ಉದಯರಶ್ಮಿ ದಿನಪತ್ರಿಕೆ
ಅಪಜಲಪುರ: ಭೀಮಾತೀರದಲ್ಲಿರುವ
ಉಡಚಣದಲ್ಲಿ ಸಹಸ್ರಾರ ಭಕ್ತರ ಜೈ ಘೋಷಗಳ ಮಧ್ಯೆ ಸಂಭ್ರಮದಿಂದ ಹುಚ್ಚ ಲಿಂಗೇಶ್ವರ ಜಾತ್ರಾ ಮಹೋತ್ಸವ ಬುಧವಾರ ಅಧೂರಿಯಾಗಿ ನೆರವೇರಿತು.
ಬುಧವಾರ ಬೆಳಗ್ಗೆ ಶ್ರೀ ಹುಚ್ಚ ಲಿಂಗೇಶ್ವರರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ಭೀಮಾನದಿಗೆ ಗಂಗಾ ಸ್ಥಲ
ಮಾಡಿಸಿಕೊಂಡು ಮೂರ್ತಿಯನ್ನು ದೇವಸ್ಥಾನಕ್ಕೆ ಅದ್ದೂರಿ ಮೆರವಣಿಗೆ ಡೊಳ್ಳು ಹಲಗೆ ಬಾಜಾ ಭಜಂತ್ರಿಗಳೊಂದಿಗೆ ಕರೆ ತರಲಾಯಿತು.
ನಂತರ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಹಸ್ರಾರು ಭಕ್ತ ಸಮೂಹ ಮಧ್ಯೆ ಮಧ್ಯಾನ ಎರಡು ಗಂಟೆಗೆ ಭಂಡಾರಿ ದಂಪತಿ ಅಗ್ಗಿ ಪ್ರವೇಶಿಸುವ ಮೂಲಕ ಅಗ್ಗಿ ಹಾಯುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು, ರಾಜ್ಯ ಹಾಗೂ ನೆರೆ ರಾಜ್ಯದ ಭಕ್ತರು ಬಿಸಿಲಲ್ಲಿ ಅಗ್ಗಿ ಹಾಯುವ ಸನ್ನಿವೇಶವನ್ನು ಕಣ್ತುಂಬಿಕೊಂಡು ಧನ್ಯರಾದರು, ಸಹಸ್ರಾರು ಭಕ್ತರು ಆಗ್ಗಿ ಪ್ರವೇಶವನ್ನು ವೀಕ್ಷಿಸಿದರು. ಎಲ್ಲೆಡೆ ಹುಚ್ಚ ಲಿಂಗೇಶ್ವರ ಮಹಾರಾಜ ಕಿ ಜೈ ಜೈ ಘೋಷಣೆಗಳು ಮೊಳಗಿದವು,
ಬೃಹತ್ ಜಾನುವಾರ ಜಾತ್ರೆಯೊ ನಡೆದಿದ್ದು ಸಾವಿರಾರು ಜಾನುವಾರುಗಳ ವ್ಯಾಪಾರಕ್ಕೆ ಬೃಹತ್ತ ಮಾರುಕಟ್ಟೆ ದೊರೆಕಿದೆ ಜನರಿಗೆ ಅಗ್ಗಿ ನೋಡಲು ಅನುಕೂಲ ಕಲ್ಪಿಸಲು ಬೃಹತ್ ಟೀವಿ ಪರದೆಗಳನ್ನು ಅಳವಡಿಸಲಾಗಿತ್ತು.
ಹುಚ್ಚ ಲಿಂಗೇಶ್ವರ ಜಾತ್ರಾ ಮಹೋತ್ಸವದ ಅಗ್ಗಿಯಲ್ಲಿ ಪಾಲ್ಗೊಂಡ ಎಚ್ ಕೆ ಇ ಸೊಸೈಟಿ ನಿರ್ದೇಶಕರಾದ ಅರುಣ್ ಕುಮಾರ್ ಪಾಟೀಲ್ ಅಗ್ಗಿ ತುಳಿದು ಧನ್ಯರಾದರು.
ಶ್ರೀ ಹುಚ್ಚ ಲಿಂಗೇಶ್ವರ ಜಾತ್ರೆಗೆ ಆಗಮಿಸಿದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಶ್ರೀ ಹುಚ್ಚಲಿಂಗೇಶ್ವರ ದೇವಸ್ಥಾನಕ್ಕೆ ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನ ಕಮಿಟಿ ಅಧ್ಯಕ್ಷ ಸಿದ್ದಾರ್ಥ್ ಮೈಂದಗಿ, ಖಾಜಪ್ಪ ನಾಲ್ಕ್ ಮನ್, ವಿಠಲ್ ಕಡ್ಲಾಜಿ, ಗಡದೆಪ್ಪ ಕಡ್ಲಾಜಿ, ಸಿದ್ದಲಿಂಗ ಬಬಲೇಶ್ವರ್ ಹಾಗು ಇತರರು ಇದ್ದರು, ರಾತ್ರಿ 10 ಗಂಟೆಗೆ ಪವಾಡಪುರುಷ ಉಡಚಣ ಶ್ರೀ ಹುಚ್ಚಲಿಂಗೇಶ್ವರ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ, ನಾಟಕದಲ್ಲಿ ಶ್ರೀ ಹುಚ್ಚಲಿಂಗೇಶ್ವರರಾಗಿ ಟ್ರಸ್ಟ್ ನ ಅಧ್ಯಕ್ಷ ಸಿದ್ದಾರ್ಥ್ ಮೈಂದರಗಿ ಅಭಿನಯಿಸಲಿದ್ದಾರೆ, ಖ್ಯಾತ ಕಲಾವಿದರಾದ ಮನೋಹರ್ ಅಥರ್ಗಾ, ಸಿದ್ದಾರ್ಥ ಅಥರ್ಗಾ, ಸಿದ್ದಾರ್ಥ್ ಕಡಲಾಜಿ, ಚಂದ್ರಶೇಖರ್ ಇಬ್ರಾಹಿಂಪುರ್, ಶಿವಾನಂದ್ ಮೂಲಿಮನಿ, ಕುಲಪತಿ ಕಡ್ಲಾಜಿ, ರಮೇಶ್ ಸಿಂಗೆ, ಹುಚ್ಚಪ್ಪ ಸಿಂಗೆ, ವಿಜಯ್ ಕುಮಾರ್ ಹೊಸಮನಿ, ವಿಠ್ಠಲ್ ಬಬಲೇಶ್ವರ, ಬಸವರಾಜ ಗಂಗನಹಳ್ಳಿ, ಹುಚ್ಚಪ್ಪ ಕಡ್ಲಾಜಿ, ಕಲ್ಲಪ್ಪ ಕಡ್ಲಾಜಿ, ಶಂಕರ್ಲಿಂಗ ಕಲ್ಲಾಜಿ ನಾಟಕದಲ್ಲಿ ಅಭಿನಯಿಸಲಿದ್ದಾರೆ, ಶ್ರೀಮಂತ ಕೌಲಗಿ ಅಗರಖೇಡ್ ನಿರ್ದೇಶನದಲ್ಲಿ ಹಾರ್ಮೋನಿಯಂ ನುಡಿಸಲಿದ್ದಾರೆ.

