್ಶ, ಸಂದೇಶ, ಆಚಾರ ವಿಚಾರಗಳಿಗೆ ಜನ-ಮನ ಕಿವಿಗೊಡುವಂತೆ, ಆಲಿಸಿ, ಪಾಲಿಸುವುದರ ಮೂಲಕ ಅದನ್ನು ಭವಿಷ್ಯದ ಮಕ್ಕಳಿಗೆ ಪಸರಿಸುವ ಉದ್ದೇಶವನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹೊಂದಿದೆ. ಈ ದಿಸೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಬಸವಣ್ಣನವರ ಚಿಂತನೆಗೆ ಮಾರು ಹೋಗಿ, ಎಲ್ಲೆಡೆ ಅವರ ವಚನಗಳನ್ನು ಪಠಿಸುತ್ತ, ಅವರ ಜ್ಞಾನ ಜ್ಯೋತಿಯನ್ನು ಬೆಳಗಿಸಿದ್ದಾರೆ. ಇಂಗ್ಲೆಂಡಿನಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲೂ ಸರ್ವಸಮಾನತೆ, ಸ್ವಾತಂತ್ರ‍್ಯವನ್ನು ಪ್ರತಿಪಾದಿಸಿ, ಪಾಲಿಸಿದ ವಿಶ್ವದ ವ್ಯಕ್ತಿ ಕರ್ನಾಟಕದ ಬಸವಣ್ಣ ಎಂಬುದನ್ನು ಘೋಷಿಸಿ, ಅವರನ್ನು ವಿಶ್ವಜ್ಯೋತಿ ಎಂದು ಕರೆದಿದ್ದಾರೆ. ಬಸವಣ್ಣನವರ ಕಾಯಕ ಪ್ರೀತಿ ಮತ್ತು ನಾಯಕ ನೀತಿಗಳುಳ್ಳ ವಚನಗಳನ್ನು ವಿಶ್ವಸಂಸ್ಥೆಯು ಜಾರಿಗೆ ತಂದ ಮೂವತ್ತು ಅಂಶಗಳ ಮಾನವ ಹಕ್ಕುಗಳಲ್ಲಿ ಕಾಣಬಹುದು ಎಂದರು.
ಈ ವೇಳೆ ನಿಕಟಪೂರ್ವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮ.ಗು.ಯಾದವಾಡ, ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಚನ್ನಪ್ಪ ಕತ್ತಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಡಾ.ಶರಣಬಸವ ಜೋಗೂರ ಮಾತನಾಡಿ, ಶರಣರ ಜೀವನ ಸಿದ್ಧಾಂತ, ಸಮ ಸಮಾಜದ ಚಿಂತನೆ, ಬದುಕಿಗೆ ಕಾಯಕ ಶೃದ್ಧೆಯನ್ನು ಸಮರ್ಪಿಸಿದ ಶರಣ ಸಂಕುಲದ ಪ್ರಚಾರ ಮತ್ತು ಅವರ ತತ್ವಾದರ್ಶಗಳನ್ನು ಸರ್ವರಿಗೂ ಪರಿಚಯಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಶರಣ ಸಾಹಿತ್ಯದಲ್ಲಿ ಪಾಲ್ಗೊಳ್ಳುವ ಮೂಲಕ ನಾವು ಆತ್ಮೋದ್ಧಾರದ ಲಾಭ ಮತ್ತು ಆಧ್ಯಾತ್ಮ ಚಿಂತನೆಗಳಿಂದ ಪಡೆವ ಆದರ್ಶ ನಮ್ಮೆಲ್ಲರ ಬದುಕಿನ ಆದರ್ಶ ಹೆಜ್ಜೆಗೆ ಪ್ರೇರಣೆಯಾಗುತ್ತದೆ ಎಂದರು.
ಈ ವೇಳೆ ಸಲಹಾ ಸಮಿತಿಯ ಅಂಬಣ್ಣ ಗಾಯಕವಾಡ, ಡಾ.ಎಂ.ಎಂ.ಪಡಶೆಟ್ಟಿ, ಡಾ.ಚನ್ನಪ್ಪ ಕಟ್ಟಿ, ಪ್ರೊ.ಎಂ.ಎಸ್.ಹಯ್ಯಾಳಕರ, ಕೆ.ಎಚ್.ಸೋಮಾಪೂರ, ಮಹಾನಂದ ಬಮ್ಮಣ್ಣಿ, ಶಕುಂತಲಾ ಹಿರೇಮಠ, ಸಿದ್ದಪ್ಪ ಹಿರೇಕುರುಬರ ಸೇರಿದಂತೆ ಆರ್.ಆರ್.ಹಂಚಿನಾಳ, ಪರಶುರಾಮ ಕೋಳೂರ, ಅಶೋಕ ವಾರದ, ಸಿ.ಎಂ.ಪೂಜಾರಿ, ಬಾಬು ಕಮತಗಿ, ಶಿವಕುಮಾರ ಶಿವಶಿಂಪಿ, ಶಿವಾನಂದ ಕಲಬುರ್ಗಿ, ವಿರೇಶ ಜೋಗುರ, ಗವಿಸಿದ್ದಪ್ಪ ಆನೆಗುಂದಿ ಮತ್ತಿತರರಿದ್ದರು.

