ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಯುದ್ದದಲ್ಲಿ ಗೆಲುವು ಸಾಧಿಸಿದ ೨೦೦ ನೇ ವಿಜಯೋತ್ಸವದ ಅಂಗವಾಗಿ ರಾಜ್ಯದ ಎಲ್ಲೆಡೆ ಸಂಚರಿಸುತ್ತಿರುವ ವಿಜಯ ಜ್ಯೋತಿ ರಥಯಾತ್ರೆಯನ್ನು ಮಂಗಳವಾರ ತಾಲ್ಲೂಕಾ ಆಡಳಿತ ದಿಂದ ಸ್ವಾಗತಿಸಿ ಮೆರವಣಿಗೆ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡ ಐತಿಹಾಸಿಕ ಕಿತ್ತೂರು ಉತ್ಸವ -೨೦೨೪ ರ ೨೦೦ ನೇ ವಿಜಯೋತ್ಸವದ ವಿಜಯ ಜ್ಯೋತಿ ರಥ ಯಾತ್ರೆಯು ತಾಲೂಕಿನ ಹೊನಗನಹಳ್ಳಿ ಮಂಗಮ್ಮದೇವಿ ದೇವಸ್ಥಾನದ ಬಳಿ ತಹಶೀಲ್ದಾರ ಎಸ್ ಎಸ್ ನಾಯಕಲಮಠ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ ಪುತ್ಥಳಿಗೆ ಪುಷ್ಪಹಾರ ಹಾಕಿ ಪೂಜೆ ಸಲ್ಲಿಸಿ ಭವ್ಯವಾಗಿ ಸ್ವಾಗತವನ್ನು ಕೋರಿ ವಿಜಯ ಜ್ಯೋತಿ ಯಾತ್ರಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಂತರ ತಾಲೂಕಿನ ಗುರುಹಿರಿಯರು ಮುಖಂಡರು ವೀರಮಾತೆ ಕಿತ್ತೂರು ಚೆನ್ನಮ್ಮಳ ರಥಕ್ಕೆ ಮಾಲಾರ್ಪಣೆ ಮಾಡಿ ,ಪೂಜೆ ಸಲ್ಲಿಸಿ ಜಯ ಘೋಷ ಹಾಕಿದರು. ನಂತರ ೨೧೮ ರಾಷ್ಟ್ರೀಯ ಹೆದ್ದಾರಿ ಮೂಲಕ ವಿಜಯ ಜ್ಯೋತಿ ಯಾತ್ರೆ ರಥವು ಮಲಘಾಣ ಕ್ರಾಸ್ ಬಳಿ ನಿರ್ಮಿಸಿದ ರಾಣಿ ಚೆನ್ನಮ್ಮ ಸರ್ಕಲ್ ಗೆ ಆಗಮಿಸಿತು. ಮಲಘಾಣ ಗ್ರಾಮದ ಸಾರ್ವಜನಿಕರು ರಥಕ್ಕೆ ಭವ್ಯ ಸ್ವಾಗತವನ್ನು ಕೋರಿ ಪೂಜೆ ಸಲ್ಲಿಸಿದರು.
ರೋಣಿಹಾಳ ಗ್ರಾಮದಲ್ಲಿ ವಿಜಯ ಜ್ಯೋತಿ ಯಾತ್ರೆಯ ರಥವನ್ನು ಭವ್ಯವಾಗಿ ಸ್ವಾಗತಿಸಿ ಪೂಜೆ ಸಲ್ಲಿಸಿದರು.
ನಂತರ ವಿಜಯ ಜ್ಯೋತಿ ರಥವು ಕೊಲ್ಹಾರ ಯು.ಕೆ.ಪಿ ಮಾರ್ಗವಾಗಿ ಬೀಳಗಿಗೆ ತೆರಳಿತು.
ಕೊಲ್ಹಾರ ತಹಸೀಲ್ದಾರ ಎಸ್.ಎಸ್ .ನಾಯಕಲ್ ಮಠರವರು ಬೀಳಗಿ ತಹಸೀಲ್ದಾರರಿಗೆ ರಥವನ್ನು ಬೀಳ್ಕೊಟ್ಟರು.
ಈ ವೇಳೆ ಉಪ ತಹಸೀಲ್ದಾರ ಎನ್.ಕೆ. ನದಾಫ್, ಆಹಾರ ನಿರೀಕ್ಷಕ ಎಮ್. ಎಸ್.ಗುತ್ತರಗಿ, ಮುಖಂಡರಾದ ಸಾಹೇಬಗೌಡ ಪಾಟೀಲ, ಚನ್ನಪ್ಪಗೌಡ ಬಿರಾದಾರ, ಶಂಕರಗೌಡ ಮೇಲಿನಮನಿ, ಮಲ್ಲು ದೇಸಾಯಿ, ಬಸವರಾಜ ಸಿದ್ದಾಪುರ, ಎಸ್.ಆರ್.ಪಾಟೀಲ, ಸಿ.ಎಸ್.ಬಿರಾದಾರ, ನಂದು ಕುಬಕಡ್ಡಿ, ಶ್ರೀಶೈಲ ನಾಗೋಡ, ಗುರು ವಿಜಾಪೂರ, ಮುದಕಪ್ಪ ಕೆಂಗನಾಳ, ಸಚಿನ್ ದನ್ಯಾಳ, ಶಿವಲಿಂಗ ಧೂಪದ, ರಮೇಶ ಉಳ್ಳಾಗಡ್ಡಿ, ಶ್ರೀಶೈಲಗೌಡ ಬಿರಾದಾರ, ಗುರುಲಿಂಗ ಬಿರಾದಾರ, ಬಸವರಾಜ ಹಾದಿಮನಿ, ಭೀಮನಗೌಡ ಮೇಲಿನಮನಿ, ಸಂಗನಗೌಡ ಪಾಟೀಲ, ಸಂತೋಷ ಗಣಾಚಾರಿ, ಸಂಗಮೇಶ ಬಿಜಾಪುರ, ಸಂಗಮೇಶ ಚಿಮ್ಮಲಗಿ, ಸಂತೋಷ ಚನಗೊಂಡ, ಜಗದೀಶ ಸಾಲಳ್ಳಿ, ಸಂಗಮೇಶ ಕುಬಕಡ್ಡಿ, ಗೌರೀಶ ಪಾಟೀಲ, ಶಂಕರ ದೇಸಾಯಿ, ಸಂಗಮೇಶ ಬಗಲಿ, ಯುವಕರಾದ ನಿಲೇಶ ಕುರುಹಿನಶೆಟ್ಟಿ, ಮಲ್ಲು ಬಿರಾದಾರ, ಬಸವರಾಜ ರೂಢಗಿ, ವಿನೋದ ದೇಸಾಯಿ ಬೀಳಗಿ, ಶಿವಶಂಕರ ದೇಸಾಯಿ, ನಿಂಗೊಂಡೆಪ್ಪ ರೂಢಗಿ, ದೇಸಾಯಿ ಬೀಳಗಿ ಸೇರಿದಂತೆ ತಹಸೀಲ್ದಾರ ಕಾರ್ಯಾಲಯದ ಸಿಬ್ಬಂದಿ ವರ್ಗದವರು ಹಾಗೂ ನಾಗರಿಕರು ಭಾಗವಹಿಸಿದ್ದರು.

