Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಸವಣ್ಣನವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತ

ಬಸವ ತತ್ವ ಸಕಲ ಶರಣರ ವಚನಗಳ ಸಾರ :ಕುಲಕರ್ಣಿ

ಅಧಿಕಾರ ಯಾವಾಗಲೂ ಜನಪರವಾಗಿರಬೇಕು :ಶಾಸಕಮನಗೂಳಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮನೋಸ್ಥೈರ್ಯ ಬಳಸಿ ಗೆಲುವು ಸಾಧಿಸಿ ’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ ಮಾಲೆ)
ವಿಶೇಷ ಲೇಖನ

ಮನೋಸ್ಥೈರ್ಯ ಬಳಸಿ ಗೆಲುವು ಸಾಧಿಸಿ ’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ ಮಾಲೆ)

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಉಪನ್ಯಾಸಕರು, ಬೆಳಗಾವಿ, ಮೊ: ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ

ಇತ್ತೀಚಿನ ನಮ್ಮ ಧಾವಂತದ ಬದುಕು ಸೂತ್ರ ಹರಿದ ಪಟದಂತೆ ಎತ್ತೆತ್ತಲೋ ಸಾಗುತ್ತಿದೆ. ಅರ್ಥವನ್ನೇ ಕಳೆದುಕೊಳ್ಳುತ್ತಿದೆ. ಬದುಕು ಹಸನಾಗಬೇಕಾದರೆ ನಿರ್ಧಿಷ್ಟ ಗುರಿಯೊಂದು ಇರಲೇಬೇಕು. ಆ ಗುರಿ ಸಾಧಿಸಲು ನಿಶ್ಚಿತ ಯೋಜನೆಗಳು ಬೇಕು.. ಬಲವಾದ ಯೋಜನೆಗಳನ್ನು ಹಾಕಿಕೊಂಡು ಮನೋಬಲವೇ ಇಲ್ಲದಿದ್ದರೆ ಗುರಿಯ ಶಿಖರ ಹತ್ತುವುದು ಅಸಾಧ್ಯದ ಮಾತೇ ಸರಿ. ‘ಧೈರ್ಯವಾಗಿ ನೀನು ಒಂದು ಹೆಜ್ಜೆ ಇಟ್ಟರೆ ಯಶಸ್ಸು ಹತ್ತು ಹೆಜ್ಜೆ ಮುಂದೆ ಹಾಕುತ್ತದೆ.’ ಎಂಬುದು ಕವಿ ರವೀಂದ್ರನಾಥ ಟ್ಯಾಗೋರ್‌ರ ಅನುಭವದ ಮಾತು. ಇದನ್ನೇ ಸಂಸ್ಕೃತದಲ್ಲಿ “ಧೈರ್ಯಂ ಸರ್ವತ್ರ ಸಾಧನಂ” ಎಂದು ಹೇಳಿದ್ದಾರೆ. ದಿನವೂ ನಿರೀಕ್ಷಿತ ಗುರಿಯ ಎದೆಯ ಕದವ ತಟ್ಟಲೇಬೇಕು. ಬದಲಾದ ಕಾಲದಲ್ಲಿ ಗುರಿಯೊಂದಿಗೆ ಬೆಸೆಯಲು ಮಹತ್ವದ ಹೊಸ ಸೃಜನಶೀಲತೆಯ ಹೆಜ್ಜೆ ಹಾಕಲು ಆಗುತ್ತಿಲ್ಲ ಎಂದು ಎಷ್ಟೋ ಸಲ ಬೇಸರಿಸಿಕೊಳ್ಳುತ್ತೇವೆ. ಗುರಿ ಎನ್ನುವುದು ದೂರದಲ್ಲಿ ಮಿನುಗುವ ತಾರೆಯಂತೆ ಅದರತ್ತ ಚಿತ್ತಗೊಟ್ಟು ದೃಷ್ಟಿ ಹರಿಸಬೇಕು. ಮನೋಸ್ಥೈರ್ಯದ ಬೆಳಕು ಹೆಚ್ಚಾದಾಗ ಅಸ್ಪಷ್ಟವಾಗಿದ್ದ ದಾರಿ ನಿಖರವಾಗತೊಡುಗುತ್ತದೆ.


