Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ
(ರಾಜ್ಯ ) ಜಿಲ್ಲೆ

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಓದಿನ ತಿಳುವಳಿಕೆಯ ಅಗಾಧತೆ ಮತ್ತು ಮಿತಿ

  • ವಿವೇಕಾನಂದ ಎಚ್.ಕೆ, ಬೆಂಗಳೂರು

ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತದೆಯೇ?
ಈ ರೀತಿಯ ಅನುಮಾನ ಬಲವಾಗುತ್ತಿದೆ. ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ. ತುಂಬಿದ ಕೊಡ ತುಳುಕಲು ಸಾಧ್ಯವಿಲ್ಲ ಮತ್ತು ಅವಕಾಶವೂ ಇಲ್ಲ. ಅದು ನಮ್ಮಲ್ಲಿ ಜೀವಪರ ನಿಲುವನ್ನೂ, ವಿನಯವನ್ನು, ಪ್ರಬುದ್ದತೆಯನ್ನು, ತಾಳ್ಮೆಯನ್ನು ಮತ್ತು ಒಟ್ಟಾರೆ ಸಮಷ್ಟಿ ಪ್ರಜ್ಞೆಯನ್ನು ಬೆಳೆಸುತ್ತದೆ.
ಆದರೆ, ಅದೇ ಓದು ಬಹಳಷ್ಟು ಜನರಲ್ಲಿ ಅಹಂಕಾರವನ್ನು, ಸಣ್ಣ ಮನಸ್ಸನ್ನು, ಅಸೂಯಾಪರ ಗುಣವನ್ನು, ಕ್ಷುಲ್ಲುಕ ವ್ಯಕ್ತಿತ್ವವನ್ನು ರೂಪಿಸುವ ಸಾಧ್ಯತೆ ಇದೆ.
ನಾನು ಎಲ್ಲರಿಗಿಂತ ಹೆಚ್ಚು ಓದಿದ್ದೇನೆ‌‌. ಎಲ್ಲಾ ಶ್ಲೋಕಗಳು, ಅಧ್ಯಾಯಗಳು, ಮಂತ್ರಗಳು, ಕಾಲಂಗಳು ನನಗೆ ನೆನಪಿದೆ, ನಾನು ಅದನ್ನು ಅತ್ಯಂತ ಸಮರ್ಥವಾಗಿ ನೆನಪಿಟ್ಟು ವಾದಿಸಬಲ್ಲೆ, ನನ್ನ ಸಹವರ್ತಿಗಳಿಗೆ ಆ ಮಟ್ಟದ ನೆನಪು ಮತ್ತು ಜ್ಞಾನ ಇಲ್ಲ , ಅವರ ವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲ ಎಂದು ಸಹಜ ಸಾಮಾನ್ಯ ಜನರನ್ನು ಕೀಳಾಗಿ ಕಾಣುವ ಮನೋಭಾವ ಕಂಡುಬರುತ್ತಿದೆ.
ಪ್ರಾರಂಭದ ದಿನಗಳಲ್ಲಿ ಅಕ್ಷರ ಬರದವರನ್ನು, ಅನಂತರ ‌ಸಂಸ್ಕೃತ ಕಲಿಯದವರನ್ನು, ನಂತರ ಇಂಗ್ಲೀಷ್ ಮಾತನಾಡದವರನ್ನು ಬಹಳ ಲಘುವಾಗಿ ಕಾಣಲಾಗುತ್ತಿತ್ತು.
ಈಗ ಹೃದಯದ ಭಾಷೆಗಿಂತ ಮೆದುಳಿನ ಭಾಷೆಗೆ ಹೆಚ್ಚಿನ ಮಹತ್ವ ಕೊಡುತ್ತಿರುವುದು ಕಂಡುಬರುತ್ತಿದೆ.
