ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪ್ರಜಾಪ್ರಭುತ್ವದಲ್ಲಿ ಮತದಾನ ಒಂದು ಶ್ರೇಷ್ಠ ಕರ್ತವ್ಯ. ಮತದಾನ ಎಂಬುದು ಪ್ರಜಾಪ್ರಭುತ್ವದ ಬೆನ್ನೆಲುಬು ಇದ್ದಂತೆ ಎಂದು :ಪ್ರೊ.ರವಿ ಕಟ್ಟಿಮನಿ ಹೇಳಿದರು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಜg ನಂಪ್ರಥಮ ದರ್ಜೆ ಕಾಲೇಜುಯಡಿ ಮುಳಸಾವಳಗಿ ದತ್ತು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ
ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಪ್ರೇವiಕುಮಾರಿ ಮಾತನಾಡಿ, ಮತದಾರರು ಭ್ರಷ್ಟರಾದರೆ ಆಯ್ಕೆಯಾಗಿ ಬರುವ ಆಳುವ ವರ್ಗವು ಭ್ರಷ್ಟವಾಗಿರುತ್ತದೆ ಎಂದರು.
ಉಪನ್ಯಾಸಕ ಶಿವಪುತ್ರ ಜಾಲವಾದಿ, ಸಂಗನಗೌಡ ಬಿರಾದಾರ, ಗ್ರಾಮ ಪಂಚಾಯಿತಿ ಸದಸ್ಯರಾದ ರೇಣುಕಾ ಬಿರಾದಾರ, ಉಮೇಶ ಮೂಲಿಮನಿ, ರೇಖಾ ತಳವಾರ ಸೇರಿದಂತೆ ರಾಜು ಕಪಾಲಿ, ಮಲ್ಲಿಕಾರ್ಜುನ ಲಕ್ಷ್ಮೀಶ, ಭೀಮನಗೌಡ ಬಿರಾದಾರ ಇದ್ದರು.