ಉದಯರಶ್ಮಿ ದಿನಪತ್ರಿಕೆ
ಬಸವಕಲ್ಯಾಣ: ಅನುಭವ ಮಂಟಪ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಸವ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರ – ಪುಣೆ ಇದರ ವತಿಯಿಂದ ಬಸವಕಲ್ಯಾಣದಲ್ಲಿ ನಡೆದ ಸಮಾರಂಭದಲ್ಲಿ ಅಕ್ಕನ ಅರಿವು ಮತ್ತು ವಚನ ಅಧ್ಯಯನ ವೇದಿಕೆಯ ಸದಸ್ಯರ ಒಟ್ಟು ಐದು ಪುಸ್ತಕಗಳು ಬಿಡುಗಡೆಯಾದವು.
ಶರಣೆ ಸುಧಾ ಪಾಟೀಲ ಅವರ ಮೂರು ಪುಸ್ತಕಗಳು ಲೋಕಾರ್ಪಣೆಗೊಂಡವು. ಅದರಲ್ಲಿ ” ಶರಣರ ನೆನೆದರ ಸರಗಿಯ ಇಟ್ಟಂಗ” ಶರಣರ ಪರಿಚಯ ಮತ್ತು ವಚನ ವಿಶ್ಲೇಷಣೆ ಕೃತಿಯನ್ನು ಡಾ..ಬಾಬಾಸಾಹೇಬ ಗಡ್ಡೆ ಅವರು, “ಹೃದಯದ ಮಾತು” ಕವನ ಸಂಕಲನವನ್ನು ಡಾ.ಉಮಾಕಾಂತ ಶೇಟ್ಕರ ಅವರು, “ಚುಕ್ಕಿ ಹೇಳಿದ ಕಥೆ” ಕವನ ಸಂಕಲನವನ್ನು ಶರಣೆ ಗೌರಮ್ಮ ನಾಶಿ ಅವರು ಲೋಕಾರ್ಪಣೆಗೊಳಿಸಿದರು.
ಡಾ.ಶರಣಮ್ಮ ಗೊರೆಬಾಳ ಅವರ “ಮತ್ತೆ ನಕ್ಕಿತು ಭೂಮಿ” ಕವನ ಸಂಕಲನವನ್ನು ಡಾ.ವೀಣಾ ಎಲಿಗಾರ ಅವರು ಬಿಡುಗಡೆಗೊಳಿಸಿದರು. ಶರಣೆ ಬಸಮ್ಮ ಭರಮಶೆಟ್ಟಿ ಅವರ “ಬಾಡದಿರಲಿ ಸ್ನೇಹ “ಕವನ ಸಂಕಲನವನ್ನು ಡಾ.ಜಯಶ್ರೀ ಪಟ್ಟಣ ಮತ್ತು ಡಾ.ಶಶಿಕಾಂತ ಪಟ್ಟಣ ಅವರು ಲೋಕಾರ್ಪಣೆಗೊಳಿಸಿದರು.
ಡಾ.ಶಶಿಕಾಂತ ಪಟ್ಟಣ ಮೂವರೂ ಸಾಹಿತಿಗಳನ್ನು ಪರಿಚಯಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಅಕ್ಕನ ಅರಿವು ಬಳಗದ ಹಿರಿಯ ಸದಸ್ಯೆ ಪ್ರೊ.ಶಾರದಮ್ಮ ಪಾಟೀಲ, ಡಾ.ದಾನಮ್ಮ ಝಳಕಿ, ಡಾ.ಗೀತಾ ಡಿಗ್ಗೆ, ಡಾ.ಸುಧಾ ಕೌಜಗೇರಿ, ಡಾ.ಕಸ್ತೂರಿ ದಳವಾಯಿ, ಡಾ.ಬಸಮ್ಮ ಗಂಗನಳ್ಳಿ, ಡಾ.ಮೀನಾಕ್ಷಿ ಪಾಟೀಲ್, ಡಾ.ಸಂಗಮೇಶ ಕಲಹಾಳ ಮತ್ತು ಅಕ್ಕನ ಅರಿವು ಸದಸ್ಯರು ಭಾಗಿಯಾಗಿದ್ದರು.
ಗೌರವ ಸನ್ಮಾನ
ಇದೇ ಸಂದರ್ಭದಲ್ಲಿ ಡಾ.ಶಶಿಕಾಂತ ಪಟ್ಟಣ, ಡಾ.ಜಯಶ್ರೀ ಪಟ್ಟಣ, ಶರಣೆ ಜಯದೇವಿ ಯಾದಲಾಪುರೆ ಮತ್ತು ಶರಣೆ ಸ್ವರೂಪಾರಾಣಿ ನಾಗೂರೆ ಅವರು ಮೂವರು ಕೃತಿ ರಚನೆಕಾರರನ್ನು ಸನ್ಮಾನಿಸಿ ಗೌರವಿಸಿದರು.