ಭಗವದ್ಗೀತೆಯ ಶ್ಲೋಕಗಳನ್ನು,
ಖುರಾನಿನ ಅಧ್ಯಾಯಗಳನ್ನು,
ಬೈಬಲ್‌ನ ಸಂದೇಶಗಳನ್ನು,
ಸಾಹಿತ್ಯದ ಪ್ರಕಾರಗಳನ್ನು,
ಭಾಷೆಯ ವ್ಯಾಕರಣವನ್ನು,
ಆರ್ಥಿಕತೆಯ ಸೂಕ್ಷ್ಮತೆಯನ್ನು,
ಧಾರ್ಮಿಕ ಆಚರಣೆಗಳನ್ನು,
ಕಲೆಯ ಹೊಳಹುಗಳೂ ಸೇರಿ ಯಾವುದೇ ಕ್ಷೇತ್ರದ ಜ್ಞಾನದ ಮೇಲೆ ಒಬ್ಬರಿಗೆ ಹೆಚ್ಚಿನ ನಿಯಂತ್ರಣ ಸಾಧ್ಯವಾಗಿದ್ದರೆ ಅದು ಆ ವ್ಯಕ್ತಿಯ ಸರಳ ನಡವಳಿಕೆಗೆ ಕಾರಣವಾಗಿ ಸಾಮಾನ್ಯ ಜನರಿಗೆ ಅದನ್ನು ಅತ್ಯಂತ ವಿನಯದಿಂದ ತಲುಪಿಸುವ ಮತ್ತು
ಜ್ಞಾನ ಕೂಡ ಹರಿಯುವ ನೀರಿನಂತೆ,
ಸದಾ ಕಾಲ ಚಲಿಸುತ್ತಲೇ ಇರುತ್ತದೆ, ಅದು ಶಾಶ್ವತ ಅಲ್ಲ, ಬದಲಾವಣೆ ಆಗುತ್ತಲೇ ಇರುತ್ತದೆ. ಇಂದಿನ ನನ್ನ ಜ್ಞಾನ ಮುಂದೆ ಅಪ್ರಸ್ತುತ ವಾಗಬಹುದು ಎಂಬ ಅರಿವು ಓದಿರುವವರಿಗೆ ಇರಬೇಕಾಗುತ್ತದೆ.
ಅವರ ವರ್ತನೆ ಸಹಜವಾಗಿರಬೇಕೆ ಹೊರತು ವಿಚಿತ್ರವಾಗಿರಬಾರದು.
ಮತ್ತು ಎಲ್ಲಕ್ಕಿಂತ ಹೆಚ್ಚಾಗಿ,
ವಿಶಾಲ ಮನೋಭಾವದ, ಪ್ರೀತಿ ವಿಶ್ವಾಸ ತುಂಬಿದ, ಮಾನವೀಯ ಆಧಾರದ, ಸೌಜನ್ಯದ ನಡವಳಿಕೆಯೇ ಅತ್ಯುನ್ನತ ಜ್ಞಾನವೇ ಹೊರತು, ಅಕ್ಷರಗಳ, ಅಧ್ಯಾಯಗಳ, ಪುಟಗಳ, ಶ್ಲೋಕಗಳ, ದಾಖಲೆಗಳ ಜ್ಞಾನ ಕೇವಲ ವಾದ ಪ್ರತಿವಾದಗಳಿಗೆ ಹೊರತು ಸಮಾಜದ ಶಾಂತಿಯ, ನೆಮ್ಮದಿಯ, ಜನರ ಜೀವನಮಟ್ಟ ಸುಧಾರಣೆಯ ದಿಕ್ಕಿನಲ್ಲಿ ಅವುಗಳ ಪಾತ್ರ ಕಡಿಮೆ.
ಅದು ಈಗಾಗಲೇ ದೃಢಪಟ್ಟಿದೆ.
ಹೆಚ್ಚಿಗೆ ಓದಿರುವವರನ್ನು, ತಲೆ ಪ್ರತಿಷ್ಠೆಯವರನ್ನು ನೋಡಿದರೆ ನಾವು ನಿರಪರಾಧಿಗಳಾಗಿದ್ದರೂ ಪೋಲೀಸರನ್ನು ಕಂಡರೆ ಭಯವಾಗುವಂತೆ ಭಾಸವಾಗುತ್ತದೆ.
ನಮ್ಮ ದೇಶದಲ್ಲಿ ಸಾಕ್ಷರತೆಯ ಸಂಖ್ಯೆ ಹೆಚ್ಚಾಗುತ್ತಿದ್ದರೂ ನಿಜವಾದ ಅರಿವಿರುವವರ ಸಂಖ್ಯೆ ತುಂಬಾ ಕಡಿಮೆಯಿದೆ. ಮುಗ್ಧತೆ ಮತ್ತು ಮೌಡ್ಯತೆಯೇ ಬಹಳಷ್ಟು ತುಂಬಿ ತುಳುಕುತ್ತಿದೆ.
