ಉದಯರಶ್ಮಿ ದಿನಪತ್ರಿಕೆ
ಇಂಡಿ: ರಕ್ತದಾನ ಮಾಡುವದರಿಂದ ದೇಹದಲ್ಲಿ ಹೊಸ ರಕ್ತದ ಉತ್ಪತ್ತಿಯಾಗುತ್ತದೆ. ಎಲ್ಲ ದಾನಗಳಲ್ಲಿ ರಕ್ತದಾನವು ಅತ್ಯಂತ ಶ್ರೇಷ್ಠದಾನವಾಗಿದೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಿಜಯಪುರದ ಚೇರಮನ್ ರಾದ ಪ್ರೋ.ಎಸ್ ಜಿ ರೊಡಗಿ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ರೆಡ್ ಕ್ರಾಸ್ ಸಂಸ್ಥೆ ಹಾಗೂ ಐಕ್ಯೂಎಸಿ ಮತ್ತು ಎನ್ಎಸ್ಎಸ್ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರು ಆರೋಗ್ಯವಂತ ವ್ಯಕ್ತಿ ರಕ್ತದಾನ ಮಡುವುದರಿಂದ ಆರೋಗ್ಯ ದೃಷ್ಠಿಯಿಂದ ಒಳ್ಳೆಯದು ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಎಸ್ ಜಿ ಮುರನಾಳ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಶಿವಾನಂದ ಹತ್ತರಕಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಆರ್ ಎಚ್ ರಮೇಶ ಮಾತನಾಡಿʼರಕ್ತದಾನ ಶಿಭಿರದ ಮೂಲಕ ರಕ್ತದ ಅವಶ್ಯಕತೆ ಉಳ್ಳವರಿಗೆ ಸಾಹಾಯಕಾರಿಯಾಗಿದೆ. ಇಂತಹ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳಿಸಬೇಕಾದುದು ಅಗತ್ಯವಾಗಿದೆ ಎಂದರು.
ಐವತ್ತಕ್ಕೂ ಹೆಚ್ಚು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಮಹಿಳಾ ವಿ. ವಿ ಸಿಂಡಿಕೇಟ್ ಸದಸ್ಯ ಪ್ರೊ ಎಸ ಜೇ ಮಾಡ್ಯಾಳಐಕ್ಯೂಎಸಿ ಸಂಚಾಲಕ ಪ್ರೊ ರವಿಕುಮಾರ ಅರಳಿ ರೆಡ್ ಕ್ರಾಸ್ ಯುವ ಘಟಕದ ಸಂಚಾಲಕಿ ಪ್ರೊ. ನೀಲಾಬಾಯಿ. ಎನ್ ಎಸ್ ಎಸ್ ಸಂಚಾಲಕ ಪ್ರೊ. ಪಿ ಎಸ್ ದೇವರ ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕ ಪ್ರೊ ರಮೇಶ ಪವಾರ ಪ್ರೊ ಎನ್ ಎಸ್ ಬಿರಾದಾರ ಸ್ವಾಗತಿಸಿದರು ಪ್ರೊ ಸಂಗಮೇಶ ಹೀರೆಮಠ ನಿರೂಪಿಸಿದರು.ಪ್ರೊ ಎಸ್ ಎಚ್ ಒಲೇಕಾರ ವಂದಿಸಿದರು.