ಆಲಮಟ್ಟಿ: ಇಲ್ಲಿಯ ಚಿಮ್ಮಲಗಿ ಭಾಗ-೧ ಎ ಗ್ರಾಮದ ಹನುಮಂತ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಲು ತಂದಿದ್ದ ಶಿವನ ಮೂರ್ತಿ, ಬಸವಣ್ಣ ಹಾಗೂ ಗಣಪತಿ ಮೂರ್ತಿಗೆ ಯುವಕನೊಬ್ಬ ಹಾನಿಗೊಳಿಸಿದ ಘಟನೆ ಮಂಗಳವಾರ ಜರುಗಿದೆ.
ದೇವಸ್ಥಾನ ಸಮಿತಿಯವರು ಕಳೆದ ಒಂದು ವರ್ಷದ ಹಿಂದೆ ಪ್ರತಿಷ್ಠಾಪನೆಗಾಗಿ ತಂದು ಕೊಠಡಿಯಲ್ಲಿಟ್ಟಿದ್ದ ಈ ಮೂರು ಮೂರ್ತಿಗಳನ್ನು ಅದೇ ಗ್ರಾಮದ ನಿವಾಸಿ ಗೌಸ್ ಪಾಶಾ ಬಂದೇನವಾಜ್ ತೊರವಿ ಬಾಗಿಲು ಮುರಿದು ಕೆಳಕ್ಕೆ ಎಸೆದಿದ್ದಾನೆ. ಅಲ್ಲದೇ ಅದಕ್ಕೆ ಸುತ್ತಿದ್ದ ಬಟ್ಟೆಯನ್ನು ಸುಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ನಿಡಗುಂದಿ ಪಿಎಸ್ ಐ ಶಿವರಾಜ ಧರಿಗೋಣ ತಿಳಿಸಿದ್ದಾರೆ.
ಈ ಮೂರು ಮೂರ್ತಿಗಳು ಅಲ್ಪ ಭಗ್ನಗೊಂಡಿವೆ ಎನ್ನಲಾಗಿದೆ. ಘಟನೆ ಬುಧವಾರ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಸೇರಿ ಘಟನೆಯನ್ನು ಖಂಡಿಸಿದರು. ದೇವಸ್ಥಾನ ಸಮಿತಿಯವರು ತಕ್ಷಣವೇ ನಿಡಗುಂದಿ ಪೊಲೀಸರ ಗಮನಕ್ಕೆ ತಂದರು.
ಈ ಕುರಿತು ದೇವಸ್ಥಾನ ಸಮಿತಿಯವರು ದೂರು ನೀಡಿದ್ದಾರೆ. ಆರೋಪಿ ಗೌಸ್ ಪಾಶಾ ಬಂದೇನವಾಜ್ ನನ್ನು ಬಂಧಿಸಲಾಗಿದೆ, ನಿಡಗುಂದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
