ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಕೊಂಡಗೂಳಿ ಗ್ರಾಮದ ಸ್ವಾಮಿ ವಿವೇಕಾನಂದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಸರಕಾರಿ ಶಾಲೆ ಉಳಿಸಿ, ಬೆಳೆಸಿ’ ಅಭಿಯಾನ ಜರುಗಿತು.
ಗ್ರಾಮದ ಶಾಲಾ ಆವರಣದಲ್ಲಿ ಶುಕ್ರವಾರ ಜರುಗಿದ ಅಭಿಯಾನದಲ್ಲಿ ಟ್ರಸ್ಟ ವತಿಯಿಂದ ಸರಕಾರಿ ಶಾಲೆ ಮಕ್ಕಳ ಶಿಕ್ಷಣಕ್ಕೆ ಇಬ್ಬರು ಅತಿಥಿ ಶಿಕ್ಷಕರು, ಸ್ಮಾರ್ಟ್ ಬೋರ್ಡ್, ಉಚಿತ ಕಂಪ್ಯೂಟರ್ ಕಲಿಕೆಗೆ ಸಹಾಯ, ಉಚಿತ ಪ್ರವಾಸ ಸೌಲಭ್ಯ ನೀಡುವುದಾಗಿ ಘೋಷಣೆ ಮಾಡಲಾಯಿತು.
ನಂತರ ಪಿಎಸ್ಐ ಮಂಜುನಾಥ್ ಮಾಗಣಗೇರಿ ಇವರಿಂದ ನೋಟ ಬುಕ್, ಗೋಲ್ಡ್ ಮೆಡಲ್ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಸ್ಡಿಎಂ ಸಿ ಅಧ್ಯಕ್ಷ ಈರಣ್ಣ ಗಾಣಿಗೇರ, ಪಿಕೆಪಿಎಸ್ ಅಧ್ಯಕ್ಷ ಜಗದೀಶ ಪಾಟೀಲ. ಮುಖ್ಯಶಿಕ್ಷಕ ಬಿ.ಬಿ.ಅಗ್ನಿ, ಶಿಕ್ಷಕ ಜಿ.ಪಿ.ಹೊಕ್ಕುಂಡಿ, ಶಿಕ್ಷಕಿ ಹಸೀನಾ, ಸ್ವಾಮಿ ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ಅಕ್ಷಯ ಗೊಬ್ಬೂರ , ಸಂಸ್ಥಾಪಕ ಅಧ್ಯಕ್ಷ ತಿಪ್ಪಣ್ಣ ಹೆಬ್ಬಾಳ, ಗೌರವಾಧ್ಯಕ್ಷ ಮಹಿಬೂಬ್ ಖಾಜಿ, ಕಾರ್ಯದರ್ಶಿ ಶಿವಾನಂದ ಬಸವಪಟ್ಟಣ , ನಿವೃತ್ತ ಶಿಕ್ಷಕ ಎಂ.ಬಿ. ಹೆರಕಲ್, ಶಿವು ಗೊಬ್ಬೂರ, ಶಿವು ಕೊಳ್ಳಾರಿ, ಕಮಲಸಾಬ್ , ಬಾಳು, ರವಿ, ಸಹಿತ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.

