ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ವಯಸ್ಸು ದೇಹಕ್ಕೆ ಮಾತ್ರವಾಗುತ್ತದೆ, ಅದು ಮನಸ್ಸಿಗೆ ಅಲ್ಲ. ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕರು ಹಾಗೂ ಸೈನಿಕರು ಈ ದೇಶದ ಸಂಪತ್ತು ಎಂದು ಬಸವನ ಬಾಗೇವಾಡಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್. ಅವಟಿ ಹೇಳಿದರು.
ತಾಲೂಕಿನ ಹಣಮಾಪೂರದ ಗ್ರಾಮೀಣ ವಿದ್ಯಾವರ್ಧಕ ಸಂಘದ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ವಯೋಸಹಜ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕರ ಬೀಳ್ಕೊಡುಗೆ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ನಿಯಮದಂತೆ 60ವರ್ಷ ಆದ ನಂತರ ಎಲ್ಲರೂ ವೃತ್ತಿಯಿಂದ ನಿವೃತ್ತಿ ಆಗಲೇಬೇಕು. ನಿವೃತ್ತಿ ನಂತರ ಕುಟುಂಬ ಹಾಗೂ ಬಂಧುಗಳೊಂದಿಗೆ ವಿಶ್ರಾಂತಿಯಿಂದ ಬದುಕ ಬೇಕಾಗುತ್ತದೆ. ಹಣಮಾಪೂರ ಗ್ರಾಮದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮೂರು ದಶಕಗಳ ಕಾಲ ಮಕ್ಕಳಿಗೆ ಒಳ್ಳೆಯ ಕ್ರೀಡಾ ತರಬೇತಿ ನೀಡಿ ಅವರನ್ನು ರಾಜ್ಯ ಮಟ್ಟದಲ್ಲಿ ಗ್ರಾಮದ ಹೆಸರನ್ನು ಹಾಗೂ ಮಕ್ಕಳನ್ನು ಗುರುತಿಸಲು ಕಾರ್ಣಿಕರ್ತ ದೈಹಿಕ ಶಿಕ್ಷಕರಾದ ಎಸ್.ಎಂ. ಬರಗಿ ಹಾಗೂ ಕೆ.ಜಿ. ಹಳ್ಳೂರರವರ ಸೇವೆ ಅಪಾರವಾದದ್ದು ಅದಕ್ಕೆ ಇಲಾಖೆ ಅವರನ್ನು ಅಭಿನಂದಿಸುತ್ತದೆ. ದೇಶದ ವಿವಿಧ ರಾಜ್ಯಗಳಲ್ಲಿ ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಯೋಧರಾದ ಈರಣ್ಣ ಹಳ್ಳೂರ ಹಾಗೂ ಮಲ್ಲಪ್ಪ ಮಡಿವಾಳರ ಅವರ ಸೇವೆ, ತ್ಯಾಗ ಬಹಳ ದೊಡ್ಡದಿದೆ ಎಂದರು.
ವಯೋಸಹಜ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕರಾದ ಎಸ್.ಎಂ. ಬರಗಿ, ಕೆ.ಜಿ. ಹಳ್ಳೂರ ಹಾಗೂ ನಿವೃತ್ತ ಯೋಧರಾದ ಈರಣ್ಣ ಹಳ್ಳೂರ, ಮಲ್ಲಪ್ಪ ಮಡಿವಾಳರ ರವರನ್ನು ಎತ್ತಿನ ಗಾಡಿಯಲ್ಲಿ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಶಿಕ್ಷಕರು, ಮಕ್ಕಳು, ಗ್ರಾಮಸ್ಥರು ಭಾಗವಸಿದ್ದರು.
