Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಭಾವರಶ್ಮಿ»ಸಂತೃಪ್ತಿಯೆ ಶ್ರೇಷ್ಟ ಸಂಪತ್ತು
ಭಾವರಶ್ಮಿ

ಸಂತೃಪ್ತಿಯೆ ಶ್ರೇಷ್ಟ ಸಂಪತ್ತು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಮಮತಾ ಸತೀಶ್ ಹೆಗಡೆ
ಶಿರಸಿ

ಉದಯರಶ್ಮಿ ದಿನಪತ್ರಿಕೆ

   ಮಾನವ ತನ್ನ ಜೀವನದಲ್ಲಿ ಸುಖವೆಂಬ ಮಾಯಾ ಮೋಹ ಜಾಲದಲ್ಲಿ ಸಿಲುಕಿ ಆಸೆಯ ಕುದುರೆ ಏರಿ ನಿರಂತರ ತನ್ನ ಜೀವಮಾನವೆಲ್ಲ ಹಣ ಸಂಗ್ರಹದ ಕಾಯಕದಲಿ ಹಗಲು ರಾತ್ರಿ ಹೆಣಗಾಡುತ್ತಿರುತ್ತಾನೆ. ಸುಖವೆಂಬ ಸಾಧನ ಕನ್ನಡಿಯೊಳಗನ ಗಂಟು ಅನ್ನುವುದನ್ನು ಮರೆತು ಮೂಢನಾಗಿ ದಿನಗಳೆಯುತ್ತಾನೆ. ಈ ಸಂಸಾರಸಾಗರದಲಿ ಸಂತೃಪ್ತಿ ಜೀವನವೇನೆಂಬುದನ್ನ ಅರಿಯದೆ ಸಿಗದ ಮರಿಚಿಕೆಯ ಹಿಂದೆ ನಾಗಾಲೋಟ ನಡೆಸುತ್ತಾನೆ. ಸಂತೃಪ್ತಿ ಹುಡುಕುವ ಭರದಲ್ಲಿ ತನ್ನ ಜೀವನದ ಆಯಸ್ಸನ್ನೆಲ್ಲ ಕಳೆದು ಮುಪ್ಪಾವರಿಸುವ ಹೊತ್ತಿಗೆ ತಾನು ಕಳೆದುಕೊಂಡ ಸಂತೃಪ್ತಿಯ ನೆನೆ ನೆನೆದು ದು:ಖಪಡುವಂತಾಗುತ್ತಿರುತ್ತಾನೆ. ಹೀಗೊಂದು ಘಟನೆ ನನ್ನ ಆಪ್ತ ಸ್ನೇಹಿತೆ ತಂದೆ ಆಗರ್ಭ ಶ್ರೀಮಂತರು  ಆದರೂ ಇನ್ನು ಬೇಕು ಮತ್ತೂ ಬೇಕೆಂಬ ದುರಾಸೆ ಬೆನ್ನು ಹತ್ತಿ ತಾವು ಹತ್ತಾರು ವರ್ಷಗಳಿಂದ ನಡೆಸಿಕೊಂಡು ಬಂದ ಫೆಕ್ಟರಿಯ ಆದಾಯವನ್ನೆಲ್ಲ ಒಂದೇ ಸಲ ದುಪ್ಪಟ್ಟಿನ ಆಸೆಗಾಗಿ ಶೇರ್ ವ್ಯವಹಾರದಲ್ಲಿ ತೊಡಗಿಸ ತೊಡಗಿದರು. ಮನುಜನ ಗ್ರಹಗತಿಗಳು ದೇವನಿರ್ಮಿತ ಒಳ್ಳೆಯಕಾಲಕ್ಕು ಕೆಡುಗಾಲಕ್ಕು ಅವನಲ್ಲವೆ ಸೂತ್ರಧಾರ ಹಾಗಿರುವಾಗ. ಅವರ ಆಸೆ ಕುದುರೆ ಈಗ ನಾಗಲೋಟಕ್ಕೆ ಅಣಿಯಾಗಹತ್ತಿತು. ಮನೆಯ ಮಕ್ಕಳು ಮಡದಿ ಯಾರ ಮಾತನ್ನು ಲೆಕ್ಕಿಸದೆ ತನ್ನ ಮನ ಬಂದಂತೆ ತೊಡಗಿಸ ತೊಡಗಿದರು. 
      ಮೊದ ಮೊದಲು ಲಾಭದಲಿ ಓಡುತ್ತಿದ್ದ ಶೇರ್ ಕುದುರೆ ದಿನಗಳೆದಂತೆ ಲಾಭದಿಂದ ತಿರುಗಿ ನಷ್ಟದ ದಾರಿಗಿಳಿಯ ಹತ್ತಿತು. ಹೆಚ್ಚಿನ ಹಣದಾಸೆಯಿಂದ ಹಣದಿಂದ ಸುಖವ ಪಡೆವೆನೆಂಬ ಆಸೆಯ ಆಶಯದಿಂದ ಈಗ ಹೈರಾಣಾಗ ಹತ್ತಿದರು ರಾಯರು. ದಿನೇ  ದಿನೆ ಚಿಂತೆ ಅವರನ್ನ ಆವರಿಸಿ ಒಳಗೊಳಗೆ ಕೊಲ್ಲ ಹತ್ತಿತು. ಮನೆಯವರನ್ನೆಲ್ಲ ಮಾತು ಮಾತಿಗೆ ಸಿಡಿಮಿಡಿ ಮಾಡಹತ್ತಿದರು. ತನ್ನ ನಷ್ಟದ ವ್ಯವಹಾರದ ಕುರಿತಾಗಿ ಹೇಳಿಕೊಳ್ಳಲಾರದೆ ಒಳಗೊಳಗೆ ಕುಗ್ಗಿಹೋದರು. ಸಂತೃಪ್ತಿ ತಂದುಕೊಡುವುದೆಂದು ಬೆನ್ನು ಹತ್ತಿದ್ದ ಕಾಂಚಾಣ ಕುದುರೆ ಅವರನ್ನ  ಕೈಚೆಲ್ಲಿ ಕುಳಿತುಕೊಳ್ಳುವಂತೆ ಮಾಡಿತ್ತು. ಅವರ ಹಣದಾಹ ಮನೆಮಂದಿಯ ಸಂತೃಪ್ತಿಯನ್ನ ತಿಂದು ತೇಗಿತ್ತು. ಈಗ ಅವರಿಗೆ ಅರಿವಾಗತೊಡಗಿತು. ಮೊದಲಿದ್ದ ಐಶ್ವರ್ಯದಲ್ಲಿ ನೆಮ್ಮದಿ ಸಂತೃಪ್ತಿ ಎರಡು ಮನೆಯನಾವರಿಸಿತ್ತು. ಇಂದು ಎಲ್ಲವು ಕಳೆದು ಫೆಕ್ಟರಿ ಮಾರುವ ಹಂತಕ್ಕೆ ಬಂದು ನಿಂತುಬಿಟ್ಟಿತು. ಅಂದಿನ ತನ್ನ ವಹಿವಾಟುಗಳೆ ಸರಿದಾರಿಯಲ್ಲಿದ್ದವು ಅತಿ ಆಸೆಗಾಗಿ ಸಂತೃಪ್ತಿಯನ್ನೆಲ್ಲ ಕಳೆದುಕೊಂಡೆ ಎಂದು ಪರಿತಪಿಸತೊಡಗಿದರು . ಹೆಂಡತಿ ಮಕ್ಕಳಲ್ಲಿ ಕ್ಷಮೆ ಯಾಚಿಸತೊಡಗಿದರು. 

