ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ನಡೆದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ತಾಲೂಕಾ ಮಟ್ಟದ ಚಡಚಣ, ಇಂಡಿ, ಆಲಮೇಲ, ದೇವರ ಹಿಪ್ಪರಗಿ, ಬಸವನ ಬಾಗೆವಾಡಿ, ನಿಡಗುಂದಿ, ಸಿಂದಗಿ,ಕೊಲ್ಹಾರ, ತಾಳಿಕೋಟಿ, ಮುದ್ದೆಬೀಹಾಳ, ತೀಕೋಟಾ-ಬಬಲೇಶ್ವರ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಚಡಚಣ ತಾಲೂಕಾ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಾದ ಅಧ್ಯಕ್ಷ ರಮೇಶ ಬಿರಾದಾರ, ಪ್ರ.ಕಾರ್ಯದರ್ಶಿ ರಾಜಶೇಖರ ಡೋಣಜಮಠ, ಉಪಾಧ್ಯಕ್ಷ ಸಂಗಮೇಶ ಹೂಗಾರ, ಉಪಾಧ್ಯಕ್ಷ ಅನೀಲ ಕೊಡತೆ, ಕಾರ್ಯದರ್ಶಿ ಸಂಗಮನಾಥ ಚಿಂಚೊಳಿ, ಕಾರ್ಯದರ್ಶಿ ಪ್ರಶಾಂತ ಮುಂಡೇವಾಡಿ, ಕಾರ್ಯಕಾರಿಣಿ ಸದಸ್ಯ ಭಿಮರಾಯ ಕಾರಂಡೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಜಿಲ್ಲಾ ಉಸ್ತುವಾರಿ ಹಾಗೂ ಭ್ರಹತ್ ಹಗೂ ಮಧ್ಯಮ ಕೈಗಾರಿಕಾ ಸಚಿವ ಡಾ| ಎಮ್.ಬಿ. ಪಾಟೀಲ, ಕಾನಿ.ಪ. ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ರಾಜ್ಯ ಕಾರ್ಯದರ್ಶಿ ಪುಂಡಳಲೀಕ ಬಾಳೋಜಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ, ರಾಹುಲ ಆಫ್ಟೆ, ಅವಿನಾಶ ಬಿದರಿ, ಪ್ರಕಾಶ ಬೆಣ್ಣೂರ, ವಿನೋದ ಸಾರವಾಡ ಸೇರಿದಂತೆ ಮತ್ತಿತರರು ಇದ್ದರು.

