ರಚನೆ
– ಗೀತಾ ಶರ್ಮಾ
(“ನಮ್ಮ ಕಥಾ ಅರಮನೆ” ಬರಹಗಾರರು)
ಉದಯರಶ್ಮಿ ದಿನಪತ್ರಿಕೆ
ಎಲ್ಲಿನೋಡಿದರು ಪ್ಲಾಸ್ಟಿಕ್ ಬಳಕೆ ನಿರಂತರವಾಗಿದೆ
ಯಾವರೀತಿಯೂ ಕರಗದ ಘನತ್ಯಾಜ್ಯ ಹೆಚ್ಚಾಗಿದೆ
ಪ್ರಕೃತಿಮಡಿಲಿಗೆ ಇದರ ಹಾವಳಿ ತಡೆಯದಾಗಿದೆ
ನೀರಿನ ಒಸರಿನಕೊರತೆ ನೀಗಿಸಲು ಕಷ್ಟವಾಗುತ್ತಿದೆ
ವೈಜ್ಞಾನಿಕವಾಗಿ ಭೂಮಿಯ ಫಲವತ್ತತೆ ತಗ್ಗುತ್ತದೆ
ನಿಸರ್ಗದ ಉಷ್ಣಾಂಶಹೆಚ್ಚಿ ಪರಿಣಾಮ ಬೀರುತ್ತಿದೆ ಬಣ್ಣದರೂಪದ ವಸ್ತುಗಳಿಂದ ಆರೋಗ್ಯಕೆಡುತ್ತಿದೆ
ಹಲವಾರು ರೋಗರುಜಿನಕ್ಕೆ ಆಮಂತ್ರಣ ನೀಡಿದೆ
ಪರಿಸರಮಾಲಿನ್ಯ ನಿಯಂತ್ರಣ ಜನರ ಕೈಯಲ್ಲಿದೆ
ಪ್ರಾಣಿ ಪಕ್ಷಿ ಪ್ರಾಣಸಂರಕ್ಷಣೆ ಮಾಡಿಕೊಳ್ಳಬೇಕಿದೆ
ವಿಕೋಪವನು ತಡೆಯಲು ಎಲ್ಲರ ಸಹಕಾರ ಬೇಕಿದೆ
ಮುಂದಿನ ಅನಾಹುತವ ತಡೆಯಲು ವಿನಂತಿಯಿದೆ
