ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಾಡಿನಾದ್ಯಂತ ದಸರಾ ಹಬ್ಬವೂ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ ಎಂದು ಪಿಎಸ್ಐ ಆರೀಫ್ ಮುಷಾಪುರಿ ಹೇಳಿದರು,
ಪಟ್ಟಣದ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಆಯುಧ ಪೂಜೆ ಜರುಗಿಸಿ ಮಾತನಾಡಿದ ಅವರು, ನವರಾತ್ರಿ ಹಬ್ಬದ ೯ನೆಯ ದಿನದಂದು ಆಯುಧಗಳಿಗೆ ಪ್ರಜೆ ಮತ್ತು ಗೌರವವನ್ನು ಸಲ್ಲಿಸುವುದಕ್ಕೆ ಆಯುಧ ಪೂಜೆಯನ್ನು ನೇರವೇರಿಸಲಾಗಿತ್ತದೆ ಎಂದು ಹೇಳಿದರು.
ಯಾವಾಗಲೂ ಜನಜಂಗುಳಿ, ಕೇಸ್, ತಕರಾರು ಎಂದಿರುವ ಪೊಲೀಸ್ ಠಾಣೆ ಬನ್ನಿ, ಬಂಗಾರದ ಕಡ್ಡಿ, ಬಲೂನ್, ಮಾಲೆ ಸೇರಿದಂತೆ ವಿವಿಧ ಅಲಂಕಾರಗಳಿಂದ ಕಂಗೊಳಿಸಿತು.
ಇದೇ ಸಂದರ್ಭದಲ್ಲಿ ವಾಹನ, ಶಸ್ತಾçಸ್ತç, ಕೈಕೋಳ, ಗಣಕಯಂತ್ರ ಹೀಗೆ ಠಾಣೆಯಲ್ಲಿರುವ ಆಯುಧಗಳಿಗೆ ಸಿಪಿಐ ನಾನಾಗೌಡ ಪೊಲೀಸಪಾಟೀಲ, ಪಿಎಸ್ಐ ಆರೀಫ್ ಮುಷಾಪುರಿ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಸಿಪಿಐ, ಪಿಎಸ್ಐ ಸಿಬ್ಬಂದಿಗಳು ಕುಟುಂಬವು ಸಹ ಭಾಗವಹಿಸಿದ್ದು ವಿಶೇಷವಾಗಿತ್ತು. ಸುರೇಶ ಕೊಂಡಿ, ಗೊಲ್ಲಾಳ ಈಜೇರಿ, ಪರಶುರಾಮ ಹಂಡರಗಲ್ಲ, ಪ್ರಭುಗೌಡ, ಶೈಲಶ್ರೀ ನ್ಯಾಮಣ್ಣವರ, ಬಸವರಾಜ ಪಟೇದ ಸೇರಿದಂತೆ ಅನೇಕರಿದ್ದರು.

