ಉದಯರಶ್ಮಿ ದಿನಪತ್ರಿಕೆ
ಇಂಡಿ: ಧರ್ಮ ರಕ್ಷಿಸಿದವರನ್ನು ಧರ್ಮವೇ ರಕ್ಷಿಸುತ್ತದೆ. ಧರ್ಮ ಜಾಗೃತಿ ಕಾರ್ಯ ಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ನಾದ ಗ್ರಾಮದ ಶಿವಾನಂದ ಶಿವಾಚಾರ್ಯರರು ಹೇಳಿದರು.
ತಾಲೂಕಿನ ನಾದ ಕೆಡಿ ಗ್ರಾಮದ ಕನ್ನಲಿಂಗೇಶ್ವರ ದೇವಸ್ಥಾನದಲ್ಲಿ ಕನ್ನಲಿಂಗೇಶ್ವರ ಟ್ರಸ್ಟನಿಂದ ನಡೆದ ನವರಾತ್ರಿ ನಿಮಿತ್ಯ ನಡೆದ ಧಾರ್ಮಿಕ ಕಾರ್ಯಕ್ರಮ ಮತ್ತು ಸಂತ ಬಾಳು ಮಾಮಾ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರಲ್ಲಿ ಧರ್ಮದ ಬಗ್ಗೆ ಅಭಿಮಾನ, ಪ್ರೀತಿ ಇರಬೇಕು,ಈ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ನಾದ ಗ್ರಾಮದ ಸಾವಯುಕ ಕೃಷಿಕ ಮತ್ತು ರಾಜ್ಯ ಪ್ರಶಸ್ತಿ ವಿಜೇತ ರೈತ ಎಸ್.ಟಿ.ಪಾಟೀಲ ಮಾತನಾಡಿ, ಧರ್ಮೋ ರಕ್ಷಿತಿ ರಕ್ಷಿತಾ ದರ್ಮ ಯಾರ ಸ್ವತ್ತಲ್ಲ. ಧರ್ಮ ಎಂದರೆ ಯಾರ ಮನಸ್ಸು ನೋವಿಸದೇ ಇರುವದು ಎಂದರು.
ಜಮಖಂಡಿಯ ಮಲ್ಲಿಕಾರ್ಜುನ ಶಾಸ್ತ್ರಿಗಳು ಸಂತ ಬಾಳು ಮಾಮಾರವರ ಜೀವನ ಮತ್ತು ಪವಾಡಗಳ ಕುರಿತು ಮಾತನಾಡಿದರು.
ಗೋಳಸಾರದ ಪುಂಡಲಿಂಗ ಶಿವಯೋಗಿಗಳ ಸಾನಿಧ್ಯ, ಬಸವರಾಜ ಪಾಟೀಲ,ಸದ್ಗುರು ಮಲ್ಲಿಕಾರ್ಜುನ ಶಾಸ್ತ್ರಿಗಳು, ಶೇಖರ ಕುಮಾರ ಬೆಂಗೂರು, ಗೊಲ್ಲಾಳಪ್ಪಗೌಡಪಾಟೀಲ, ಬಿ.ಜಿ.ಲಾಳಸಂಗಿ, ಇಶ್ವರಯ್ಯ ಹಿರೇಮಠ ವೇದಿಕೆಯ ಮೇಲಿದ್ದರು.
ಗ್ರಾಮದ ರಾಮಚಂದ್ರಗೌಡ ಬಿರಾದಾರ, ರವಿಕಿರಣ ಕೆರುಟಗಿ,ಎಸ್.ಪಿ.ತೋಂಟಾಪುರ ಮಾತನಾಡಿದರು.
ಮೋನಪ್ಪ ತಾವರಖೇಡ, ಕನ್ನಪ್ಪ ಬಿರಾದಾರ, ವಿಠ್ಠಲ ಡೋಣಿ, ಪುಂಡಲೀಕ ಜಡಿಮನಿ, ಭಾನಪ್ಪಗೌಡ ಪಾಟೀಲ, ಎಸ್.ಪಿ.ತೋಂಟಾಪುರ,ಸಂತೋಷ ಘಡೇಕರ, ಅಮಸಿದ್ಧ ಮಾರಾಯಗೋಳ ಮತ್ತಿತರಿದ್ದರು.

