ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದಲ್ಲಿ ಗಾಂಧಿ ವೃತ್ತ ಅತ್ಯಂತ ಚಿಕ್ಕದಾಗಿತ್ತು. ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಮನಗಂಡು ಅದನ್ನು ಅವರ ವೈಯುಕ್ತಿಕ ಹಣದಿಂದ ಅತ್ಯಂತ ಸುಂದರವಾದ ವೃತ್ತ ನಿರ್ಮಾಣ ಮಾಡಲು ಹೊರಟಿದ್ದು ಸಂತಸ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.
ಸಿಂದಗಿ ಪಟ್ಟಣದ ಆಲಮೇಲ ರಸ್ತೆಯಲ್ಲಿ ನೂತನವಾಗಿ ಗಾಂಧಿ ವೃತ್ತ ನಿರ್ಮಾಣ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿಗಳಿಂದ ರಾಜ್ಯದ ಕೋಟ್ಯಾಂತರ ಜನರಿಗೆ ಅನುಕೂಲವಾಗಿದೆ. ಇವುಗಳಿಂದ ರಾಜ್ಯದ ಅಭಿವೃದ್ದಿಯಲ್ಲಿ ಯಾವುದೇ ರೀತಿಯ ಕುಂಟಿತವಾಗಿಲ್ಲ. ರಂಬಾಪುರಿ ಶ್ರೀಗಳು ರಾಜ್ಯ ಸರ್ಕಾರ ಪಂಚ ಗ್ಯಾರೆಂಟಿಗಳನ್ನು ಸರ್ಕಾರ ವಿಮರ್ಶೆ ಮಾಡಬೇಕೆಂದ ಮಾತಿಗೆ ಪರ್ತಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು ಸಿಎಂ ಸಿದ್ದರಾಮಯ್ಯ ಅವರು ೧೬ ಬಾರಿ ಬಜೆಟನ್ನು ಮಂಡಿಸಿದ್ದಾರೆ. ಅವರು ಹಣಕಾಸಿನ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಶ್ರೀಗಳ ಮಾತನ್ನು ನಾವು ಸ್ವಾಗತಿಸುತ್ತೇವೆ. ವಿಜಯಪುರ ನಗರದಲ್ಲಿ ದೊಡ್ಡದಾದ ಗಾಂಧಿ ವೃತ ನಿರ್ಮಾಣ ಮಾಡುವಲ್ಲಿ ಪಣ ತೊಟ್ಟಿದ್ದೇವು ಆದರೆ ಮೇಲಸೇತುವೆ ವಿಚಾರ ಮಧ್ಯ ಬಂದಾಗ ವೃತ್ತದ ವಿಚಾರ ಕೈಬಿಟ್ಟಿದ್ದೇವೆ ಮುಂದಿನ ದಿನಮಾನಗಳಲ್ಲಿ ಮೇಲಸೇತುವೆ ಸಮಸ್ಯೆ ಬಗೆಹರಿಸಿ ವೃತ್ತ ನಿರ್ಮಿಸುವ ಕಾರ್ಯಕ್ಕೆ ಮುಂದಾಗುತ್ತೇವೆ ಎಂದರು.
ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ರಾಜ್ಯ ಸರ್ಕಾರ ಎಲ್ಲ ಶಾಸಕರಿಗೂ ೧೦ ಕೋಟಿ ಅನುದಾನವನ್ನು ಅಭಿವೃದ್ದಿಗೆ ನೀಡಿದೆ ಅನುದಾನ ನೀಡುವಲ್ಲಿ ಯಾರಿಗೂ ತಾರತಮ್ಯ ಮಾಡಲ್ಲ ಎಂದ ಅವರು ಪಟ್ಟಣದಲ್ಲಿ ಗಾಂಧಿ ವೃತ್ತ ಹಲವು ವರ್ಷಗಳಿಂದ ನಿರ್ಮಾಣವಾಗಿತ್ತು ಪಟ್ಟಣದ ಜನತೆಯ ಬಹು ದಿನಗಳ ಬೇಡಿಕೆಯಾದ ನೂತನ ವೃತ್ತ ನಿರ್ಮಾಣದ ಕನಸು ಇಂದು ನೆರವೇರಿದೆ ಎಂದರು.
ಈ ವೇಳೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಊರಿನ ಹಿರಿಯಮಠದ ಶಿವಾನಂದ ಶಿವಾಚಾರ್ಯರು, ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಪುರಸಭೆಯ ಅಧ್ಯಕ್ಷ ಶಾಂತವೀರ ಬಿರಾದಾರ, ಉಫಾಧ್ಯಕ್ಷ ರಾಜಣ್ಣಿ ನಾರಾಯಣಕರ, ಅಶೋಕ ವಾರದ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಪುರಸಭೆಯ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹಣಮಂತ ಸುಣಗಾರ, ಸದಸ್ಯ ಬಸವರಾಜ ಯರನಾಳ, ಸಾಯಬಣ್ಣ ಪುರದಾಳ, ವಾಯ್.ಸಿ.ಮಯೂರ, ಪ್ರವೀಣ ಹಾಲಹಳ್ಳಿ, ಅಶೋಕ ಸುಲ್ಪಿ, ಉಮೇಶ ಜೋಗೂರ, ಚನ್ನು ವಾರದ, ನೂರಅಹ್ಮದ ಅತ್ತಾರ, ಶಿವು ಹತ್ತಿ, ಶರಣಪ್ಪ ಸುಲ್ಪಿ, ಪರುಶುರಾಮ ಕಾಂಬಳೆ, ಅಭಿಯಂತರ ರಾಕೇಶ ಬ್ಯಾಕೋಡ, ಸುನಂದಾ ಯಂಪೂರೆ, ಮಹಾನಂದ ಬಮ್ಮಣ್ಣಿ, ಪ್ರತಿಭಾ ಚಳ್ಳಗಿ ಸೇರಿದಂತೆ ಅನೇಕರಿದ್ದರು.

