ವಿಜಯಪುರ: ಜಿಪಿಟಿಆರ್-೨೦೨೨ನೇ ಸಾಲಿನ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ೧:೧ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ಇತರೆ ಮೀಸಲಾತಿ ಕೋರಿ ಸಾಮಾನ್ಯ ವರ್ಗದಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ದಿನಾಂಕ ನಿಗದಿಗೊಳಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ತಂಡ ೧ರಲ್ಲಿ ಇಂಗ್ಲೀಷ್ ವಿಷಯದ ಅನುಕ್ರಮ ಸಂಖ್ಯೆ ೧ ರಿಂದ ೮೨ ಹಾಗೂ ಸಮಾಜ ಪಾಠಗಳು (ಕನ್ನಡ) ಅನುಕ್ರಮ ಸಂಖ್ಯೆ ೧ ರಿಂದ ೧೧೨, ತಂಡ-೨ ರಲ್ಲಿ ಗಣಿತ ಮತ್ತು ವಿಜ್ಞಾನ (ಉರ್ದು) ಅನುಕ್ರಮ ಸಂಖ್ಯೆ ೧ ರಿಂದ ೩೩, ಜೀವ ವಿಜ್ಞಾನ (ಉರ್ದು) ಅನುಕ್ರಮ ಸಂಖ್ಯೆ ೧ ರಿಂದ ೧೪ ಹಾಗೂ ಸಮಾಜ ಪಾಠಗಳು (ಉರ್ದು) ಅನುಕ್ರಮ ಸಂಖ್ಯೆ ೧ರಿಂದ ೧೭ರವರೆಗೆ.
ತಂಡ-೩ರಲ್ಲಿ ಗಣಿತ ಮತ್ತು ವಿಜ್ಞಾನ (ಕನ್ನಡ) ಅನುಕ್ರಮ ಸಂಖ್ಯೆ ೧ ರಿಂದ ೧೫೦ ಹಾಗೂ ಜೀವ ವಿಜ್ಞಾನ (ಕನ್ನಡ) ಅನುಕ್ರಮ ಸಂಖ್ಯೆ ೧ರಿಂದ೧೦೮ರವರೆಗೆ ಮತ್ತು ತಂಡ-೪ ರಲ್ಲಿ ಗಣಿತ ಮತ್ತು ವಿಜ್ಞಾನ (ಕನ್ನಡ) ಅನುಕ್ರಮ ಸಂಖ್ಯೆ ೧೫೧ ರಿಂದ ೩೦೪ ಹಾಗೂ ಜೀವ ವಿಜ್ಞಾನ (ಕನ್ನಡ) ಅನುಕ್ರಮ ಸಂಖ್ಯೆ ೧೦೧ ರಿಂದ ೧೨೯ರವರೆಗೆ.
ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ಆಯುಕ್ತರ ಕಚೇರಿಯಿಂದ ನೀಡಿರುವ ಸೂಚನೆಗಳನ್ವಯ ದಿನಾಂಕ : ೧೨-೧೦-೨೦೨೩ ರಂದು ಬೆಳಿಗ್ಗೆ ೧೧ ರಿಂದ ಸಂಜೆ ೪ ಗಂಟೆವರೆಗೆ ವಿಷಯಕ್ಕನುಗುಣವಾಗಿ ಅನುಕ್ರಮ ಸಂಖ್ಯೆವಾರು ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ವಿಜಯಪುರದಲ್ಲಿ ತಮ್ಮ ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಜಿಪಿಟಿಆರ್ ನೇಮಕಾತಿ ಆಯ್ಕೆ: ಸಿಂಧುತ್ವ ಪಡೆಯಲು ದಿನಾಂಕ ನಿಗದಿ
Related Posts
Add A Comment
