Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 25, 2026

ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ

ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶ್ರೀ ಮಹಿಪತಿರಾಯರ ಮುಂಡಿಗೆಗಳ ಮೊತ್ತ ಮೊದಲ ಪುಸ್ತಕ
(ರಾಜ್ಯ ) ಜಿಲ್ಲೆ

ಶ್ರೀ ಮಹಿಪತಿರಾಯರ ಮುಂಡಿಗೆಗಳ ಮೊತ್ತ ಮೊದಲ ಪುಸ್ತಕ

By Updated:No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕನ್ನಡ ಸಾರಸ್ವತ ಲೋಕಕ್ಕೆ ವಚನಕಾರರ ಮತ್ತು ಹರಿದಾಸರ ಕೊಡುಗೆ ಅನನ್ಯ. ಶ್ರೀ ಪುರಂದರದಾಸರು ಮತ್ತು ಶ್ರೀ ಕನಕದಾಸರ ಕಾಲ ಮುಗಿದ ಮೇಲೆ ಶ್ರೀ ವಿಜಯದಾಸರು ಬರುವವರೆಗೆ ದಾಸಸಾಹಿತ್ಯದ ಕಾಲ ಶೂನ್ಯಘಟ್ಟವೆಂದು ತಜ್ಞರ ಅಂಬೋಣವಾಗಿತ್ತು.
ಆದರೆ ಈ ಮಧ್ಯದ ಅವಧಿಯಲ್ಲಿಯೂ ದಾಸಸಾಹಿತ್ಯವನ್ನು ಜೀವಂತವಾಗಿಟ್ಟವರು ವಿಜಯಪುರ ಜಿಲ್ಲೆಯ ಕಾಖಂಡಕಿಯ ಶ್ರೀ ಮಹಿಪತಿದಾಸರು.
ಶ್ರೀ ಮಹಿಪತಿದಾಸರು ಕನ್ನಡ ಭಾಷೆಯಲ್ಲಿ ಅಲ್ಲದೆ ದಖನಿ ಉರ್ದು ಭಾಷೆಯಲ್ಲಿಯೂ ಕೀರ್ತನೆಗಳನ್ನು ರಚಿಸಿದವರು.
ಮುಂಡಿಗೆಗಳು
ದಾಸಸಾಹಿತ್ಯದ ವಿಶಿಷ್ಟ ರಚನೆಗಳು. ಮುಂಡಿಗೆಗಳು ಎಂದ ಕೂಡಲೇ ನೆನಪಾಗುವರು ಶ್ರೀ ಕನಕದಾಸರು. ಕನಕನನ್ನು ಕೆಣಕಬೇಡ ಎಂಬ ಮಾತು ಜನಜನಿತವಿದೆ. ಮುಂಡಿಗೆಗಳೆಂದರೆ ಮೇಲ್ನೋಟಕ್ಕೆ ಅರ್ಥವಾಗದ ರಚನೆಗಳು. ವಚನಸಾಹಿತ್ಯದಲ್ಲಿ ಬೆಡಗಿನ ವಚನಗಳಿದ್ದಂತೆ ದಾಸಸಾಹಿತ್ಯದಲ್ಲಿ ಮುಂಡಿಗೆಗಳು.
ಶ್ರೀ ಮಹಿಪತಿದಾಸರ ಕೀರ್ತನೆಗಳಲ್ಲಿಯೂ ಹಲವು ಮುಂಡಿಗೆಗಳಿದ್ದು ಅವುಗಳಿಗೆ ಅಲ್ಲೊಂದು ಇಲ್ಲೊಂದು ಅರ್ಥಗಳನ್ನು ಬರೆಯುವ ಪ್ರಯತ್ನಗಳಾಗಿವೆ.
ಕಾಖಂಡಕಿ ಗ್ರಾಮದವರೇ ಆದ ಸಾಹಿತಿ ನಾರಾಯಣ ಬಾಬಾನಗರ ಇವರು ಈಗ ಶ್ರೀ ಮಹಿಪತಿರಾಯರ ಅನೇಕ ಮುಂಡಿಗೆಗಳನ್ನು ಗುರುತಿಸಿ ಅವುಗಳಿಗೆ ಮೊತ್ತ ಮೊದಲ ಬಾರಿಗೆ ಅರ್ಥಗಳನ್ನು ಬರೆಯುವ ಪ್ರಯತ್ನ ಮಾಡಿದ್ದಾರೆ.
ಮುಂಡಿಗೆಗಳ ಪರಿಚಯಾತ್ಮಕ ಲೇಖನವೊಂದನ್ನು ಪ್ರಸ್ತಾವನೆಯಾಗಿ ಪ್ರೊ. ಎಮ್ ಆರ್.ನಾಗರಾಜು ಅವರು ಬರೆದಿದ್ದಾರೆ.
ಈ ಪುಸ್ತಕದಲ್ಲಿ 13 ಮುಂಡಿಗೆಗಳಿಗೆ ಅರ್ಥಗಳಿವೆ. ಪ್ರತಿ ಮುಂಡಿಗೆಯಲ್ಲಿನ ವಿಶಿಷ್ಟ ಶಬ್ದಗಳಿಗೆ ಅರ್ಥ ಬರೆಯಲಾಗಿದೆ.
ಕನ್ನಡದಲ್ಲಿ ಮುಂಡಿಗೆಗಳ ಅರ್ಥಾನುಸಂಧಾನ ಪುಸ್ತಕಗಳು ಹೊರಬಂದಿದ್ದೇ ಕಡಿಮೆ. ಹೀಗಾಗಿ ಈ ಪುಸ್ತಕ ಅತ್ಯಂತ ವಿಶಿಷ್ಟವಾಗಿ ಎದ್ದು ಕಾಣುತ್ತದೆ.
ದಾಸಸಾಹಿತ್ಯ ಅಧ್ಯಯನಶೀಲರಿಗೆ ಇದೊಂದು ಆಕರಗ್ರಂಥವಾಗಿದೆ.ಈ ಪುಸ್ತಕವನ್ನು ದಾಸಸಾಹಿತ್ಯ ಸುಧೆ ಸಮೂಹ ಪ್ರಕಾಶಿಸಿದೆ.

