ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಕುರಿತ ಸಾಮಾಜಿಕ ಭದ್ರತಾ ಯೋಜನೆಯಡಿಯ ಜಿಲ್ಲೆಯ 13 ಗ್ರಾಮಗಳಲ್ಲಿ ಜ.4 ರಂದು ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.
ಜ.4 ರ ಬೆಳಿಗ್ಗೆ 11 ಗಂಟೆಗೆ ವಿಜಯಪುರದ ಉಪವಿಭಾಗಾಧಿಕಾರಿ ವಿಜಯಪುರದ ಯೋಗಾಪೂರ ಕಾಲನಿಯ ವಾರ್ಡ ನಂ 16 ರ ಶ್ರೀ ಹನುಮಾನ ದೇವಸ್ಥಾನದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ಬೆಳಿಗ್ಗೆ 11ಗಂಟೆಗೆ ಬಿಸನಾಳ ಗ್ರಾಮದ ಹನುಮಾನ ದೇವಸ್ಥಾನದಲ್ಲಿ, ತಿಕೋಟಾದ ಗ್ರೇಡ್-2 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ಕೋಟ್ಯಾಳ ಗ್ರಾಮದ ಹನುಮಾನ ದೇವಸ್ಥಾನದಲ್ಲಿ, ಬಬಲೇಶ್ವರ್ ಗ್ರೇಡ್-2 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ಬೆಳ್ಳುಬ್ಬಿ ಗ್ರಾಮದ ಶ್ರೀ ಮಳೆಸ್ವಾಮಿ ದೇವಸ್ಥಾನದಲ್ಲಿ, ಬಸವನ ಬಾಗೇವಾಡಿಯ ಗ್ರೇಡ್-2 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ಬಿಸನಾಳ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ನಿಡಗುಂದಿ ಗ್ರೇಡ್-2 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ಗಣಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ, ಕೊಲ್ಹಾರ ಗ್ರೇಡ್-1 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ತಡಲಗಿ ಗ್ರಾಮದ ರಾಮಾ ಅವದೂತ ಮಠದಲ್ಲಿ, ಮುದ್ದೇಬಿಹಾಳ ಗ್ರೇಡ್-2 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ಆಲಕೋಪ್ಪರ ಗ್ರಾಮದ ಗ್ರಾಮದೇವತೆ ದೇವಸ್ಥಾನದಲ್ಲಿ, ತಾಳಿಕೋಟಿಯ ಗ್ರೇಡ್-1 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ಶಿವಪೂರ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಚಡಚಣ ಗ್ರೇಡ್-2 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ನಂದ್ರಾಳ ಗ್ರಾಮದ ಗ್ರಾಮ ಚಾವಡಿಯಲ್ಲಿ, ಸಿಂದಗಿ ಗ್ರೇಡ್-2 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ಕಣ್ಣಗುಡ್ಡಿಹಾಳ ಗ್ರಾಮದ ಕನ್ನಡ ಗಂಡು ಮಕ್ಕಳ ಸರಕಾರಿ ಶಾಲೆಯಲ್ಲಿ, ದೇವರ ಹಿಪ್ಪರಗಿ ಗ್ರೇಡ್-2 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ಹಂಚಲಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಹಾಗೂ ಆಲಮೇಲ ಗ್ರೇಡ್-1 ತಹಶೀಲ್ದಾರ ಬೆಳಿಗ್ಗೆ 11ಗಂಟೆಗೆ ಆಹೇರಿ ಗ್ರಾಮದ ಕನ್ನಡ ಗಂಡು ಮಕ್ಕಳ ಸರಕಾರಿ ಶಾಲೆಯಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.
ಪಿಂಚಣಿ ಅದಾಲತ್ ನಡೆಯುವ ಗ್ರಾಮಗಳಲ್ಲಿ ಸಾಮಾಜಿಕ ಭದ್ರತೆ ಪಿಂಚಣಿ ಫಲಾನುಭವಿಗಳಿಗೆ ಎನ್.ಪಿ.ಸಿ.ಐ. ಮ್ಯಾಪಿಂಗ್ ಕಾರ್ಯವನ್ನು ಸಂಬಂಧಿಸಿದ ಬ್ಯಾಂಕ್, ಅಂಚೆ ಕಚೇರಿ ಅಧಿಕಾರಿಗಳ ಸಹಯೋಗದೊಂದಿಗೆ ತಪ್ಪದೇ ಮಾಡಿಸುವಂತೆಯೂ ಹಾಗೂ ಪಿಂಚಣಿ ಅದಾಲತನಲ್ಲಿ ಪಿಂಚಣಿದಾರರ ಮಾಹಿತಿಯೊಂದಿಗೆ ಎಲ್ಲಾ ಗ್ರಾಮಗಳ ಗ್ರಾಮ ಲೆಕ್ಕಿಗರು, ಪಂಚಾಯತ್ ಕಾರ್ಯದರ್ಶಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ಅಂಚೆ ಕಚೇರಿ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