ನಮಗೆ ಸಾಹಿತ್ಯ ಸಂಗೀತ ಕಲೆ ಧಾರ್ಮಿಕತೆ ವಿಜ್ಞಾನ ಮುಂತಾದ ‌ವಿಷಯಗಳಲ್ಲಿ ಪಾಂಡಿತ್ಯವಿದೆ ಎಂದ ಮಾತ್ರಕ್ಕೆ ಸಾಮಾನ್ಯರಿಗಿಂತ ಭಿನ್ನ ಎಂದು ಭಾವಿಸಿ ಆ ಕಲೆಗಳಲ್ಲಿಯೇ ಸಾಮಾನ್ಯರಿಗೆ ಅರ್ಥವಾಗದ ಅಭಿಪ್ರಾಯ ವ್ಯಕ್ತಪಡಿಸಿದರೆ ನಿಮಗೆ ಪ್ರಶಸ್ತಿಯೂ ಬಹುಮಾನವೋ ಅಧಿಕಾರವೂ ಡಾಕ್ಟರೇಟೋ ಬರಬಹುದು. ಆದರೆ ವಿನಯ ಮಾನವೀಯತೆ ಇಲ್ಲದಿದ್ದರೆ ವಿಶಾಲ ಮನೋಭಾವ ಇಲ್ಲದಿದ್ದರೆ ಎಲ್ಲವೂ ವ್ಯರ್ಥ.
ಪ್ರೀತಿಯ ಗುಣ ಮಾತ್ರ ಈ ಸಮಾಜದ ಒಳ್ಳೆಯ ಬದಲಾವಣೆಗೆ ಕಾರಣವಾಗಬಹುದೆ ಹೊರತು ನಿಮ್ಮ ಅಕ್ಷರ ಜ್ಞಾನ ಅಹಂಕಾರ ಸಣ್ಣ ಮನಸ್ಸು ದ್ವೇಷ ಮನೋಭಾವ ಸಮಾಜಕ್ಕೆ ಮಾರಕ.
ಬದುಕಿನ ಅನುಭವದ ಸಾಗರದಲ್ಲಿ ಓದು ಒಂದು ಪೂರಕ ಪ್ರಕ್ರಿಯೆಯೇ ಹೊರತು ಓದಿನಿಂದಲೇ ಅನುಭವ ಪಡೆದರೆ ಅದು ಅಜ್ಞಾನದ ಒಣ ರೂಪ ಅಷ್ಟೆ.
ಸರ್ಕಾರದ – ನ್ಯಾಯಾಲಯಗಳ ರೀತಿಯಲ್ಲಿ ದಾಖಲೆ – ಆಧಾರಗಳು ನಮ್ಮ ಅಭಿಪ್ರಾಯ ರೂಪಿಸದೆ, ನಮ್ಮನ್ನು ನಿಯಂತ್ರಿಸದೆ ಕ್ರಿಯಾತ್ಮಕ ಮನಸ್ಥಿತಿ ನಮ್ಮನ್ನು ಕಾಡಬೇಕು.
( ಕೆಲವು ಅನಿವಾರ್ಯ ಮತ್ತು ಅಧಿಕೃತ ವಿಷಯಗಳನ್ನು ಹೊರತುಪಡಿಸಿ )
ಈ ಅಭಿಪ್ರಾಯವು ನನ್ನನ್ನು ಸೇರಿ
ಎಲ್ಲರಿಗೂ ಸಮನಾಗಿ ಅನ್ವಯಿಸುತ್ತದೆ.

BIJAPUR NEWS public public news udaya rashmi udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ :ಎಸಿ ಅನುರಾಧ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ
    In (ರಾಜ್ಯ ) ಜಿಲ್ಲೆ
  • ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮೌಢ್ಯಗಳ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಕೊಂಡಗೂಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ಸಚಿವರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಸವ ಚೇತನ ಪ್ರಶಸ್ತಿಗೆ ಕೆ.ಎಸ್.ಕೋರಿ ಆಯ್ಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.