ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಿರುವ ಹೊನಲು ಬೆಳಕಿನ ಕ್ರಿಕೆಟ್ ಲೀಗ್ ಪಂದ್ಯಗಳು ಪ್ರತಿವರ್ಷದಂತೆ ವಿಶ್ವರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ (ಪುಣ್ಯತಿಥಿ) ಅಂಗವಾಗಿ ಡಿ.೬ ಪ್ರಾರಂಭವಾಗುವುದು ಎಂದು ಎಸ್.ಪಿ.ಎಲ್. ಮುಖ್ಯ ಸಂಯೋಜಕ ರಾಜಶೇಖರ ಕೂಚಬಾಳ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಎಸ್.ಪಿ.ಎಲ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಮಾಡುವುದು ಎಸ್.ಪಿ.ಎಲ್ ಸಂಯೋಜಕರು ಮಾಡಿಕೊಂಡು ಬಂದಿರುವುದು ರೂಢಿ. ಈ ಬಾರಿ ಸಿಂದಗಿ ಹೆಸರು ಮತ್ತಷ್ಟು ಪ್ರಚಲಿತಗೊಳಿಸಲು ಜಿಲ್ಲೆಯ ಪ್ರಮುಖ ಆಟಗಾರರು ಪಾಲ್ಗೊಳ್ಳಲಿರುವ ೮ ತಂಡದ ಮಾಲೀಕರು ತಮ್ಮ ತಂಡದಲ್ಲಿ ಕೂಡಿಸಿಕೊಂಡಿರುವುದು ತಾಲೂಕು ಮತ್ತು ಗ್ರಾಮೀಣ ಆಟಗಾರರಿಗೆ ವಿಶೇಷ ಅನುಭವ ದೂರಕಲಿದೆ.
ಡಿ.೬ರಿಂದ ಪ್ರಾರಂಭವಾಗುವ ಹೊನಲು ಬೆಳಕಿನ ಕ್ರಿಕೇಟ್ ಲೀಗ್ ಪಂದ್ಯಕ್ಕೆ ಪ್ರಥಮ ಬಹುಮಾನ ರೂ.೨ಲಕ್ಷ ಯುವ ಉದ್ಯಮಿ ವೆಂಕಟೇಶ್ ಆರ್ ಗುತ್ತೇದಾರ, ದ್ವಿತೀಯ ಬಹುಮಾನ ರೂ.೧ಲಕ್ಷ ಬಿಜೆಪಿ ಮುಖಂಡ ರವಿ ನಾಯ್ಕೋಡಿ, ತೃತೀಯ ಬಹುಮಾನ ರೂ.೫೦ಸಾವಿರ ರೈತ ಮುಖಂಡ ಪೀರು ಕೇರೂರ ಹಾಗೂ ನಾಲ್ಕನೆಯ ಬಹುಮಾನ ಕಾಂಗ್ರೆಸ್ ಯುವ ಮುಖಂಡ ಇರ್ಫಾನ ಬಾಗವಾನ ನೀಡಿದ್ದಾರೆ.
ಅರಿವೇ ಅಂಬೇಡ್ಕರ್-ಅಮರ ಅಂಬೇಡ್ಕರ್ ಎಂಬ ಘೋಷವಾಕ್ಯದೊಂದಿಗೆ ಅಂಬೇಡ್ಕರರ ಸ್ಮರಣೆ ಟೂರ್ನಿಯುದ್ದಕ್ಕೂ ನಡೆಯಲಿದೆ ಎಂದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಾಂತವೀರ ಬಿರಾದಾರ ಮಾತನಾಡಿ, ಎಸ್.ಪಿ.ಎಲ್ ಲಿಗ್ನಲ್ಲಿ ನಿಮ್ಮಲ್ಲಿ ನಾನು ಒಬ್ಬನಾಗಿ ಭಾಗವಹಿಸಿ ಸಿಂದಗಿಯ ಹೆಸರನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುವ ದಿಸೆಯಲ್ಲಿ ಶ್ರಮಿಸುವೆ ಎಂದರು.
ಈ ವೇಳೆ ನೂತನ ಉಪಾಧ್ಯಕ್ಷ ಹಾಸಿಂಪೀರ ಆಳಂದ, ಎಸ್.ಪಿ.ಎಲ್. ಸಹ ಸಂಯೋಜಕ ಜಿಲಾನಿ ನಾಟೀಕಾರ, ಸಂಯೋಜಕ ಮಹ್ಮದ್ ಪಟೇಲ ಬಿರಾದಾರ, ಮಲ್ಲು ಕೂಚಬಾಳ, ಶಿವಾನಂದ ಆಲಮೇಲ, ಹುಸೇನ ತಾಂಬೋಳಿ, ಸಿದ್ದು ಮ್ಯಾಗೇರಿ, ಬಾಲಕೃಷ್ಣ ಛಲವಾದಿ, ಮುತ್ತು, ದಿನೇಶ ಸೇರಿದಂತೆ ಅನೇಕರು ಇದ್ದರು.

