ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ವಿಶೇಷ ಸರ್ವಸಾಧಾರಣ ಸಭೆಯನ್ನು ಜು.೧೦ರಂದು ಬೆಳಿಗ್ಗೆ ೧೦:೩೦ಗಂಟೆಗೆ ಮಿನಿವಿಧಾನ ಸೌಧದ ಆವರಣದಲ್ಲಿರುವ ನೌಕರ ಸಂಘ ಭವನದಲ್ಲಿ ಸಭೆ ಕರೆಯಲಾಗಿದೆ. ಕಾರಣ ಸಿಂದಗಿ ತಾಲೂಕಿನ ಸಮಸ್ತ ಸರಕಾರಿ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ಸರ್ವ ಸಾಧಾರಣ ಸಭೆಯಲ್ಲಿ ಭಾಗವಹಿಸಬೇಕು ಎಂದು ಅಧ್ಯಕ್ಷ ವ್ಹಿ.ಬಿ.ಕುರಡೆ ಪ್ರಕಟಣೆಯ ಮೂಲಕ ತಿಳಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಕೇಂದ್ರ ಸರಕಾರವು ೨೫-೩-೨೦೨೫ರಂದು ಲೋಕಸಭೆಯಲ್ಲಿ ನಿರ್ಣಯಿಸಿದಂತೆ ಪಿಂಚಣಿದಾರ ಪಿಂಚಣಿಯನ್ನು ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ನಿರ್ಣಯಿಸಿದ ಪ್ರಯುಕ್ತ, ೦೧/೦೪/೨೦೨೬ರ ಮೊದಲು ನಿವೃತ್ತರಾದ ಪಿಂಚಣಿದಾರರು ಹಾಗೂ ಕುಟುಂಬ ಪಿಂಚಣಿದಾರರಿಗೆ ವೇತನ/ತುಟ್ಟಿ ಬತ್ತೆಯ (ಡಿಎ) ಬಗ್ಗೆ ಪರಿಷ್ಕಸಲು ಸಾಧ್ಯವಿಲ್ಲ ಎಂದು ಹೇಳಿದರ ವಿರುದ್ಧ ಪ್ರತಿಭಟಿಸಲು ತಹಶೀಲ್ದಾರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಬೇಕಾಗಿದೆ. ಹಾಗೂ ಇತ್ತಿಚೇಗೆ ನಿವೃತ್ತಿ ಹೊಂದಿದ ಪಿಂಚಣಿದಾರರು ಸಂಘದ ಸದ್ಯಸತ್ವ ನೋಂದಣಿ ಮಾಡಿಸದೇ ಇದ್ದವರು ತಮ್ಮ ಪೆನ್ಷನ್ ಮಂಜೂರಿ ಪತ್ರ (ಪಿಪಿಒ) ಆದೇಶದೊಂದಿಗೆ ಆಗಮಿಸಿ ಸದ್ಯಸತ್ವ ಪಡೆದು ತಮ್ಮ ಹೆಸರು ಹಾಗೂ ಸಹಿಯೊಂದಿಗೆ ಕ್ರೂಡೀಕರಿಸಿ ನೇರವಾಗಿ ತಾಲೂಕು ದಂಢಾದಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಬೇಕಾಗಿದೆ. ಆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ವಿಶ್ರಾಂತ ವೇತನದಾರರು ಭಾಗವಹಿಸಲು ಈ ಮೂಲಕ ಕೋರಲಾಗಿದೆ ಎಂದು ಅಧ್ಯಕ್ಷ ವ್ಹಿ.ಬಿ.ಕುರಡೆಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿಗಳು ಎಸ್.ಎನ್.ಬಿರಾದಾರ ಪ್ರಕಟಣೆಯ ಜಂಟಿಯಾಗಿ ತಿಳಸಿದ್ದಾರೆ.