“ಕಾಖಂಡಕಿಯ ಶ್ರೀ ಮಹಿಪತಿರಾಯರ ಕೀರ್ತನೆಗಳು ಅರ್ಥೈಸಿಕೊಳ್ಳಲು ತುಂಬಾ ಕ್ಲಿಷ್ಟಕರವಾಗಿವೆ. ಅದರಲ್ಲಿಯೂ ಶ್ರೀ ಮಹಿಪತಿರಾಯರ ಮುಂಡಿಗೆಗಳು ದಾಸಸಾಹಿತ್ಯದಲ್ಲಿ ವಿಶಿಷ್ಟವಾದವುಗಳು.”

– ನಾರಾಯಣ ಬಾಬಾನಗರ
ವಿಜಯಪುರ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 25, 2026

ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ

ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಮಾ.26ಕ್ಕೆ ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯ!

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 25, 2026
    In ದಿನಪತ್ರಿಕೆ
  • ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯಿಂದ ಭಯ ನಿವಾರಣೆ
    In (ರಾಜ್ಯ ) ಜಿಲ್ಲೆ
  • ನೂತನ ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಮಾ.26ಕ್ಕೆ ರಾಜ್ಯ ಬಜೆಟ್ ಅಧಿವೇಶನ ಮುಕ್ತಾಯ!
    In (ರಾಜ್ಯ ) ಜಿಲ್ಲೆ
  • ಸ್ಮಶಾನ ಭೂಮಿಗೆ ಅಧಿಕಾರಿಗಳು ಪರಿಹಾರ ಕಂಡುಕೊಳ್ಳಿ :ಡಿಸಿ ಡಾ.ಆನಂದ ಕೆ.
    In (ರಾಜ್ಯ ) ಜಿಲ್ಲೆ
  • ಅಲೆಮಾರಿ ಜನಾಂಗದವರ ಕಾಲೊನಿಗಳಿಗೆ ಮೂಲಸೌಲಭ್ಯ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಸಂಪೂರ್ಣ ಒಳಮೀಸಲಾತಿ ಜಾರಿಗೆ ರಕ್ತ ಕರಪತ್ರ ಚಳುವಳಿ!
    In (ರಾಜ್ಯ ) ಜಿಲ್ಲೆ
  • ಮಹಿಳೆ ಅಬಲೆಯಲ್ಲ ಸಬಲೆ :ಪ್ರತಿಮಾ ಪಾಟೀಲ
    In (ರಾಜ್ಯ ) ಜಿಲ್ಲೆ
  • ರೈತರ ಹೊಲದಲ್ಲಿ ಅನಾಹುತಕ್ಕೆ ಕಾದಿರುವ ವಾಲಿದ ವಿದ್ಯುತ್ ಕಂಬ
    In (ರಾಜ್ಯ ) ಜಿಲ್ಲೆ
  • ಕುಡಿವ ನೀರಿನ ಸಮಸ್ಯೆಯಾಗದಂತೆ ನಿಗಾವಹಿಸಿ :ಎಸಿ ಗುರುಸ್ವಾಮಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.