ರಾತ್ರೋರಾತ್ರಿ ಗುರಿ ತಲುಪಲು ಸಾಧ್ಯವಿಲ್ಲ. ಕಾಲಾವಕಾಶ ಬೇಕು. ಕಾಲಾನಂತರದ ಮನೋಸ್ಥೈರ್ಯದ ಕಾಣ್ಕೆಯಿಂದ ಗುರಿಯನ್ನು ಧ್ಯಾನಿಸಿದರೆ ಕಷ್ಟು ಪಟ್ಟು ಪ್ರಯತ್ನಿಸಿದರೆ ಸೋಲಿಗೆ ದಾರಿ ಇಲ್ಲದಂತಾಗುತ್ತದೆ. ದಿಕ್ಸೂಚಿಯಲ್ಲಿ ಮುಳ್ಳು ಸದಾ ಕಾಲ ಉತ್ತರ ದಿಕ್ಕು ತೋರಿಸುವಂತೆ ಮನಸ್ಸು ಸದಾ ಯಶಸ್ಸಿನ ಗುರಿಯತ್ತ ಚಲಿಸುತ್ತಿರಬೇಕು. ಕಠಿಣವೆನಿಸಿದ್ದನ್ನು ಸಲುಭಗೊಳಿಸುವ ಒಂದೇ ಒಂದು ಮಾರ್ಗೋಪಾಯವೆಂದರೆ ಮನೋಸ್ಥೈರ್ಯ. ‘ಅದು ನನ್ನಿಂದ ಸಾಧ್ಯವಿಲ್ಲ.’ ನಾನು ಮಾಡಲಾರೆ.’ ಎಂದು ಹಿಂಜರಿಯುವ ಮನಸ್ಸಿಗೆ ಅಚಲವಾದ ಶಕ್ತಿಯನ್ನೀಯುವುದೇ ಮನೋಸ್ಥೈರ್ಯ..ಗೆಲವು ಹಲವರ ಪಾಲಾಗಿದೆ. ವಿಜಯದ ಮಾಲೆ ಅವರ ಕೊರಳನ್ನಲಂಕರಿಸುತ್ತದೆ ಎಂದು ನಾವು ಎಷ್ಟೋ ಬಾರಿ ಕರಬುವುದುಂಟು. ಇಂಥ ಸಮಯದಲ್ಲಿ ಮನಸ್ಸನ್ನು ಕದಲದಂತೆ ಕಟ್ಟಿ ಹಾಕಿ ಮನೋಸ್ಥೈರ್ಯದತ್ತ ಹೆಜ್ಜೆ ಹಾಕಿದರೆ ಗೆಲುವು ನಮ್ಮನ್ನು ಹಿಂಬಾಲಿಸುತ್ತದೆ.
‘ಹಾರಲು ಬಯಸುವ ವ್ಯಕ್ತಿ ಮೊದಲು ನಿಲ್ಲಲು ನಡೆಯಲು ಹಾಗು ಓಡಲು ಕಲಿಯಬೇಕು.’ ಎನ್ನುವ ಫ್ರೆಡಿಕ್ ನೀತ್ಸೆ ಮಾತು ಜಯ ಒಂದೇ ಹಂತದಲ್ಲಿ ಲಭಿಸುವಂಥದ್ದಲ್ಲ ಎಂಬ ಸಂದೇಶವನ್ನು ಸಾರುತ್ತದೆ. ಯಶಸ್ಸಿನತ್ತ ಪಯಣ ಬೆಳೆಸಿದಾಗ ದುರ್ಭರ ಪರಿಸ್ಥಿತಿಯಲ್ಲಿ ಕ್ಷುಲ್ಲಕ ಮನಸ್ಸು ಹಲವು ನೆಪಗಳನ್ನು ಹುಡುಕಿ ಹೇಳುತ್ತದೆ. ಈ ಬಗ್ಗೆ ಕೊಂಚ ಯೋಚಿಸಿದರೂ ಸಾಕು, ಆತ್ಮವಿಮರ್ಶೆ ಮಾಡಿಕೊಂಡರೂ ಸಾಕು, ನಮ್ಮ ಮನಸ್ಸು ಬೇರೆಯವರ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ಮನೋಬಲದತ್ತ ಹೊರಳುತ್ತದೆ. ಮುಕ್ತ ಮನಸ್ಸನ್ನು ಹೇಗೆ ಬೇಕಾದರೂ ಬಾಗಿಸಬಹುದು ಎನ್ನುತ್ತಾರೆ ಬಲ್ಲವರು. ಎಲ್ಲವನ್ನೂ ಪರಾಮರ್ಶಿಸಿ ಸ್ವೀಕರಿಸುವ ಇಲ್ಲವೇ ನಿರಾಕರಿಸುವ ಗುಣ ಮುಕ್ತ ಮನಸ್ಸಿಗಿರುತ್ತದೆ. ಇಂಥ ಮನಸ್ಸು ಧೈರ್ಯವನ್ನು ತುಂಬಬಲ್ಲದು.
ಮನೋಸ್ಥೈರ್ಯವಿಲ್ಲದವರು ಜೀವನದಲ್ಲಿ ತಾವೂ ಮುಂದೆ ಬರುವುದಿಲ್ಲ, ಇತರರನ್ನೂ ಮುಂದಕ್ಕೆ ಬರಲು ಬಿಡುವುದಿಲ್ಲ. ಭಯ ಮನಸ್ಸಿನ ಆಶಕ್ತ ಭಾವ. ಇದು ಸಮಾಜದಲ್ಲೆಡೆ ಹರಡಿರುವ ಪಿಡುಗು. ಈ ಮಾನಸಿಕ ಭಯ ಬದುಕನ್ನೇ ಸರ್ವನಾಶಗೊಳಿಸಬಲ್ಲದು. ಮನೋಸ್ಥೈರ್ಯ ಪ್ರಗತಿ, ಮನಃಶಾಂತಿ, ಆನಂದ ಆರೋಗ್ಯವನ್ನು ಸ್ವಾಗತಿಸುತ್ತದೆ. ಸಾಧಿಸಬೇಕೆಂದಿದ್ದಿರಾ? ಹಾಗಾದರೆ ಮನೋಸ್ಥೈರ್ಯದಿಂದ ಮುಂದುವರೆಯಿರಿ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಸವಣ್ಣನವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತ

