Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಶೇ.50 ಮಹಿಳಾ ಮೀಸಲಾತಿ ರಾಜೀವ್ ಗಾಂಧಿ ಕೊಡುಗೆ

ಡಿ.೧೫ ರಂದು ಅಂಚೆ ಅದಾಲತ್

ಗ್ರಾಮ ಸ್ವಚ್ಛತೆಗೆ ಆಧ್ಯತೆ ನೀಡಿ :ಪ್ರಕಾಶ ವಡ್ಡರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹರನಾಳ ಪಿಕೆಪಿಎಸ್: ಮಲ್ಲನಗೌಡರ ಬಣದ ವಿಜಯೋತ್ಸವ
(ರಾಜ್ಯ ) ಜಿಲ್ಲೆ

ಹರನಾಳ ಪಿಕೆಪಿಎಸ್: ಮಲ್ಲನಗೌಡರ ಬಣದ ವಿಜಯೋತ್ಸವ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ದೇವರಹಿಪ್ಪರಗಿ: ಹರನಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಮಲ್ಲನಗೌಡ(ಬಾಬುಗೌಡ) ಬಿರಾದಾರ ನೇತೃತ್ವದ ಬಣ ಜಯಗಳಿಸಿದ ಹಿನ್ನೆಲೆಯಲ್ಲಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ತಾಲ್ಲೂಕಿನ ಹರನಾಳ ಗ್ರಾಮದ ಪಿಕೆಪಿಎಸ್ ಆಡಳಿತ ಮಂಡಳಿಯ ಹನ್ನೊಂದು ಸ್ಥಾನಗಳಿಗೆ ಭಾನುವಾರ ಜರುಗಿದ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಒಂದೇ ಬಣದ ಹನ್ನೊಂದು ಅಭ್ಯರ್ಥಿಗಳು ಅಧಿಕ ಮತಗಳನ್ನು ಪಡೆಯುವುದರ ಮೂಲಕ ಜಯಗಳಿಸಿದರು. ಒಟ್ಟು ೧೨ ಜನ ಸದಸ್ಯರ ಆಡಳಿತ ಮಂಡಳಿಗೆ ಸಾಲಗಾರ ಹಿಂದುಳಿದ ವರ್ಗ ‘ಬ’ ಸ್ಥಾನದಿಂದ ಗಂಗಾಬಾಯಿ ಜೋಗೂರ(ಇಂಗಳಗಿ) ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ ಸಾಲಗಾರ ಸಾಮಾನ್ಯ ಸ್ಥಾನ-೫, ಸಾಲಗಾರ ಮಹಿಳಾ ಮೀಸಲು-೨, ಸಾಲಗಾರ ಹಿಂದುಳಿದ ವರ್ಗ ‘ಅ’ ಸ್ಥಾನ-೦೧, ಸಾಲಗಾರ ಪರಿಶಿಷ್ಟ ಜಾತಿ-೦೧, ಸಾಲಗಾರ ಪರಿಶಿಷ್ಟ ಪಂಗಡ-೦೧, ಬಿನ್ ಸಾಲಗಾರರ ಕ್ಷೇತ್ರ-೦೧ ಹೀಗೆ ಒಟ್ಟು ೧೧ ಸ್ಥಾನಗಳಿಗೆ ಚುನಾವಣೆ ಜರುಗಿತು.
ಚುನಾವಣೆಯಲ್ಲಿ ಸಾಮಾನ್ಯ ಸ್ಥಾನಗಳಿಗೆ ವಿಠ್ಠಲ ಮಂಟ್ಲಾಕುಂಟಿ, ಶಾಂತಗೌಡ ಚೌದ್ರಿ, ಸಿದ್ರಾಮರಡ್ಡಿ ಪಾಟೀಲ, ಶರಣಗೌಡ ಗೊಡಿಹಾಳ, ಸಿದ್ದಣ್ಣ ಅಂಗಡಿ ಮಹಿಳಾ ಮೀಸಲು ಸ್ಥಾನಗಳಿಗೆ ಚಂದ್ರಕಲಾ ಹದ್ನೂರ, ನೀಲಮ್ಮ ಗುಂಡಿ ಹಿಂದುಳಿದ ವರ್ಗ ‘ಅ’ ಸ್ಥಾನಕ್ಕೆ ಗೌರಮ್ಮ ಹಚ್ಯಾಳ ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಸವಿತಾ ನಾಟೀಕಾರ, ಪರಿಶಿಷ್ಟ ಪಂಗಡ ಸ್ಥಾನಕ್ಕೆ ಶಂಕ್ರೆಮ್ಮ ತಳವಾರ, ಬಿನ್ ಸಾಲಗಾರ ಕ್ಷೇತ್ರದಿಂದ ಅರವಿಂದ ಬಿರಾದಾರ, ಚುನಾಯಿತರಾದರು.
ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆ ಮತದಾನ ಕೇಂದ್ರದಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಬೆಳಿಗ್ಗೆ ೯ರಿಂದ ಸಾಯಂಕಾಲ ೪ರವರೆಗೆ ನಡೆದ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿದ್ದು, ವಿಧಾನಸಭಾ ಚುನಾವಣೆಯಂತೆ ಕಂಡು ಬಂತು. ಸಾಲಗಾರ ಕ್ಷೇತ್ರದ ೫೭೧ ಒಟ್ಟು ಮತದಾರರಲ್ಲಿ ೪೯೧ ಮತದಾರರು ಹಾಗೂ ಬಿನ್ ಸಾಲಗಾರರ ೧೩೬ ಮತದಾರರ ಪೈಕಿ ೮೮ ಮತದಾರರು ಮತ ಚಲಾಯಿಸಿದರು.
ಎಸ್.ಎಮ್.ಹಂಗರಗಿ ಚುನಾವಣಾಧಿಕಾರಿ ಹಾಗೂ ಲೀಲಾವತಿಗೌಡ ಸಹಾಯಕ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
ಸಾಯಂಕಾಲ ಮತಗಳ ಎಣಿಕೆ ನಡೆದು ನಂತರ ವಿಜೇತ ಅಭ್ಯರ್ಥಿಗಳನ್ನು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಬೆಂಬಲಗರು ವಿಜೇತರನ್ನು ಸನ್ಮಾನಿಸಿದರು. ನಂತರ ಬಣ್ಣ ಎರಚಿ, ಸಿಹಿ ಹಂಚಿ, ಪಟಾಕಿ ಸಿಡಿಸುವುದರ ಮೂಲಕ ವಿಜಯೋತ್ಸವ ಆಚರಿಸಿದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಶೇ.50 ಮಹಿಳಾ ಮೀಸಲಾತಿ ರಾಜೀವ್ ಗಾಂಧಿ ಕೊಡುಗೆ