ಪ್ರಾಸ್ತಾವಿಕವಾಗಿ ಮುಖ್ಯ ಶಿಕ್ಷಕ ಆರ್.ಎಸ್.ತುಂಗಳ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮುಖ್ಯ ಶಿಕ್ಷಕ ಸಂಗಮೇಶ ಪೂಜಾರಿ, ನಿವೃತ್ತ ದೈಹಿಕ ಶಿಕ್ಷಕ ಎಸ್.ಎಂ.ಬರಗಿ, ಕೆ.ಜಿ. ಹಳ್ಳೂರ ಮಾತನಾಡಿದರು.
ಸಂಗಮೇಶ ಕುಬಕಡ್ಡಿ, ಬಾಲಪ್ಪ ಗೂಗಿಹಾಳ ವಿದ್ಯಾರ್ಥಿಗಳ ಅನಿಸಿಕೆ ಹೇಳಿದರು.
ಎಸ್ ಎಲ್ ಪವಾರ ಶಿಕ್ಷಕರ ಅನಿಸಿಕೆ ವ್ಯಕ್ತಪಡಿಸಿದರು.
ಈ ವೇಳೆ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಕರಾದ ಎಸ್.ಎಂ. ಬರಗಿ, ಕೆ.ಜಿ. ಹಳ್ಳೂರ ಹಾಗೂ ನಿವೃತ್ತ ಯೋಧರಾದ ಈರಣ್ಣ ಹಳ್ಳೂರ, ಮಲ್ಲಪ್ಪ ಮಡಿವಾಳರ ಅವರನ್ನು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರ ಸಂಘಟನೆಯ ಪ್ರಮುಖರು, ಶಾಲಾ ಕಾಲೇಜಿನ ಮುಖ್ಯಸ್ಥರು, ಗೆಳೆಯರ ಬಳಗ, ಹಳೆ ವಿದ್ಯಾರ್ಥಿಗಳ ಬಳಗ ಹಾಗೂ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಸಾನಿಧ್ಯವನ್ನು ರುದ್ರುಸ್ವಾಮಿ ಹಿರೇಮಠ ವಹಿಸಿದ್ದರು. ಅಧ್ಯಕ್ಷತೆಯನ್ನು ನಾಗನಗೌಡ ಬಿರಾದಾರ ವಹಿಸಿದ್ದರು. ಅತಿಥಿಗಳಾಗಿ ಸಂಸ್ಥೆ ಅಧ್ಯಕ್ಷ ವ್ಹಿ.ಡಿ. ಕೊರಣ್ಣವರ, ಎಸ್.ಎಂ. ಬರಗಿ, ದ್ರಾಕ್ಷಾಯಣಿ ಬರಗಿ, ಕೆ.ಜಿ. ಹಳ್ಳೂರ, ಸುನೀತಾ ಹಳ್ಳೂರ, ಎಸ್.ಎಸ್. ಅವಟಿ, ಸಂಗಮೇಶ ಪೂಜಾರಿ, ಮುತ್ತು ಸಾಹುಕಾರ ಹಳ್ಳೂರ, ಬಾಬು ನರಿಯವರ, ನಿಂಗನಗೌಡ ಪಾಟೀಲ, ಹಣಮಂತಗೌಡ ಕುಪಕಡ್ಡಿ, ಎಂ.ಜಿ. ಪಾಟೀಲ, ಎಂ.ಕೆ. ಚೌದ್ರಿ, ಈರಣ್ಣ ಹಳ್ಳೂರ, ಎಂ.ಎಂ. ಮಡಿವಾಳರ, ಆರ್.ಎಸ್. ತುಂಗಳ, ಮುತ್ತಪ್ಪ ಮುರನಾಳ, ದಾದಮಿ ಅಂಗಡಿ ಉಪಸ್ಥಿತರಿದ್ದರು.
ಶಿಕ್ಷಕ ಆರ್.ಟಿ. ಸಜ್ಜನ ಸ್ವಾಗತಿಸಿದರು. ಶಿಕ್ಷಕ ವಿಜಯ ನಿರೂಪಿಸಿದರು. ಶಿಕ್ಷಕ ಪಿ.ಎನ್. ಕೂಡಗಿ ವಂದಿಸಿದರು.

