Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರ ಜಿಲ್ಲೆಯಲ್ಲಿ ೧೮,೮೮,೬೫೭ ಗಣತಿ ನಮೂನೆ ವಿತರಣೆ

ಅಮೂಲ್ಯ ಜೀವ ಉಳಿಸಲು ರಕ್ತದಾನ ಮಾಡಿ :ದಾವುದ ಕರೆ

ಸರ್ಕಾರ ರೈತರ ಸಾಲ ಮನ್ನಾ ಮಾಡಿ ಬರಗಾಲವೆಂದು ಘೋಷಿಸಲಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಉಕ ಭಾಗದ ಗ್ರಾಮೀಣ ಜೀವನದ ಮೌಲ್ಯ, ಬದುಕು ಆಧರಿಸಿದ ’ಧಗೆ’ ಚಿತ್ರ
(ರಾಜ್ಯ ) ಜಿಲ್ಲೆ

ಉಕ ಭಾಗದ ಗ್ರಾಮೀಣ ಜೀವನದ ಮೌಲ್ಯ, ಬದುಕು ಆಧರಿಸಿದ ’ಧಗೆ’ ಚಿತ್ರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದಲ್ಲಿ ’ಧಗೆ’ ಚಿತ್ರ ತಂಡದ ನಾಯಕ ಸಂಗಮೇಶ‌ ಉಪಾಸೆ, ನಿರ್ದೇಶಕ ಕೆರ್ನಳ್ಳಿ ಈಶ್ವರ, ಪದ್ಮಶ್ರೀ ಮಂಜಮ್ಮ ಜೋಗತಿ & ಚಿತ್ರತಂಡದಿಂದ ಸುದ್ದಿಗೋಷ್ಟಿ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಜೀವನದ ಮೌಲ್ಯ, ಬದುಕು ಆಧರಿಸಿದ ಹಾಗೂ ವಿಜಯಪುರ ನೆಲದ ಕಲಾವಿದರ ಬಾಹುಳ್ಯವುಳ್ಳ ‘ಧಗೆ’ ಚಲನಚಿತ್ರ ಡಿಸೆಂಬರ್ ಮಾಸಾಂತ್ಯದೊಳಗೆ ೧೫೦ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಲನಚಿತ್ರದ‌ ನಿರ್ದೇಶಕ ಕೆರ್ನಳ್ಳಿ ಈಶ್ವರ ಹೇಳಿದರು.
ಸೋಮವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಧಗೆ ಎನ್ನುವುದು ವಿಜಯಪುರ ಭಾಗದಲ್ಲಿ ಜನಜನಿತ, ಇಲ್ಲಿನ ಬಿರುಬಿಸಿಲಿನ ಪ್ರಭಾವದಿಂದಾಗಿ ಧಗೆ ಸಾಮಾನ್ಯ, ಈ ವಾತಾವರಣ ಮಾನವ ಜೀವನದಲ್ಲಿ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದರ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ‌ ಜೋಗತಿ ಈ ಚಿತ್ರದಲ್ಲಿ ಜೋಗತಿಯ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದು, ಮಗುವೊಂದನ್ನು ಅವರು ಸಾಕುವ ನಿಟ್ಟಿನಲ್ಲಿ ಅವರು ‌ವಹಿಸುವ ಶ್ರಮ, ‌ಮಮತೆ, ಸಮಾಜದ ದೃಷ್ಟಿಕೋನ ಹೀಗೆ ಅನೇಕ ಆಯಾಮಗಳಲ್ಲಿ ಕಥೆ ಹೆಣೆಯಲಾಗಿದೆ ಎಂದರು.
ಖ್ಯಾತ ನಟ, ಕೆಎಎಸ್ ಅಧಿಕಾರಿ ಸಂಗಮೇಶ ‌ಉಪಾಸೆ ಕಥಾನಾಯಕರಾಗಿದ್ದು,
ನೀತಾ ಬಿಜಾಪುರ್, ಮುತ್ತು ಶಂಕ್ರಣ್ಣನವರ, ಪರಶುರಾಮ ಹೊಸಮನೆ, ಸಚಿನ್ ಹಳ್ಳಿ ಕಟ್ಟೆ , ಸುನಿಲ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ. ಶೇ.೯೦ ರಷ್ಟು ವಿಜಯಪುರದ ಕಲಾವಿದರೇ ಈ ಚಿತ್ರದಲ್ಲಿ ನಟಿಸಿರುವುದು ಇನ್ನೊಂದು ವಿಶೇಷ, ಆನಂದ್ ದಿಂಡವಾರ ಛಾಯಾಗ್ರಹಣ, ಕೆ.ಎಂ.‌ಇಂದ್ರ ಅವರ ಸಂಗೀತವಿದೆ ಎಂದರು.
ಕೆರ್ನಳ್ಳಿ ಈಶ್ವರ್, ದೀಪ ಬಿ. ಎಮ್., ಮಡಿವಾಳಪ್ಪ ಗೋಗಿ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ ಎಂದರು.
ಈ ಚಿತ್ರವನ್ನು ಸಿನಿ ಸ್ಟಾಲ್, ಬೆಂಗಳೂರು ಹಾಗೂ ಯುನಿವರ್ಸಲ್ ಸ್ಟುಡಿಯೊ, ವಿಜಯಪುರ ಎರಡು ಸಂಸ್ಥೆಗಳು ಸೇರಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಖ್ಯಾತ ನಟ ಸಂಗಮೇಶ ಉಪಾಸೆ ಮಾತನಾಡಿ, ಕಲಾವಿದರಿಗೆ ಪ್ರೇಕ್ಷಕರೇ ದೇವರು, ಉತ್ತರ ಕರ್ನಾಟಕ ಭಾಗದ ಕಲಾವಿದರು, ಉತ್ತರ ಕರ್ನಾಟಕ ಭಾಗದ ಕಥಾ ನೆಲೆಯುಳ್ಳ‌ ಚಿತ್ರ‌ ಇದಾಗಿದೆ, ಒಂದು ಅರ್ಥದಲ್ಲಿ ಇದೊಂದು‌ ಮೌಲ್ಯಧಾರಿತ ಕನ್ನಡ‌ ಚಿತ್ರವಾಗಿದೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ, ಪದ್ಮಶ್ರೀ ಮಂಜಮ್ಮ ಜೋಗತಿ, ’ಧಗೆ’ ಚಲನಚಿತ್ರ ನಿರ್ಮಾಪಕರಾದ ಕೆರ್ನಳ್ಳಿ ಈಶ್ವರ್, ದೀಪ ಬಿ. ಎಮ್., ಮಡಿವಾಳಪ್ಪ ಗೋಗಿ ಸೇರಿದಂತೆ ಚಿತ್ರತಂಡದವರು ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.

