Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದ್ಯಮಿ ಡಿ.ವೈ.ಉಪ್ಪಾರ ನಿಧನಕ್ಕೆ ಸಚಿವ ಎಂ.ಬಿ.ಪಾಟೀಲ ಕಂಬನಿ

ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯರು

ಮರಳಿ ಬಂದು ಬಿಡು ಪ್ರೀತಿಯ ಹೂಗುಚ್ಛ ಹಿಡಿದು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಾಧನೆಯ ಹಾದಿಯಲ್ಲಿ ಗ್ರಾಪಂ ನೌಕರ ಗುಡಿಮನಿ
(ರಾಜ್ಯ ) ಜಿಲ್ಲೆ

ಸಾಧನೆಯ ಹಾದಿಯಲ್ಲಿ ಗ್ರಾಪಂ ನೌಕರ ಗುಡಿಮನಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp
  • ಚೇತನ ಶಿವಶಿಂಪಿ
    ಮುದ್ದೇಬಿಹಾಳ: ಸಾಕಷ್ಟು ಅಂತಸ್ತು, ಐಶ್ವರ್ಯ ಹೊಂದಿದ ಕೆಲವರಿಗೆ ಯಾವ ವಿದ್ಯೆಯೂ ಒಲಿಯಲ್ಲ. ಕಿತ್ತು ತಿನ್ನೋ ಬಡತನ ಇರುವಲ್ಲಿ ಸಾಕಷ್ಟು ವಿದ್ಯೆಗಳು ತಾಂಡವಾಡುತ್ತಿರುತ್ತವೆ ಅನ್ನೋ ಹಿರಿಯರ ಮಾತು ನಿಜಕ್ಕೂ ಸುಳ್ಳಲ್ಲ. ಭಾರತದ ಇತಿಹಾಸವನ್ನು ಕೆದಕಿದಾಗ ಕೆಸರಲ್ಲಿ ಅರಳುವ ಕಮಲದಂತೆ ಅದೆಷ್ಟೋ ಜನ ಬಡತನದಲ್ಲಿಯೇ ಬೆಂದು ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಇದೇ ಸಾಲಿನಲ್ಲಿ ಇಲ್ಲೊಬ್ಬ ಸರ್ಕಾರಿ ನೌಕರನೂ ಖಂಡಿತ ಸೇರುತ್ತಾನೆ.
    ತನ್ನ ೧೪ನೇ ವಯಸ್ಸಿನಲ್ಲಿ ತಂದೆ ತಾಯಿಯರನ್ನು ಕಳೆದುಕೊಂಡು, ಒಬ್ಬಳು ಅಕ್ಕ ಇಬ್ಬರು ತಮ್ಮಂದಿರನ್ನು ಸಲಹುವ ಭಾರ ಹೊತ್ತ ಈ ನೌಕರ ಸಧ್ಯ ಈ ಭಾಗದ ಜನತೆಯ ಮನಗೆದ್ದು, ಇಲಾಖೆಯ ಗೌರವ ಹೆಚ್ಚಿಸಿ, ಗ್ರಾಮದ ಹೆಸರನ್ನು ರಾಜ್ಯ ಮಟ್ಟದಲ್ಲಿ ಮಿಂಚಿಸಿ ಬಹು ದೊಡ್ಡ ಸಾಧನೆ ಮಾಡಿದ್ದಾನೆ.
    ತಾಲೂಕಿನ ಢವಳಗಿ ಗ್ರಾಮದ ಮಡಿವಾಳಪ್ಪ ಕಲ್ಲಪ್ಪ ಗುಡಿಮನಿ ಹುಟ್ಟಿನಿಂದ ಕಡುಬಡವ. ಅವರಿವರು ಕೊಟ್ಟ ಬಟ್ಟೆಯನ್ನು ತೊಟ್ಟು, ತನ್ನ ಮತ್ತು ತನ್ನವರ ದಿನದ ಗಂಜಿಗಾಗಿ ಮಾಡದ ಕೆಲಸಗಳು ಯಾವೂ ಉಳಿದಿಲ್ಲ. ಆಗಿನ ಕಾಲದಲ್ಲಿ ಜಾತಿಯ ಭೂತವೊಂದು ಹೆಚ್ಚು ಸಂಪಾದನೆಯ ದುಡಿಮೆಗೆ ಬಹು ದೊಡ್ಡ ಬೇಲಿಯಾದ ಬಗ್ಗೆ ಈತ ಮರೆತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಎದುರಿಸಿ ಮುಂದೆ ನಮಗೆ ಒಳ್ಳೆಯ ದಿನಗಳು ಬರಬಹುದೆಂಬ ಆಶಾ ಭಾವನೆಯಿಂದ ಮುನ್ನುಗ್ಗುತ್ತಲೇ ಬಂದಿರುವ ಈತನಲ್ಲಿ ಅಡಗಿದ್ದವು ಹಲವಾರು ಕಲೆಗಳು.