ತಡವಾಗಿ ಆದರೂ ತಪ್ಪಿನ ಅರಿವಾಗಿದ್ದಕ್ಕೆ ಮತ್ತೆ ಸಂತೃಪ್ತಿಯ ನಿಟ್ಟುಸಿರುಬಿಟ್ಟರು. ಮತ್ತೆ ಛಲದಿಂದ ಫೇಕ್ಟರಿಯನ್ನ ಕಟ್ಟಿ ನಡೆಸತೊಡಗಿದರು. ಮನೆಯಲ್ಲಿ ಸಂತೃಪ್ತಿ ನೆಮ್ಮದಿ ಆಗಮಿಸತೊಡಗಿತು. ಹಾಗಾಗಿ ಸಂತೃಪ್ತಿ ಯೇ ಶ್ರೇಷ್ಟ ಸಂಪತ್ತು ಅನ್ನುವುದರಲ್ಲಿ ಎರಡು ಮಾತಿಲ್ಲ. ನಾವು ನಮ್ಮಿಷ್ಟದಂತೆ ಅತಿಯಾಸೆ ಮಾಡದೆ ಇದ್ದುದರಲ್ಲೆ ನೆಮ್ಮದಿಯನ್ನ ಪಡೆದುಕೊಳ್ಳುವುದನ್ನ ಕಲಿತು ನಡೆಸುವ ಜೀವನವೇ ಸಂತೃಪ್ತ ಜೀವನ ಶ್ರೇಷ್ಟ ಜೀವನ ಸಂತೃಪ್ತಿಯಿಲ್ಲದ ಐಶ್ವರ್ಯ ನರಕಕ್ಕೆ ಸಮಾನ. ಓಡಹುಟ್ಟಿದವರ ಸಹಕಾರ ಸಹನೆ ಹಿರಿಕಿರಿಯರ ಸ್ನೇಹಪರತೆಯ ಒಡನಾಟ ಮಮಕಾರ ಬಂಧನವೆ ಶ್ರೇಷ್ಟ ಸಂಪತ್ತು. ಕಷ್ಟನಷ್ಟಗಳಲಿ ಜೊತೆಯಾಗಿ ನಡೆವವರೆ ನಮ್ಮ ಹಿತೈಷಿಗಳು.ಇಲ್ಲದ ದಾಹಗಳಿಗೆ ಮಾರುಹೋಗದೆ ಸಂಗ ಜೀವನ ನಡೆಸಿ ಹಿಡಿತದ ಬದುಕೆ ಶ್ರೇಷ್ಟ ಸಂತೃಪ್ತ ಬದುಕು. ಸುಖವ ಹಂಚಿ ಬಾಳಿದರೆ ಜೀವನ ನಂದನವನ. ಅರಿತು ನಡೆವ ಬಾಳೆ ಸಂತೃಪ್ತ ಜೀವನ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ

ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ

ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!

ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಧ್ಯಕ್ಷರಾಗಿ ಎನ್.ಬಿ.ಪಿಂಜಾರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಅಸಭ್ಯ ವರ್ತನೆ ತೋರಿ ಹಬ್ಬಗಳನ್ನು ಅಗೌರವಿಸದಿರಿ :ಸುಂಬಡ
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಚೇರಿಗೆ ಮುತ್ತಿಗೆ!
    In (ರಾಜ್ಯ ) ಜಿಲ್ಲೆ
  • ಕ್ರಿಕೆಟ್ ಕ್ರೀಡಾಪಟುಗಳಿಗೆ ಪ್ರತ್ಯೇಕ ಕ್ರೀಡಾಂಗಣ ಕಲ್ಪಿಸಿ
    In (ರಾಜ್ಯ ) ಜಿಲ್ಲೆ
  • ಆಶ್ರಯ ಕಾಲೊನಿ ನಿವಾಸಿಗಳಿಗೆ ಶೀಘ್ರ ಹಕ್ಕುಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಧರ್ಮಸ್ಥಳ ಸಂಘ ಕಾರ್ಯ ಶ್ಲಾಘನೀಯ :ಎಸಿ ಅನುರಾಧ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸ್ವಾವಲಂಬನೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿ
    In (ರಾಜ್ಯ ) ಜಿಲ್ಲೆ
  • ವೈಜ್ಞಾನಿಕ ಮನೋಭಾವದ ಕೊರತೆಯಿಂದ ಮೌಢ್ಯಗಳ ಹೆಚ್ಚಳ
    In (ರಾಜ್ಯ ) ಜಿಲ್ಲೆ
  • ಕೊಂಡಗೂಳಿಗೆ ಸರ್ಕಾರಿ ಪ್ರೌಢಶಾಲೆ ಮಂಜೂರಿಗೆ ಆಗ್ರಹಿಸಿ ಸಚಿವರಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಬಸವ ಚೇತನ ಪ್ರಶಸ್ತಿಗೆ ಕೆ.ಎಸ್.ಕೋರಿ ಆಯ್ಕೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.