ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ಎಸ್.ವ್ಹಿ.ಪಾಟೀಲ್ ಮೆಮೊರಿಯಲ್ ಐಟಿಐ ನಿಡಗುಂದಿ ಹಾಗೂ ಟೊಯೋಟೊ ಕಿರ್ಲ್ಲೋಸ್ಕರ್ ಮೋಟರ್ಸ್ ಲಿಮಿಟೆಡ್ ಬಿಡದಿ ಇವರ ಮಾರ್ಗದರ್ಶನದಲ್ಲಿ ಹಾಗೂ ಪೊಲೀಸ್ ಇಲಾಖೆ ನಿಡಗುಂದಿ ಇವರ ಸಹಯೋಗದೊಂದಿಗೆ ರಸ್ತೆ ಸುರಕ್ಷತಾ ಸಂಚಾರದ ಬಗ್ಗೆ ಅರಿವು ಮೂಡಿಸುವ ಬಗ್ಗೆ ಐಟಿಐ ತರಬೇತಿದಾರರು ಹಾಗೂ ಪೊಲೀಸ್ ಇಲಾಖೆಯ ಜೊತೆಗೆ ಜಾಥಾ ಹಾಗೂ ಸುರಕ್ಷತೆಯ ಬಗ್ಗೆ ಕರಪತ್ರಗಳನ್ನು ಹಂಚಲಾಯಿತು.
ಈ ಕಾರ್ಯಗಾರದಲ್ಲಿ ನಿಡಗುಂದಿ ಪೊಲೀಸ್ ಇಲಾಖೆಯ ಸಿಪಿಐ ಅಶೋಕ್ ಚವಾಣ್ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಸತೀಶಗೌಡ ಪಾಟೀಲ ಇವರು ತರಬೇತುದಾರರಿಗೆ ರಸ್ತೆ ಸುರಕ್ಷತೆಯ ಅರಿವಿನ ಅಗತ್ಯ ಕುರಿತು ವಿವರಿಸಿದರು.
ಶಕುಂತಲಾ ಮೇಡಂ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ವಿಡಿಯೋಗಳನ್ನು ಪ್ರದರ್ಶಿಸಲಾಯಿತು.