ಡಿ.೧೫ ರಂದು ಅಂಚೆ ಅದಾಲತ್

ಗ್ರಾಮ ಸ್ವಚ್ಛತೆಗೆ ಆಧ್ಯತೆ ನೀಡಿ :ಪ್ರಕಾಶ ವಡ್ಡರ

ಮಾರಕ ರೋಗಗಳನ್ನು ಕೊನೆಗಾಣಿಸಲು ಅಗತ್ಯ ಜಾಗೃತಿ ಮೂಡಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಶೇ.50 ಮಹಿಳಾ ಮೀಸಲಾತಿ ರಾಜೀವ್ ಗಾಂಧಿ ಕೊಡುಗೆ
    In (ರಾಜ್ಯ ) ಜಿಲ್ಲೆ
  • ಡಿ.೧೫ ರಂದು ಅಂಚೆ ಅದಾಲತ್
    In (ರಾಜ್ಯ ) ಜಿಲ್ಲೆ
  • ಗ್ರಾಮ ಸ್ವಚ್ಛತೆಗೆ ಆಧ್ಯತೆ ನೀಡಿ :ಪ್ರಕಾಶ ವಡ್ಡರ
    In (ರಾಜ್ಯ ) ಜಿಲ್ಲೆ
  • ಮಾರಕ ರೋಗಗಳನ್ನು ಕೊನೆಗಾಣಿಸಲು ಅಗತ್ಯ ಜಾಗೃತಿ ಮೂಡಿಸಿ
    In (ರಾಜ್ಯ ) ಜಿಲ್ಲೆ
  • ಸಾಮೂಹಿಕ ವಿವಾಹಗಳೇ ಶ್ರೇಷ್ಠ :ಶ್ರೀಶೈಲ ಶ್ರೀಗಳು
    In (ರಾಜ್ಯ ) ಜಿಲ್ಲೆ
  • ಇಂದು ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಆತ್ಮವಿಶ್ವಾಸ ಹಾಗೂ ದೃಢಸಂಕಲ್ಪದೊಂದಿಗೆ ಮುನ್ನಡೆದು ಸಾಧನೆ ಮಾಡಿ
    In (ರಾಜ್ಯ ) ಜಿಲ್ಲೆ
  • ಮನೆಗಳ ಕಂಪ್ಯೂಟರ್ ಉತಾರೆ ನೀಡಲು ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಹರನಾಳ ಪಿಕೆಪಿಎಸ್: ಮಲ್ಲನಗೌಡರ ಬಣದ ವಿಜಯೋತ್ಸವ
    In (ರಾಜ್ಯ ) ಜಿಲ್ಲೆ
  • ಆರೇಶಂಕರ ಕೆರೆಯಲ್ಲಿದ್ದ ಐದಡಿ ಮೊಸಳೆ ರಸ್ತೆಯಲ್ಲಿ ಪ್ರತ್ಯಕ್ಷ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.