ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪುರುಷರಷ್ಟೆ ಸಮಾನತೆಯ ಹಕ್ಕು ಮಹಿಳೆಯರಿಗೂ ಸ್ವಾತಂತ್ರ್ಯವಿದೆ ಎಂದು ಮಹಿಳೆಯರು ದುರಪಯೋಗ ಪಡೆಸಿಕೊಳ್ಳಬಾರದು. ಪುರುಷರ ಸಹಕಾರದಿಂದ ಮಾತ್ರ ಮಹಿಳೆಯರ ಅಭಿವೃದ್ದಿ ಸಾದ್ಯ ಎಂದು ಸಿಂದಗಿ ಶಾಸಕರ ಪತ್ನಿ ನಾಗರತ್ನ ಅಶೋಕ ಮನಗೂಳಿ ಹೇಳಿದರು.
ಗುರುವಾರ ಪಟ್ಟಣದ ನಿರ್ಮಲಾಲಯ ಸಂಸ್ಥೆ ಹಾಗೂ ಬಾಧವ್ಯ ಮಹಿಳಾ ಸ್ವಸಾಹಯ ಸಂಘಗಳ ಒಕ್ಕೊಟದ ಸಹಯೋದಲ್ಲಿ ಅಂರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವ ಮಹಿಳೆ ಮೊದಲು ತನ್ನ ಕುಟುಂಬವನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುತ್ತಾಳೆ ಅವಳು ಸಮಾಜವನ್ನು ಬದಲಾವಣೆ ಮಾಡಲು ಸಾದ್ಯ. ಸಮಾಜದಲ್ಲಿ ನಡೆಯುತ್ತಿರುವ ತಪ್ಪುಗಳು ತಡೆಗಟ್ಟಲು ಮುಂದಾಗಬೇಕು ಅಂದಾಗ ಮಾತ್ರ ತಪ್ಪುಗಳು ನಡೆಯುವದಿಲ್ಲ. ಮೊದಲು ನಾವು ಬದಲಾದರೆ ಸಮಾಜ ಬದಲಾವಣೆಯಾಗಲು ಸಾದ್ಯ. ನಮ್ಮ ಜೊತೆಯಲ್ಲಿ ಇರುವವರ ಕಷ್ಟಗಳಿಗೆ ಸಹಕಾರ ನೀಡುವ ಮನೋಬಾವ ಬೆಳಿಸಿಕೊಳ್ಳಬೇಕು ಅಂದಾಗ ಎಲ್ಲರು ಸಮಾನರಾಗಿ ಮುಂದೆ ಬರಲು ಸಾದ್ಯವಾಗುತ್ತದೆ ಎಂದು ಹೇಳಿದರು.
ಮಂಡ್ಯದ ಮಲ್ಲಿಗೆ ಸಿರಿಮನೆ ಮಾತನಾಡಿ, ಯಾವುದೆ ಪಕ್ಷದ ಸರ್ಕಾರವಿರಲಿ ಮಹಿಳೆಯರಿಗೆ ಸ್ವಾಲಂಬಿಗಳಾಗಲು ಸಾಲದ ಯೋಜನೆಗಳು ಜಾರಿಗೆ ತರಬೇಡಿ ನಿಜವಾಗಲು ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದರೆ ಸ್ವಾವಲಂಬನೆಯ ಅರಿವು ಮೂಡಿಸಿ ನಿಜವಾದ ಸ್ವಾವಲಂಬಿಗಳಾಗಿ ಎಂದರು.
ದೇಶದ ಒಳತಿಗೆ ಯಾವುದೆ ಜಾತಿ ಧರ್ಮ ಭೇದ- ಭಾವವಿಲ್ಲದೆ ಎಲ್ಲರು ಒಂದಾಗಿ ಸಹಕಾರ ನೀಡಬೇಕು ಎಂದು ಹೇಳಿದರು
ವಿಜಯಪುರ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿದೇರ್ಶಕ ಟಿಯೋಲ್ ಮಚಾದೊ ಮಾತನಾಡಿ, ಗ್ರಾಮೀಣ ಭಾಗದ ಕೂಲಿ ಕಾರ್ಮಿಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮುಖ್ಯ ವಾಹಿಗೆ ಬರುತ್ತಿರುವುದಕ್ಕೆ ಸ್ವಂ ಸೇವಾ ಸಂಸ್ಥೆಗಳು ಜಾಗೃತಿ ಮೂಡಿಸುತಿರುವದರಿಂದ ಸಾದ್ಯವಾಗಿದೆ. ಸರ್ಕಾರದಿಂದ ಮಹಿಳೆಯರಿಗೆ ಸಿಗುತ್ತಿರುವ ಸೌಲಭ್ಯಗಳು ಸರಿಯಾಗಿ ಸದುಪಯೋಗ ಪಡೆದುಕೊಂದು ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಸಂಘಟನೆಯಲ್ಲಿರುವ ಮಹಿಳೆರ ಮಕ್ಕಳು ಉತ್ತಮ ಫಲಿತಾಂಶದೊಂದಿಗೆ ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಗೌರವಿಸಿದರು.
ತಹಶೀಲ್ದಾರ ಕೆ. ವಿಜಯಕುಮಾರ, ಕಲಬುರ್ಗಿಯ ಎಸ್.ಆರ್.ಜೆ. ಸಂಸ್ಥೆಯ ಸಂಸ್ಥಾಪಕ, ಸಿ.ಇ.ಒ ಸುಪ್ರಿಯಾ ಜೋಶೀ, ಅಧ್ಯಕ್ಷತೆ ವಹಿಸಿದ ದಕ್ಷೀಣ ಭಾರತದ ಪ್ರಾಂತ್ಯಾಧಿಕಾರಿ ಸಿ. ಪ್ಲೇವಿ ಕ್ಯಾಸ್ತಲಿನೊ, ಡಾ| ಮಂಜುಷಾ ಪಾಟೀಲ ಮಾತನಾಡಿದರು.
ಸಂಸ್ಥೆಯ ಮುಖ್ಯಸ್ಥೆ ಸಿ. ನೂತನ ಟಿರ್ಕಿ, ಪತ್ರಕರ್ತ ಅವಧೂತ ಬಂಡಗಾರ, ಸಮಾಜ ಸೇವಕರಾದ ಸಿ. ಓಲಿವಾ, ಆನಂದ ಕುಮಸಗಿ, ಅನುಸುಯಾ ಪಟ್ಯಾಟಿ ಇದ್ದರು.