ಬಸವ ತತ್ವ ಸಕಲ ಶರಣರ ವಚನಗಳ ಸಾರ :ಕುಲಕರ್ಣಿ

ಅಧಿಕಾರ ಯಾವಾಗಲೂ ಜನಪರವಾಗಿರಬೇಕು :ಶಾಸಕಮನಗೂಳಿ

ಬಸವಣ್ಣರ ಅನುಭವ ಮಂಟಪ ಪರಿಕಲ್ಪನೆಗಳೇ ಸಂವಿಧಾನಕ್ಕೆ ತಳಹದಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಸವಣ್ಣನವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತ
    In (ರಾಜ್ಯ ) ಜಿಲ್ಲೆ
  • ಬಸವ ತತ್ವ ಸಕಲ ಶರಣರ ವಚನಗಳ ಸಾರ :ಕುಲಕರ್ಣಿ
    In (ರಾಜ್ಯ ) ಜಿಲ್ಲೆ
  • ಅಧಿಕಾರ ಯಾವಾಗಲೂ ಜನಪರವಾಗಿರಬೇಕು :ಶಾಸಕಮನಗೂಳಿ
    In (ರಾಜ್ಯ ) ಜಿಲ್ಲೆ
  • ಬಸವಣ್ಣರ ಅನುಭವ ಮಂಟಪ ಪರಿಕಲ್ಪನೆಗಳೇ ಸಂವಿಧಾನಕ್ಕೆ ತಳಹದಿ
    In (ರಾಜ್ಯ ) ಜಿಲ್ಲೆ
  • ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಚಿಂತಕ ಬಸವಣ್ಣ
    In (ರಾಜ್ಯ ) ಜಿಲ್ಲೆ
  • ಬಸವಣ್ಣ ೧೨ನೇ ಶತಮಾನದ ಕ್ರಾಂತಿಯೋಗಿ :ಬಸವರೆಡ್ಡಿ
    In (ರಾಜ್ಯ ) ಜಿಲ್ಲೆ
  • ಬಸವ ಜಯಂತಿ: ಸಚಿವರಿಂದ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ
    In (ರಾಜ್ಯ ) ಜಿಲ್ಲೆ
  • ಇಂದು ಅಕ್ಕಮಹಾದೇವಿ ಮಹಿಳಾ ವಿವಿ ಘಟಿಕೋತ್ಸವ
    In (ರಾಜ್ಯ ) ಜಿಲ್ಲೆ
  • ದಯವೇ ಧರ್ಮದ ಮೂಲ ಸಂದೇಶ ಸಾರಿದ ಬಸವಣ್ಣ :ಕುಂಬಾರ
    In (ರಾಜ್ಯ ) ಜಿಲ್ಲೆ
  • ಮಹಾನ್ ಮಾನವತಾವಾದಿ ಬಸವಣ್ಣನವರು :ಇಂಗಳೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.