ರಚನೆ
– ಡಾ ಶಶಿಕಾಂತ ಪಟ್ಟಣ
ರಾಮದುರ್ಗ
ಉದಯರಶ್ಮಿ ದಿನಪತ್ರಿಕೆ
ದೂರ ಇರೋಣ
ಕನಸು ತೊರೆದು
ಭಾವ ಮರೆತು
ವಾಸ್ತವ ಪ್ರಜ್ಞೆಯ
ಗೂಡಿನಲ್ಲಿ
ಮುಸ್ಸಂಜೆ ಹಕ್ಕಿ
ಮಿನುಗುವ ಚುಕ್ಕಿ
ಮರದ ಪೊದರಿನ
ಧ್ವನಿ ಇಂಚರ
ಮಧುರ ಕಿವಿಯಲ್ಲಿ
ಬೆಳದಿಂಗಳು ಕಡಲದಡಿ
ಹೆಜ್ಜೆ ಹಾಕಿ ನಡೆದಿದ್ದೆ
ಪಾದಕ್ಕೆ ಅಪ್ಪಳಿಸಿದ
ಸಮುದ್ರದ ಅಲೆಗಳು
ನನ್ನ ಭ್ರಮೆಗೆ ನಕ್ಕವು
ಬೇಡ ನನಗೆ ಜನ ಜಂಗುಳಿ
ಬೇಡ ಬೇಡ ಶಬ್ದ ಸೂತಕ
ನನಗೆ ನಾನೆ ನೆರಳು
ನಡೆ ಕಾಣುವ ಬೆಳಕು
ನೆಮ್ಮದಿಯ ಬದುಕು