    ಸ್ಪೋಟ್ಸ್ ನಲ್ಲಿ ಈತ ನಿಸ್ಸೀಮ. ಲಾಂಗ್ ಜಂಪ್, ಹೈ ಜಂಪ್, ೧೧ಸೆಕೆಂಡುಗಳಲ್ಲಿ ನೂರು ಮೀಟರ್ ಓಟ, ಗುಂಡು ಎಸೆತ, ಚಕ್ರ ಎಸೆತ, ಫುಟ್ ಬಾಲ್, ವ್ಹಾಲಿ ಬಾಲ್, ಕ್ರಿಕೇಟ್ ಹೀಗೆ ಒಂದಲ್ಲ ಎರಡಲ್ಲ, ಈತ ಸಾಧನೆ ಮಾಡದಿರೋ ಆಟಗಳೇ ಇಲ್ಲ ಅಂತಾರೆ ಗುಡಿಮನಿ ಸ್ನೇಹಿತರು. ರಾಜ್ಯಮಟ್ಟದ ಕದಂಬ ಸೇವಾ ರತ್ನ ಪ್ರಶಸ್ತಿ ಪುರಸ್ಕೃತನಾದ ಗುಡಿಮನಿ ಇಲಾಖೆಯ ವತಿಯಿಂದ ಹಲವಾರು ಸ್ಪರ್ದೆಗಳಲ್ಲಿ ಭಾಗವಹಿಸಿ ೧೨ ಪದಕ, ೨೦ ಮೆಡಲ್‌ಗಳು ಸೇರಿದಂತೆ ಹಲವಾರು ಪ್ರಶಸ್ತಿ ಪತ್ರಗಳನ್ನು ಈಗಾಗಲೇ ಮುಡಿಗೇರಿಸಿಕೊಂಡಿದ್ದಾನೆ.
    ಇದಷ್ಟೇ ಅಲ್ಲದೇ ಗ್ರಾಮೀಣ ಕ್ರೀಡೆಗಳಲ್ಲಿಯೂ ಗುಡಿಮನಿ ಸುತ್ತು ಹಳ್ಳಿಗಳಲ್ಲಿ ಹೆಸರು ಮಾಡಿದ್ದಾನೆ. ಅದರಲ್ಲೂ ವಿಶೇಶವಾಗಿ ಭಾರವಾದ ಕಲ್ಲು ಎತ್ತುವದು, ಕಬಡ್ಡಿ ಆಟದಲ್ಲಿ ಈತ ಯಾವತ್ತೂ ಮುಂದು. ನಾಟಕಗಳಲ್ಲಿ ಅಭಿನಯ, ಹಾಡು ಹಾಡುವದು ಮಾತ್ರವಲ್ಲದೇ ಅಡುಗೆ ಮಾಡುವದರಲ್ಲಿಯೂ ಈತನ ಕೈರುಚಿ ಸೂಪರ್. ಅಡುಗೆ ಅಂದರೆ ರೈಸ್ ಐಟಮ್, ಸಾಂಬಾರು ಪಲ್ಯ ಮಾತ್ರವಲ್ಲ, ರೊಟ್ಟಿ, ಚಪಾತಿ, ಹೋಳಿಗೆ, ವಿವಿಧ ಬಗೆಯ ಉಂಡೆಗಳು ಹೀಗೆ ಪ್ರತಿಯೊಂದು ಶಾಖಾಹಾರಿ ಮತ್ತು ಮಾಂಸಾಹಾರಿ ಅಡುಗೆ ತಯಾರಿಯಲ್ಲೂ ಈತನನ್ನು ಮೀರಿಸುವವರಿಲ್ಲ.
    ಕಳೆದ ಹಲವು ವರ್ಷಗಳ ಹಿಂದೆ ದಿನಗೂಲಿ ನೌಕರನಾಗಿ ಢವಳಗಿ ಗ್ರಾಮ ಪಂಚಾಯತಗೆ ಸೇರಿದ ಗುಡಿಮನಿಗೆ ಯೋಗಾ ಯೋಗ ಎಂಬಂತೆ ಸರ್ಕಾರ ಖಾಯಂ ನೌಕರನನ್ನಾಗಿ ನೇಮಿಸಿಕೊಂಡಿದೆ. ಸರ್ಕಾರಿ ನೌಕರನಾದ ಬಳಿಕವೂ ತನ್ನ ಪ್ರಯತ್ನವನ್ನು ಬಿಡದ ಗುಡಿಮನಿ ತನ್ನ ೫೧ನೇ ವಯಸ್ಸಿನಲ್ಲಿಯೂ ಕೂಡ ರಾಜ್ಯವೇ ತನ್ನತ್ತ ತಿರುಗಿನೋಡುವಂತೆ ಸಾಧಿಸಿದ್ದಾನೆ.
    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಲಾಗುವ ಭಾರತ ನಾಗರೀಕ ಕಬಡ್ಡಿ ಸ್ಪರ್ದೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಗುಡಿಮನಿ ಆರ್‌ಡಿಪಿಆರ್ ಇಲಾಖೆಯ ಗೌರವವನ್ನೂ ಹೆಚ್ಚಿಸಿದ್ದಾನೆ. ಅ೧೬ ರಂದು ಭಾರತದ ರಾಜಧಾನಿಯಲ್ಲಿ ನಡೆಯಲಿರುವ ಸ್ಪರ್ದೆಯಲ್ಲಿ ಕಣಕ್ಕಿಳಿಯಲಿರುವ ಈತ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾನೆ.
BIJAPUR NEWS public public news udaya rashmi Udayarashmi today newspaper
Share. Facebook Twitter Pinterest Email Telegram WhatsApp
  • Website

