ಉದಯರಶ್ಮಿ ದಿನಪತ್ರಿಕೆ
ಆಲಮೇಲ: ೧೨ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭ ಆಲಮೇಲದ ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಜರುಗಿತು.
ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಆಲಮೇಲ ತಾಲೂಕಿನ ಕ.ಸಾ.ಪ ಅಧ್ಯಕ್ಷ ಶಿವಶರಣ ಗುಂದಗಿ ಆಲಮೇಲ ಜನತೆ ಮೇಲೆ ಭರವಸೆ ಇಟ್ಟು ಮಕ್ಕಳ ಸಾಹಿತಿ ಹ.ಮ.ಪೂಜಾರ ರವರು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಆಲಮೇಲ ದಲ್ಲಿ ಹಮ್ಮಿಕೊಂಡಿದ್ದು ನಮ್ಮ ಸೌಭಾಗ್ಯ. ಹಾಗಾಗಿ ಈ ಸಮ್ಮೇಳನವನ್ನು ನಾವೆಲ್ಲರೂ ಪಕ್ಷ ಭೇದ ಮರೆತು ಎಲ್ಲರ ಸಹಕಾರದೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಸೋಣ, ವಿಶೇಷವಾಗಿ ಇದು ಮಕ್ಕಳ ಸಮ್ಮೇಳನವಾಗಿರುವುದರಿಂದ ಜಿಲ್ಲೆಯ ಪ್ರತಿಭಾನ್ವಿತ ಮಕ್ಕಳು ಈ ಸಮ್ಮೇಳನದ ಗೋಷ್ಠಿಗಳಲ್ಲಿ ಭಾಗವಹಿಸುವುದರಿಂದ ನಮ್ಮ ತಾಲೂಕಿನ ಮಕ್ಕಳಿಗೆ ಸಾಹಿತ್ಯದ ಆಸಕ್ತಿ ಬೆಳೆಯುಂತೆ ಮಾಡಲು ಸಹಕಾರಿಯಾಗಬಲ್ಲದು.ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಕ್ಕಳ ಹಿರಿಯ ಸಾಹಿತಿ ಬಿ.ಅರ್.ನಾಡಗೌಡ ರವರನ್ನು ಆಯ್ಕೆ ಮಾಡಿರುವುದು ಸಾಹಿತ್ಯ ಆಸಕ್ತರಿಗೆ ಸಂತೋಷ ತಂದಿದೆ ಎಂದರು.
ಈ ವೇಳೆ ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಮಕ್ಕಳ ಸಾಹಿತ್ಯ ಸಂಗಮದ ಜಿಲ್ಲಾ ಅಧ್ಯಕ್ಷ ಪ್ರೋ.ಎ.ಆರ್.ಹೆಗ್ಗನದೊಡ್ಡಿ ಮಾತನಾಡಿದರು.
ಈ ವೇಳೆ ಶ್ರೀಶೈಲಯ್ಯ ಅಳ್ಳೋಳ್ಳಿಮಠ, ವಿಶ್ವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಅಧ್ಯಕ್ಷ ಎಸ್.ಆಯ್.ಜೋಗೂರ,ರಮೇಶ ಬಂಟನೂರ, ಶಿವಾನಂದ ಜಗತಿ, ಎಸ್.ಎಸ್.ಸಾತಿಹಾಳ, ಶಿವಕುಮಾರ ಶಿವಶಿಂಪಿಗೇರ, ಅಶೋಕಗೌಡ ಕೋಳಾರಿ , ಶ್ರೀಶೈಲ ಮಠಪತಿ, ಅಲೋಕ ಬಡದಾಳ, ಲಕ್ಷ್ಮೀಬಾಯಿ ಕುಂಬಾರ, ಆಲಮೇಲ ತಾಲ್ಲೂಕು ಅಧ್ಯಕ್ಷ ಲಕ್ಷ್ಮೀಪುತ್ರ ಕಿರನಳ್ಳಿ, ಪದಾಧಿಕಾರಿಗಳಾದ ರಮೇಶ ಗಂಗನಳ್ಳಿ, ಅಪ್ಪು ಶೆಟ್ಟಿ, ಅನಂತನಾಗ ಪಾಟೀಲ, ರಾಜೀವ ಕಲಬುರಗಿ, ಚಂದ್ರಕಾಂತ ದೇವರಮನಿ, ಪ್ರಶಾಂತ ಗಡದೆ, ಲಕ್ಷ್ಮೀಬಾಯಿ ಹಳೇಮನಿ, ಸುವರ್ಣ ಸಾರಂಗಮಠ, ಸೀತಾ ಆರೇಶಂಕರ , ಸರುಬಾಯಿ ಬಂಡಗರ, ಸುನೀತಾ ಗುಂಡದ, ರಕ್ಷೀತಾ ಹಡಪದ ಮುಂತಾದವರು ಉಪಸ್ಥಿತರಿದ್ದರು

