ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಿ.ಟಿ. ಆ್ಯಕ್ಟ್ ೧೯೪೯ ರದ್ದು ಮಾಡಬೇಕು ಬಿಹಾರದ ಬುದ್ದಗಯಾ ಮಹಾಬೋಧಿ ಮಹಾ ವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ಬೌದ್ಧ ಮಹಾಸಭಾ, ಅಖಿಲ ಭಾರತ ಬೌದ್ಧ ವೇದಿಕೆ ವಿಜಯಪುರ, ಮತ್ತು ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ರಾಷ್ಟ್ರಪತಿ ಹಾಗೂ ದೇಶದ ಪ್ರಧಾನಿ ಮಂತ್ರಿ ಹಾಗೂ ರಾಜ್ಯದ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಅಲ್ಪಸಂಖ್ಯಾತರ ಆಯೋಗದ ಮುಖ್ಯಸ್ಥರಿಗೆ ಮನವಿ ಸಲ್ಲಿಸಲಾಯಿತು.
ಆಲ್ ಇಂಡಿಯಾ ಬುದ್ಧಿಸ್ಟ್ ಫೋರಂ ನೇತೃತ್ವದಲ್ಲಿ ೨೬, ನವ್ಹಂಬರ್ ೨೦೨೪ ರಂದು ರಾಷ್ಟ್ರ ಮಟ್ಟದಲ್ಲಿ ಜರುಗುವ ಮಹಾಬೋಧಿ ಮಹಾ ವಿಹಾರ ಮುಕ್ತಿ ಆಂದೋಲನಕ್ಕೆ ಬೆಂಬಲಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಬೌದ್ಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಈ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಆಯು,ಬಸವರಾಜ್ ಹೋಳ್ಕರ್, ಸಂಯೋಜಕರು, ಅಖಿಲ ಭಾರತೀಯ ಬೌದ್ಧ ವೇದಿಕೆಯ ಆಯು ವೆಂಕಟೇಶ್ ವಾಗ್ಯನವರ ಪ್ರಭುಗೌಡ ಪಾಟೀಲ ವಿದ್ಯಾರ್ಥಿ ಪರಿಷತ್ ರಾಜ್ಯ ಅಧ್ಯಕ್ಷರಾದ ಶ್ರೀನಾಥ ಪೂಜಾರಿ, ಜಿಲ್ಲಾ ಅಧ್ಯಕ್ಷರಾದ ಅಕ್ಷಯ್ ಅಜಮನಿ, ಘಂಟೆಪ್ಪಗೊಳ, ಮುಸ್ಲಿಂ ಸಮುದಾಯದ ಎಂ.ಎ. ಬಕ್ಷಿ, ನಿವೃತ್ತಿ ಎ.ಎಸ್.ಆಯ್. ಪಯಾಜ ಕಲಾದಗಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಶಹಾಪುರ, ಜಿಲ್ಲಾ ಅಧ್ಯಕ್ಷರಾದ ಬಸವರಾಜ ಛಲವಾದಿ, ಬಿ.ಎಸ್.ಆಯ್. ವಿಜಯಪುರ ಘಟಕದ ಸದಸ್ಯರಾದ ಆಯು ಭಾಗ್ಯಶ್ರೀ ವಗ್ಯಾನವರ, ಆಯು ಅನ್ನಪೂರ್ಣ ಬೆಳ್ಳೆನವರ, ಆಯು. ಸಿದ್ದಮ್ಮ ಚಲವಾದಿ, ಆಯು.ಸುಜಾತಾ ಚಂಚಲಕರ, ಆಯು. ಭಾರತಿ ಹೊಸಮನಿ, ಆಯು ರೇಣುಕಾ ಹೊಸಳ್ಳಿ, ಮತ್ತು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

