ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭಕ್ತರಿಗಾಗಿ ಸದ್ಗುರು ವಿರೇಶ್ವರ ಶಿವಯೋಗಿಗಳು ತಮ್ಮ ಭಾಗದಲ್ಲಿ ಸಂಚರಿಸಿ ಸಾಮಾಜಿಕ ಪರಿವರ್ತನೆ ಮಾಡಿದ್ದಾರೆ. ಭಕ್ತರ ಏಳ್ಗೆಯೇ ಅವರ ಮುಖ್ಯ ಧ್ಯೇಯವಾಗಿತ್ತು. ಅವರ ತತ್ವಗಳು ಸರ್ವಕಾಲಿಕ ಸತ್ಯವಾಗಿವೆ ಎಂದು
ತಾಳಿಕೋಟಿ – ಹಿರೂರ ಶ್ರೀ ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಪೀಠಾಪತಿ ಪ್ರವಚನಕಾರ ಜಯ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಸದ್ಗುರು ವಿರೇಶ್ವರ ಮಹಾಶಿವಯೋಗಿಗಳ 84 ನೇ ಪುಣ್ಯಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ 25 ನೇ ವರ್ಷದ ಪುರಾಣ – ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ಸದ್ಗುರು ವಿರೇಶ್ವರ ಮಹಾಶಿವಯೋಗಿಗಳ ಪುರಾಣ ಗ್ರಂಥ ಹಾಗೂ ಜೀವನ ಚರಿತ್ರೆ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಸತ್ವುರುಷರ ಜೀವನದ ಸಂದೇಶಗಳು ಆಲಿಸುವದರಿಂದ ಹಾಗೂ ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸುಂದರ ಜೀವನ ನಡೆಸಬೇಕು ಎಂದರು.
ಕೊಣ್ಣೂರು ಮಠದ ಡಾ.ವಿಶ್ವಪ್ರಕಾಶ ಶಿವಾಚಾರ್ಯರು ಮಾತನಾಡಿ, ರಾಮಾಯಣ ಮಹಾಕಾವ್ಯ ರಚಿಸಿದ ವಾಲ್ಮೀಕಿಯವರ ಜೀವನ ಸಂದೇಶಗಳ ಮೌಲ್ಯಗಳು ಮೂಲಕ ಧರ್ಮದ ದಾರಿಯಲ್ಲಿ ನಡೆಯುವ ಸತ್ಸಂಗದಿಂದ ಆದ್ಯಾತ್ಮೀಕ ಚಿಂತನ ಮಂಥನದಲ್ಲಿ ನಿರಂತರವಾಗಿ ಭಾಗವಹಿಸಿ ಗುರುವಿನ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.
ಕನ್ನೊಳ್ಳಿ ಹಿರೇಮಠದ ಸಿದ್ಧಲಿಂಗ ಶಿವಾರ್ಚಾರರು ಮಾತನಾಡಿ, ಸದ್ಗುರು ವಿರೇಶ್ವರ ಶಿವಯೋಗಿಗಳ ವಾಹಿಣಿ ಆಲಿಸುವದರಿಂದ ಜೀವನ ಪಾವನವಾಗುತ್ತದೆ ಎಂದರು.
ಮಲಘಾಣ ಜಡೆಶಾಂತಲಿಂಗೇಶ್ವರ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು.
ಗ್ರಾಮದ ಹಿರಿಯರಾದ ದೇವಿಂದ್ರಪ್ಪಗೌಡ ಬಿರಾದಾರ ಹಾಗೂ ಕುಮಾರ ಚಂದ್ರಕಾಂತ ಬಿರಾದಾರ ಅವರಿಂದ ರಚಿತಗೊಂಡ ಸದ್ಗುರು ವಿರೇಶ್ವರ ಶಿವಯೋಗಿಗಳ ಪುರಾಣ ಹಾಗೂ ಜೀವನ ಚರಿತ್ರೆ ಲೋಕರ್ಪಣೆ ಮಾಡಿದರು
ಶಂಕ್ರಯ್ಯ ಹಿರೇಮಠ, ಬಸಯ್ಯ ಮಠಪತಿ ವೇದಿಕೆ ಮೇಲೆ ಇದ್ದರು.
ಶಾಂತಯ್ಯ ಮಠಪತಿ ಪುರಾಣ ಗ್ರಂಥಕ್ಕೆ ಪೂಜೆ ಮಾಡಿದರು. ಗುರುನಾಥ ಮೈಂದರಿಗಿ ಬಸವಣ್ಣ ವೇಷಧಾರಿಯಾಗಿದ್ದರು.
ಕೇರೂಟಗಿ ಹಿರೇಮಠದ
ಸಂಗೀತ ಶಿಕ್ಷಕ ರೇಣುಕಾಚಾರ್ಯ ಗವಾಯಿಗಳು ಹಿರೇಮಠ, ಮಾಂತೇಶ ಕಾಳಗಿ ಜೇವರ್ಗಿ ಸಂಗೀತ ಸೇವೆ ನಡೆಸಿದರು.
ಎಂ.ಡಿ.ಪಾಟೀಲ ಮಾತನಾಡಿದರು.
ಪ್ರಕಾಶ ತುಪ್ಪದ ನಿರೂಪಿಸಿ, ವಂದಿಸಿದರು. ಸಾಹಿತಿ ಚಂದ್ರಕಾಂತ ಬಿರಾದಾರ ಸ್ವಾಗತಿಸಿದರು.