Related Posts

ಉದ್ಯಮಿ ಡಿ.ವೈ.ಉಪ್ಪಾರ ನಿಧನಕ್ಕೆ ಸಚಿವ ಎಂ.ಬಿ.ಪಾಟೀಲ ಕಂಬನಿ

ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯರು

ಮರಳಿ ಬಂದು ಬಿಡು ಪ್ರೀತಿಯ ಹೂಗುಚ್ಛ ಹಿಡಿದು

ಚಿನ್ನ ಬೇಕಾ? ಬೆಳ್ಳಿ ಬೇಕಾ?

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದ್ಯಮಿ ಡಿ.ವೈ.ಉಪ್ಪಾರ ನಿಧನಕ್ಕೆ ಸಚಿವ ಎಂ.ಬಿ.ಪಾಟೀಲ ಕಂಬನಿ
    In (ರಾಜ್ಯ ) ಜಿಲ್ಲೆ
  • ಮುಂಬೈ ಟಾಟಾ ಮ್ಯಾರಥಾನ್ ನಲ್ಲಿ ವಿಜಯಪುರ ಸೈಕ್ಲಿಂಗ್ ಗ್ರುಪ್ ಸದಸ್ಯರು
    In (ರಾಜ್ಯ ) ಜಿಲ್ಲೆ
  • ಮರಳಿ ಬಂದು ಬಿಡು ಪ್ರೀತಿಯ ಹೂಗುಚ್ಛ ಹಿಡಿದು
    In ವಿಶೇಷ ಲೇಖನ
  • ಚಿನ್ನ ಬೇಕಾ? ಬೆಳ್ಳಿ ಬೇಕಾ?
    In ವಿಶೇಷ ಲೇಖನ
  • ಪರೀಕ್ಷೆಯ ಒತ್ತಡ ಎದುರಿಸುವುದು ಹೇಗೆ?
    In ವಿಶೇಷ ಲೇಖನ
  • ಫೆ.೭ರಂದು ಜವಾಹರ ನವೋದಯ ವಿದ್ಯಾಲಯ: ಪ್ರವೇಶ ಪರೀಕ್ಷೆ
    In (ರಾಜ್ಯ ) ಜಿಲ್ಲೆ
  • ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
  • ನಮಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ಹೆಚ್.ಡಿ.ಕೋಟೆ ತಾಲೂಕು
    In (ರಾಜ್ಯ ) ಜಿಲ್ಲೆ
  • ಅರ್ಜುನ ನೆನಪಿಸಲು ಇದೇ 30 ರಂದು ಬರ್ತಿದೆ ‘ಮಾವುತ’
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ೨೦ಸಾವಿರ ಅಕ್ರಮ ಬಾಂಗ್ಲಾ ವಾಸಿಗಳು!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.