BIJAPUR NEWS congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರ ಜಿಲ್ಲೆಯಲ್ಲಿ ೧೮,೮೮,೬೫೭ ಗಣತಿ ನಮೂನೆ ವಿತರಣೆ

ಅಮೂಲ್ಯ ಜೀವ ಉಳಿಸಲು ರಕ್ತದಾನ ಮಾಡಿ :ದಾವುದ ಕರೆ

ಸರ್ಕಾರ ರೈತರ ಸಾಲ ಮನ್ನಾ ಮಾಡಿ ಬರಗಾಲವೆಂದು ಘೋಷಿಸಲಿ

ಹೊಣೆಗಾರಿಕೆ ಪಾಠ ಕಲಿಸಲು ಶಾಲಾ ಸಂಸತ್ತು ಸಹಕಾರಿ :ಡಿವೈಎಸ್ಪಿ ನಾಗರಾಜ‌

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರ ಜಿಲ್ಲೆಯಲ್ಲಿ ೧೮,೮೮,೬೫೭ ಗಣತಿ ನಮೂನೆ ವಿತರಣೆ
    In (ರಾಜ್ಯ ) ಜಿಲ್ಲೆ
  • ಅಮೂಲ್ಯ ಜೀವ ಉಳಿಸಲು ರಕ್ತದಾನ ಮಾಡಿ :ದಾವುದ ಕರೆ
    In (ರಾಜ್ಯ ) ಜಿಲ್ಲೆ
  • ಸರ್ಕಾರ ರೈತರ ಸಾಲ ಮನ್ನಾ ಮಾಡಿ ಬರಗಾಲವೆಂದು ಘೋಷಿಸಲಿ
    In (ರಾಜ್ಯ ) ಜಿಲ್ಲೆ
  • ಹೊಣೆಗಾರಿಕೆ ಪಾಠ ಕಲಿಸಲು ಶಾಲಾ ಸಂಸತ್ತು ಸಹಕಾರಿ :ಡಿವೈಎಸ್ಪಿ ನಾಗರಾಜ‌
    In (ರಾಜ್ಯ ) ಜಿಲ್ಲೆ
  • ಮೀಸಲಾತಿ ನಿಯಮಾನುಸಾರ ಮರು ಪರಿಶೀಲಿಸಲು ಡಿಸಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಉಕ ಭಾಗದ ಗ್ರಾಮೀಣ ಜೀವನದ ಮೌಲ್ಯ, ಬದುಕು ಆಧರಿಸಿದ ’ಧಗೆ’ ಚಿತ್ರ
    In (ರಾಜ್ಯ ) ಜಿಲ್ಲೆ
  • ಏಕತೆ ಮತ್ತು ಒಕ್ಕಟ್ಟು ಸಮಾಜದ ಆಭಿವೃದ್ದಿಗೆ ಪೂರಕ
    In (ರಾಜ್ಯ ) ಜಿಲ್ಲೆ
  • ಗಾನಕೋಗಿಲೆ ಎಸ್.ಜಾನಕಿ ನಿಧನದಿಂದ ಸಂಗೀತ ಲೋಕಕ್ಕೆ ನಷ್ಟ
    In (ರಾಜ್ಯ ) ಜಿಲ್ಲೆ
  • ಹಲಸಂಗಿ ಕ್ರಾಸ್ ಸಮೀಪ ವ್ಯಕ್ತಿಯ ಕೊಲೆ! :ಅಕ್ಕನ ಮೇಲೆ ಶಂಕೆ
    In (ರಾಜ್ಯ ) ಜಿಲ್ಲೆ
  • ಪಂಚ ಗ್ಯಾರಂಟಿ: ಬಡ ಕುಟುಂಬಗಳ ಬದುಕಿಗೆ ಆಶಾಕಿರಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.