ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ರವರು ನಾಳೆ ದಿ. ೭ ಬುಧವಾರ ಬಬಲೇಶ್ವರ ಮತಕ್ಷೇತ್ರದಲ್ಲಿ ಪ್ರವಾಸಕೈಗೊಳ್ಳಲಿದ್ದಾರೆ.
ಅಂದು ಬೆ. ೧೧ಗಂ. ಧನ್ಯಾಳ ಗ್ರಾಮದ ವಿಶ್ವಗುರು ಬಸವೇಶ್ವರ ಮೂರ್ತಿ ಅನಾವರಗೊಳಿಸಲಿದ್ದಾರೆ. ನಂತರ ಸಂ. ೪ಗಂ. ನಿಡೋಣಿಯಲ್ಲಿ ನಿಡೋಣಿ ಮತ್ತು ಕಾಖಂಡಕಿ ಸುತ್ತಲಿನ ಎತ್ತರದ ಪ್ರದೇಶಕ್ಕೆ ನೀರೋದಗಿಸುವ ೫ಎ ಮತ್ತು ೫ಬಿ ಲಿಫ್ಟ್ ಏತನೀರಾವರಿ ಮತ್ತು ೧೫ ನೇ ವಿತರಣಾ ಕಾಲುವೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಲಿದ್ದಾರೆ ಎಂದು ಸಚಿವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.