ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸಮಾಜದಲ್ಲಿ ಒಬ್ಬ ಬೇಟೆಗಾರ ಬದಲಾಗಿ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಮಾದರಿ ವ್ಯಕ್ತಿ ರಾಮನಾಮ ಜಪದಿಂದ ರಾಮಾಯಣದಂತಹ ಮಹಾಕಾವ್ಯವನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಮಹನೀಯರಲ್ಲಿ ಮಹರ್ಷಿ ವಾಲ್ಮೀಕಿಯವರಾಗಿದ್ದಾರೆ ಎಂದು ತಹಶೀಲ್ದಾರ ಎಸ್ ಎಸ್ ನಾಯಕಲಮಠ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲ್ಲೂಕಾ ಆಡಳಿತ ಹಾಗೂ ವಾಲ್ಮೀಕಿ ಸಮುದಾಯದ ಸಹಭಾಗಿತ್ವದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಮಯದಲ್ಲಿ ಮಾತನಾಡಿದರು.
ರಾಮಾಯಣ ಎಂದರೆ ರಾಮನಲ್ಲಿರುವ ಶ್ರೇಷ್ಠ ಮೌಲ್ಯಗಳ ಪ್ರತಿಪಾದನೆಯ ಗ್ರಂಥವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮನು ಪತ್ತಾರ ಮಾತನಾಡಿದರು.
ಮಂಜುನಾಥ ಅರೇಶಂಕರ ಮಾತನಾಡಿ, ವಾಲ್ಮೀಕಿ ಸಮಾಜ ಗುರುಭಕ್ತಿಗೆ ಹೆಬ್ಬೆರಳು, ದೇಶಭಕ್ತಿಗೆ ಪ್ರಾಣ, ದೈವಭಕ್ತಿಗೆ ಕಣ್ಣು, ಧರ್ಮ ಪತ್ನಿಯರಿಗೆ ರಾಮಾಯಣ ಗ್ರಂಥ ನೀಡಿದ ಸಮಾಜ ಇದಾಗಿದೆ. ಮಹರ್ಷಿ ವಾಲ್ಮೀಕಿ ಹಿಂದೂ ಸಮಾಜ ನೆಲೆಯಾಗಿ ನಿಂತಿರುವ ಈ ಗ್ರಂಥ ನೀಡಿದ ನಮ್ಮ ಸಮಾಜದ ಕೊಡುಗೆ ಎಂದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಅಧ್ಯಕ್ಷ ಭೀಮಸಿ ದಳವಾಯಿ, ತೆಲಗಿ ಗ್ರಾಂ.ಪಂ.ಅಧ್ಯಕ್ಷ ಅರವಿಂದ ಕೊಪ್ಪದ, ಪಶುವೈದ್ಯಾಧಿಕಾರಿ ಡಾ.ವೆಂಕಟೇಶ ವಾಲಿಕಾರ, ತಾಲ್ಲೂಕಾ ಪಂಚಾಯಿತಿ ಲೆಕ್ಕಾಧಿಕಾರಿ ಆರ್ ಎಸ್ ಪಾಟೀಲ, ಶಿಶು ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ಪೂಜಾರಿ, ಗೂಳಪ್ಪ ವಾಲಿಕಾರ, ಯಲ್ಲಪ್ಪ ಕಣ್ಣಮುಚ್ಚನಾಳ, ಹಣಮಂತ ನಾಯಕ, ಗುರು ಅಂಗಡಿಗೇರಿ, ಬಿ.ಎಚ್.ದಳವಾಯಿ ರಾಮಚಂದ್ರ ತಳವಾರ ಮಲ್ಲಿಕಾರ್ಜುನ ನಾಯ್ಕೋಡಿ ಮಲಕು ಆಕಳವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

