ಉದಯರಶ್ಮಿ ದಿನಪತ್ರಿಕೆ
ಅಥಣಿ: ನಗರದ ಜತ್ತ ರಸ್ತೆಯಲ್ಲಿರುವ ಹೊಸ ಸೂಪರ್ ಬಜಾರ ಮಳಿಗೆಯು ಸುತ್ತಮುತ್ತಲಿನ ಜನರಿಗೆ ಅತ್ಯಂತ ಅನುಕೂಲಕರವಾಗಿದೆ ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಒಂದೆ ಸ್ಥಳದಲ್ಲಿ ಎಲ್ಲಾ ಸರಕುಗಳನ್ನು ಖರೀದಿಸಲು ಇದು ಕೇಂದ್ರವಾಗಿ ಮಾರ್ಪಟ್ಟಿದೆ ಹಲವು ಯುವಕರಿಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿದೆ ಎಂದು ಕಾಂಗ್ರೆಸ್ ಯುವ ನಾಯಕ ಚಿದಾನಂದ ಸವದಿ ಹೇಳಿದರು.
ಅವರು ಭಾನುವಾರ ನಡೆದ ಸೂಪರ್ ಬಜಾರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಹಿಂದೆ ಜನರು ಬೇರೆ ಬೇರೆ ಅಂಗಡಿಗಳಿಗೆ ಅಲೆಯಬೇಕಿತ್ತು ಆದರೆ ಈಗ ದಿನಸಿ, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಎಲ್ಲಾ ಸರಕುಗಳನ್ನು ಒಂದೇ ಸೂರಿನಡಿ ಪಡೆಯಬಹುದು ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಟ್ಟರ ಮಠದ ಮರುಳಸಿದ್ಧ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಶ್ರೀಮತಿ ಶಿವಲೀಲಾ ಭೂಟಾಳಿ, ಪುರಸಭೆ ನಗರ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ವಾರ, ಸದಾಶಿವ ಭೂಟಾಳಿ, ಪುರಸಭೆ ಸದಸ್ಯರಾದ ರಾವಸಾಬ ಐಹೊಳೆ, ರವಿ ಬಡಕಂಬಿ, ನರಸು ಬಡಕಂಬಿ, ರವಿ ಪೂಜಾರಿ, ಸೂಪರ್ ಬಜಾರ್ ಮಾಲಿಕ ಕೃಷ್ಣಂತ ಮಾಳಿ, ಶ್ರೀಮತಿ ಗೀತಾ ತೋರಿ, ಮಾರುತಿ ಮಾಳಿ ಸೇರಿದಂತೆ ಅನೇಕ ಪದಾಧಿಕಾರಿಗಳು ಮತ್ತು ರಾಜಕೀಯ ಮುಖಂಡರು ಉಪಸ್ಥಿತರಿದ್ದರು. ಸಂತೋಷ ಬಡಕಂಬೆ ಸ್ವಾಗತಿಸಿ ವಂದಿಸಿದರು.
ಗೌತಮಿ ಪಾಟೀಲ್ ಜನರು ಫಿದಾ
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಪ್ರಸಿದ್ಧರಾಗಿರುವ ಲಾವಣಿ ಕಲಾವಿದೆ ಕುಮಾರಿ ಗೌತಮಿ ಪಾಟೀಲ್ ಅವರು ಸೂಪರ್ ಬಜಾರ್ ಉದ್ಘಾಟನೆ ಬಳಿಕ ನಡೆದ ಲಾವಣಿ ಕಾರ್ಯಕ್ರಮದ ಮೂಲಕ ಕರ್ನಾಟಕದ ಮರಾಠಿ ಭಾಷಿಕರನ್ನು ರಂಜಿಸಿದರು. “ಜೈ ಕರ್ನಾಟಕ” ಎಂಬ ಕನ್ನಡ ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು.

