ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿವಣಗಿ ಗ್ರಾಮದ ವಿಜಯಕುಮಾರ ಶರಣಪ್ಪ ಗುಗ್ಗರಿ ಅವರ ಮಾಲೀಕತ್ವದ ರಿಸನಂ ೧೯೧/೧ ಕ್ಷೇತ್ರ ೫ ಎಕರೆ ಪೈಕಿ ೧ -೫ ವಿಸ್ತೀರ್ಣದ ಜಮೀನಿನಲ್ಲಿ ಸಿಡಿಮದ್ದು ಮಾರಾಟ ಮತ್ತು ಸಂಗ್ರಹಣೆ ಗೋದಾಮು ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈ ಕುರಿತಾದ ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆಯ ೩೦ ದಿನಗಳೊಳಗಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
