ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಇಲ್ಲಿನ ಹುಡ್ಕೋ ಗೇಟ್ ಬಳಿ ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಅವೈಜ್ಞಾನಿಕವಾದ ರೋಡ್ ಬ್ರೇಕರ್ ಅಳವಡಿಸಿದ ಪರಿಣಾಮ ವಾಹನಗಳ ವೇಗಕ್ಕೆ ಯಾವುದೇ ಕಡಿವಾಣ ಹಾಕಿದಂತಾಗಿರಲಿಲ್ಲ. ಅಪಘಾತಗಳು ಕಡಿಮೆಯಾಗಿರಲಿಲ್ಲ. ಈ ಬಗ್ಗೆ ಇಲ್ಲಿನ ನಗರಾಭಿವೃದ್ಧಿ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನಂದಿಕೇಶ್ವರಮಠ ಹೋರಾಟಗಾರರಾದ ನಾಗೇಂದ್ರ ಶಿವಶಿಂಪಿ ಮತ್ತು ರಫೀಕ ಬೀಳಿಗಿ “ಉದಯರಶ್ಮಿ” ಪತ್ರಿಕೆಗೆ ದೂರಿದ್ದರು. ಈ ಬಗ್ಗೆ ಪತ್ರಿಕೆ “ಅವೈಜ್ಮಾನಿಕ ರೋಡ್ ಬ್ರೆಕರ್ ಸರಿಪಡಿಸಲು ನಾಗರಿಕರ ಆಗ್ರಹ” ಶೀರ್ಷಿಕೆಯಡಿ ಸುದ್ದಿ ಬಿತ್ತರಿಸಿ ಅಧಿಕಾರಿಗಳ ಗಮನ ಸೆಳೆದಿತ್ತು.
ಸುದ್ದಿಗೆ ಎಚ್ಚೆತ್ತ ಅಧಿಕಾರಿಗಳು ಸೋಮವಾರ ರಾತ್ರಿ ಸರಿಯಾದ ಜಾಗೆಯಲ್ಲಿ ಹಂಪ್ ಅಳವಡಿಸಿದ್ದಾರೆ.
ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಹೋರಾಟಗಾರರು ’ಉದಯರಶ್ಮಿ’ ಪತ್ರಿಕೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