*ತಾಲೂಕು ಘಟಕದ ನೂತನ ಪದಾಧಿಕಾರಿಗಳು*
ಡಾ.ಶರಣಬಸವ ಜೋಗೂರ (ಅಧ್ಯಕ್ಷ), ಶಿವಮಾಂತ ಪೂಜಾರಿ ಹಾಗೂ ಸುನೀಲ ದೇವರಮನಿ (ಉಪಾಧ್ಯಕ್ಷ), ದಯಾನಂದ ಬಿರಾದಾರ (ಕೋಶಾಧ್ಯಕ್ಷ), ಸಿದ್ಧಲಿಂಗ ಕಿಣಗಿ (ಕಾರ್ಯದರ್ಶಿ), ಸುಧಾಕರ ಚವ್ಹಾಣ (ಸಹ ಕಾರ್ಯದರ್ಶಿ), ಬಸಯ್ಯ ಗೋಲಗೇರಿಮಠ ಮತ್ತು ಸಂತೋಷ ಮಲಘಾಣ (ಸಂಘಟನಾ ಕಾರ್ಯದರ್ಶಿ), ವಿಶ್ವನಾಥ ನಂದಿಕೋಲ (ದತ್ತಿ ಸಂಚಾಲಕ), ರವಿಚಂದ್ರ ಮಲ್ಲೇದ (ಪತ್ರಿಕಾ ಪ್ರತಿನಿಧಿ), ಯುವ ಘಟಕಕ್ಕೆ ಪ್ರಸನ್ನ ಜೋಗೂರ (ಅಧ್ಯಕ್ಷ), ಕದಳಿ ವೇದಿಕೆಗೆ ಶ್ರೀಮತಿ ಸುಜಾತಾ ಕಿಣಗಿ (ಅಧ್ಯಕ್ಷೆ), ಡಾ. ಸೀಮಾ ವಾರದ (ಮಹಿಳಾ ಪ್ರತಿನಿಧಿ), ನಿಕಟಪೂರ್ವ ಅಧ್ಯಕ್ಷ ಚನ್ನಪ್ಪ ಸಂಗಪ್ಪ ಕತ್ತಿ.
ಕದಳಿ ವೇದಿಕೆಗೆ: ಶ್ರೀಮತಿ ಮುಕ್ತಾಯಕ್ಕ ಕತ್ತಿ (ಕಾರ್ಯದರ್ಶಿ), ಶ್ರೀಮತಿ ಸಾವಿತ್ರಿ ಗಂಗನಳ್ಳಿಮಠ ಹಾಗೂ ಶ್ರೀಮತಿ ರೇಣುಕಾದೇವಿ ವಸ್ತçದ (ಸಹ ಕಾರ್ಯದರ್ಶಿ), ಶ್ರೀಮತಿ ದಾಕ್ಷಾಯಣಿ ಪಾಟೀಲ ಹಾಗೂ ಶ್ರೀಮತಿ ಜಗದೇವಿ ಅಂಬಲಗಿ (ಸಂಘಟನಾ ಕಾರ್ಯದರ್ಶಿ), ಆರತಿ ಲಿಂಗರಾಜ ಮತ್ತು ಮಧು ಬಮ್ಮಣ್ಣಿ.

*ಯುವ ಘಟಕ ಪದಾಧಿಕಾರಿಗಳು*
ಮಹಾಂತೇಶ ನೂಲಾನವರ (ಉಪಾಧ್ಯಕ್ಷ), ಭೀಮಾಶಂಕರ ಅರಳಗುಂಡಗಿ (ಕಾರ್ಯದರ್ಶಿ), ಚನ್ನಬಸವರಾಜ ಕತ್ತಿ ಹಾಗೂ ಸತೀಶ ಹಿರೇಮಠ (ಸಹ ಕಾರ್ಯದರ್ಶಿ), ಶಿವಕುಮಾರ ಜೋಗೂರ ಹಾಗೂ ಶ್ರೀಕಾಂತ ಜಂಗಿನಮಠ (ಸಂಘಟನಾ ಕಾರ್ಯದರ್ಶಿ) ಸದಸ್ಯರಾಗಿ ಮಡಿವಾಳಪ್ಪ ಮಡಿವಾಳರ ಪದಗ್ರಹಣ ಮಾಡಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ :ಎಸಿ ಅನುರಾಧ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ
    In (ರಾಜ್ಯ ) ಜಿಲ್ಲೆ
  • ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮೌಢ್ಯಗಳ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಕೊಂಡಗೂಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ಸಚಿವರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಸವ ಚೇತನ ಪ್ರಶಸ್ತಿಗೆ ಕೆ.ಎಸ್.ಕೋರಿ ಆಯ್ಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.