ರಚನೆ
– ಡಾ.ಶಶಿಕಾಂತ ಪಟ್ಟಣ
ರಾಮದುರ್ಗ
ಉದಯರಶ್ಮಿ ದಿನಪತ್ರಿಕೆ
ಎಲ್ಲವೂ ಇದೆ
ಈ ನೆಲದ
ರಾಷ್ಟ್ರದಲ್ಲಿ
ಅಚ್ಚ ಹಸಿರು ಕಾಶ್ಮೀರ
ಕಣಿವೆ ಕಾಡು
ಗಿರಿ ಬೆಟ್ಟಗಳ
ಮಧ್ಯೆ ಹರಿವ
ನದಿ ನೀರು
ಇನ್ನೊಂದೆಡೆಗೆ
ಮರ ಭೂಮಿ
ಕುಡಿಯಲು
ನೀರಿಲ್ಲದ ಬಳಲಿಕೆ
ಹಸಿವು ಬಡತನ
ಕೆಲಸವಿಲ್ಲದ ಕೈಗಳು
ಸೋಮಾಲಿಯದ
ಕ್ರೂರ ಚಿತ್ರಣ
ಹುಟ್ಟಿದ್ದಾರೆ ಇಲ್ಲಿ
ಬುದ್ಧ ಬಸವ ಬಾಪು
ಜಗದ ಮಹಾ ಜಾಣ
ಅಂಬೇಡ್ಕರ
ಸಂಚು ಮಾಡಿ
ಕೊಂದ ಗೋಡ್ಸೆಗಳು
ಸತ್ಯ ಸಮತೆ ಪ್ರೀತಿ
ಅರಳಿ ಮುದಡಿದ್ದು ಇಲ್ಲಿ
ಜಗವು ಬಳಲುವುದು
ದುಷ್ಟರ ಕ್ರೂರರ
ಹಿಂಸೆಯಿಂದಲ್ಲ
ಶಿಷ್ಟರ ಮೌನದಿಂದ
ಈಗಲಾದರೂ ಎದ್ದೇಳಿ
ಹೆಜ್ಜೆ ಹಾಕಿ ವಿಶ್ವ ಪಥಕೆ
ಮೌಢ್ಯ ಮೆಟ್ಟಿ
ಮೌಲ್ಯ ಬೆಳೆಯುವ
ಇಲ್ಲಿ ಎಲ್ಲವೂ ಇದೆ
